ಸೋಮವಾರ, ಮಾರ್ಚ್ 3, 2008

'ಬೆಂದ'ಕಾಳೂರಿನ ಸ್ವಗತ

ಮಾತು

ಕಡಿಮೆ ಮಾಡು





ಕಂಪ್ಯೂಟರ್ರು ಕುಟ್ಟುತ್ತಾ


ಕುಟ್ಟುತ್ತಾ ವೈರಸ್ಸು

ಶಾಪಿಂಗು ಮಾಲುಗಳಲಿ

ಬಿಕರಿ ಎಂಟಾಣೆಗೆ

ತಪ್ಪಿದರೆ ಒಂದೂವರೆಗೆ





ಫುಟ್ಪಾತು ರಾತ್ರಿಗಳಲಿ


ನಗುವ ಎದೆ ತೆರೆದ ಸುಂದ್ರಿ

ಟಾಕೀಸಿನ ಮೂರಿ ಟಾಯ್ಲೆಟ್ಟು

ಮಾತು ಮಾತಿಗೂ ಚೌಕಾಸಿ'

ಆತನೊಬ್ಬ ಬಿಕ್ನಾಸಿ'

ಗೊಣಗುವ ಹಣ್ಣಿನ ಹುಡುಗಿ

ಇಲ್ಲ ಟು ಲೆಟ್ ಬೋರ್ಡ್

ಮನೆ ಮುಂದೆ ಮಾತ್ರ

'ನಾಯಿ ಇದೆ ಎಚ್ಚರಿಕೆ'!!





ಸಿಟಿ ಬಸ್ಸಲ್ಲಿ ಕಾಲು ತಾಕಿದ್ರೆ


ನಿನ್ನಮ್ಮನ್........ ಕಾಣಲ್ವಾ ಕಣ್ಣು

ಮುಂದಿನ ಸೀಟಲ್ಲಿ

ಹ್ಯಾರಿಪಾಟರ್ ಓದೋ ಕಾರ್ಮಲ್ ಪೆಣ್ಣು!!

ಟೈಮ್ಸ್ ನೋಡಿದರೆ

'ಸಿಟಿ ಬೆಳೆಯುತ್ತಿದೆ,

ನಾರಾಯಣ ಮೂರ್ತಿ ಗರಂ,

ಗೌಡ ಖತಂ,

ಭೂಲ್ ಭುಲಯ್ಯಾ- ನಾಟ್ ಎ ವರ್ತಿ

ಟು ವಾಚ್-ನಾನ್`ಸೆನ್ಸ್'!!

ಕಾರಲ್ಲಿ ಕೂತರೆ

ಎಫೆಮ್ಮು-ಸಖತ್ ಹಾಟ್ ಮಗಾ!





ಅದಕ್ಕೇ ಹೇಳಿದ್ದು


ಮಾತು ಕಡಿಮೆ ಮಾಡು

ಕಾಮೆಂಟ್‌ಗಳಿಲ್ಲ: