ಸೋಮವಾರ, ಫೆಬ್ರವರಿ 25, 2008

ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆ!


ಕುಂಟಿನಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಗತಿಹಳ್ಳಿ ಯುವಕರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದು ಹೀಗೆ:


  • ಸಣ್ಣ ಊರುಗಳಲ್ಲಿ alert ಆಗಿ ಇಡಲು ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಬೇಕೇ ಬೇಕು. ಇಂತಹ ಕಾರ್ಯಕ್ರಮಗಳಿಂದ ನಿರಾಕಾರವಾಗಿ ಬೆಳೆಯಲು ಸಾಧ್ಯ. ಇವತ್ತಿನ ಮಕ್ಕಳ ಬಗ್ಗೆ ತೀರಾ ನಿರಾಶಾದಾಯಕವಾಗಿ ಆಲೋಚಿಸುವುದು ಬೇಡ. ಹೊಸ ತಲೆಮಾರಿನ ಹುಡುಗರ ಅನ್ವೇಷಣೆಗಳೇ ಬಹಳ ಇವೆ.

  • ನನ್ನ ಮಗಳು ಒಂದು ಸಾರಿ ನನ್ಹತ್ರ ಹೇಳಿದ್ದಳು-" sky is suffocating ". ನಮಗೆಲ್ಲಾ ನಮ್ಮ ಸುತ್ತಲಿನ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಆದರೆ ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆಯಂತೆ. ಆಕಾಶದ ಆಚೆಗೂ ಹೊಸದನ್ನು ಹುಡುಕುವ ಅವರದ್ದು ಕಲ್ಪನಾ ಚಾವ್ಲಾ ಜಾತಿ.

  • ನಾಲ್ಕೋ ಐದು ಸಾಲಿನ ಎಸ್ಎಂಎಸ್ಗಳಲ್ಲೇ ಇಂದು ಯುವ ಜನಾಂಗದ ಮಹಾಕಾವ್ಯಗಳು ವಿನಿಮಯ ಆಗುತ್ತಿದೆ. ಅವರ ಆ ವೇಗವನ್ನು ಉಪಯೋಗಿಸಿಕೊಂಡು ನಮ್ಮ ಸಾಂಸ್ಕೃತಿಕ- ಸಾಹಿತ್ಯಿಕ ವಿಚಾರಗಳನ್ನು ಉಳಿಸುವತ್ತ ಆಲೋಚಿಸಬೇಕು.

  • ಇವತ್ತಿನ ಮಕ್ಕಳ ವೇಗವನ್ನು ಕಂಡರೆ ಅಚ್ಚರಿಯಾಗುತ್ತದೆ. ಬುದ್ಧ ಹುಟ್ಟಿದಲ್ಲಿಂದಲೇ ಯಾಕೆ ಪ್ರಾರಂಭಿಸಬೇಕು? ನಾವು ಬುದ್ಧನ ಕೊನೆಯಿಂದಲೇ ಆರಂಭ ಮಾಡೋಣ ಎನ್ನುವ ಧಾಟಿ ಅವರದು. ಆದ್ದರಿಂದ ಆ ವೇಗದ ಸಮರ್ಪಕ ಬಳಕೆಯಾಗಬೇಕು ಅಷ್ಟೇ.

ಕಾಮೆಂಟ್‌ಗಳಿಲ್ಲ: