ಗುರುವಾರ, ಜೂನ್ 19, 2008

ಯುವರ್ ಆನರ್....


ಸಿಎಸ್ಪಿ ಮತ್ತೆ ಕಿರುತೆರೆಯ ಕಟಕಟೆಗೆ ಬಂದು ನಿಂತಿದ್ದಾರೆ. ಇನ್ನೇನಿದ್ದರೂ ಅವ್ರ ವಾದ ಕೇಳೋದಷ್ಟೇ ನಮ್ಮ ಕೆಲಸ. ಅವ್ರಿಗಂತೂ "ಮ"ಕಾರದ ಬಗ್ಗೆ ಮರೆಯದ ಮಮಕಾರ. ಅದಕ್ಕವರು ಈ ಸಲ ಎರಡೆರಡು ಬಾರಿ "ಮುಕ್ತ..ಮುಕ್ತ" ಎನ್ನುತ್ತಿದ್ದಾರೆ.


ಮಧ್ಯಮ ವರ್ಗದ ಬವಣೆಯ ಬದುಕು, ಸಂಘರ್ಷ ಮತ್ತೆ ತೆರೆದುಕೊಂಡಿದೆ. ಒಂದರ್ಥದಲ್ಲಿ ಇದು ನಮಗೆಲ್ಲಾ ಖುಷಿಯ ವಿಷಯ, ಮೈ ಲಾರ್ಡ್ . ಒಂದು ಕುಟುಂಬವನ್ನು ಮೂಲವಾಗಿಟ್ಟುಕೊಂಡು ವ್ಯವಸ್ಥೆಯೊಳಗೆ ಇಣುಕಿ ನೋಡುವ ಟಿಎನ್ಎಸ್ ಒಳನೋಟ ನಮ್ಮನ್ನೆಲ್ಲಾ ಚಿಂತನೆಗೆ ಹಚ್ಚುತ್ತದೆ. ಮಾಯಾಮೃಗ, ಮನ್ವಂತರ, ಮುಕ್ತ ಇದಕ್ಕೆ ಸಾಕ್ಷಿ.

"ಮುಕ್ತ"ದಲ್ಲಿ ಅವ್ರ ಪದ್ಯದ ತೆರಪಿಯನ್ನು ಯಾರಾದರೂ ಮರೆಯುವುದುಂಟಾ, ಯುವರ್ ಆನರ್. ಯಾವುದೇ ಕೋರ್ಟ್ ಸೀನ್ ಬರಲಿ, ಅಲ್ಲೊಂದು ಚೆಂದದ ಕನ್ನಡ ಪದ್ಯದ ಸಾಲು ಇರಲೇಬೇಕು. ಇದರಿಂದಾಗಿ ಕೆಲವಾರು ಕವಿತೆಗಳು ಜನಮನ ಸೇರಿದವು. ಇದನ್ನೆಲ್ಲಾ ಸ್ವಾಗತಿಸುತ್ತಾ ನನ್ನದೊಂದು ತಕರಾರು, ಯುವರ್ ಆನರ್.

ಪಾಯಿಂಟ್ ನಂ1.

ಟಿಎನ್ಎಸ್ ಧಾರಾವಾಹಿಗಳಲ್ಲಿ ಮುಖ್ಯಪಾತ್ರದ ಅಲಿಖಿತ ಡೈಲಾಗ್ ಯಾವತ್ತಿಗೂ ಒಂದೇ-"ಪ್ಲೀಸ್, ನನಗೆ 'ಹಿಂಸೆ' ಆಗುತ್ತೆ". ಮನ್ವಂತರದ ಮಂದಾಕಿನಿ, ಮುಕ್ತದ ನಂದಿನಿ ಎಲ್ಲರ ಹೋಳು ಒಂದೇ. ಇದೊಂಥರಾ ಅಂಟು ರೋಗ. "ಭೂಮಿಕಾ" ನಿರ್ಮಾಣ ಮಾಡುತ್ತಿರುವ ಇತರ ಧಾರಾವಾಹಿಗಳ ಹಣೆಬಹವೂ ಇದೇ. ಮಧ್ಯಮ ವರ್ಗಕ್ಕೂ, ಹಿಂಸೆ ಎಂಬ ಎರಡಕ್ಷರದ ಭಯಂಕರ ಶಬ್ದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ, ಯುವರ್ ಆನರ್?

ಪಾಯಿಂಟ್ ನಂ2.

ಧಾರಾವಾಹಿಗಳನ್ನು 400 ಎಪಿಸೋಡ್ ಒಳಗೆ ಮುಗಿಸೋದು ಸೀತಾರಾಂ ಪಾಲಿಸಿ. "ಮುಕ್ತ" ಇದಕ್ಕೆ ಅಪವಾದ. TRP, ಚಾನೆಲ್ ಒತ್ತಡಕ್ಕೆ ಸೀತಾರಾಂ ಬಲಿಯಾದರು. ವೀಕ್ಷಕರೂ ಟಿಎನ್ಎಸ್ ಕೂಡಾ ಚ್ಯೂಯಿಂಗಮ್ ನಿರ್ದೇಶಕರ ಸಾಲಿಗೆ ಸೇರಿಹೋದರಾ? ಅಂತ ಅನುಮಾನ ಪಟ್ಟುಕೊಂಡರು. ಈ ಬಾರಿ ಪ್ರಸಾರವಾಗುತ್ತಿರುವುದು "ಮುಕ್ತ..ಮುಕ್ತ"!!. ಕೂಡಿಸಿದರೂ, ಗುಣಿಸಿದರೂ ಮುಗಿದು ಹೋದ ಮುಕ್ತಕ್ಕಿಂತ ಒಂದು ಕೈ ಹೆಚ್ಚೇ ಆಗುವ ಸಾಧ್ಯತೆಗಳಿವೆ!!

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು "ಮುಕ್ತ..ಮುಕ್ತ" ಧಾರಾವಾಹಿಯನ್ನು ಬೋರ್ ಹೊಡೆಸದಂತೆ ನಿರ್ದೇಶಿಸಲು ಹಾಗೂ ಹಿಂಸೆಯ 'ತಲೆಹರಟೆ'ಯನ್ನು ಕಡಿಮೆಗೊಳಿಸಲು ಸಿಎಸ್ಪಿಗೆ ತಾಕೀತು ಮಾಡಬೇಕಾಗಿ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಯುವರ್ ಆನರ್!!

ಕೊನೆ ಹನಿ:

"ಮುಕ್ತ..ಮುಕ್ತ", ಮುಕ್ತ ಧಾರಾವಾಹಿಯ ಸೀಕ್ವೆಲ್. ಟಿಎನ್ಎಸ್ ನಿರ್ದೇಶನವಿರುವುದರಿಂದ ವೀಕ್ಷಕ ಮಹಾಶಯ ಬಚಾವ್. ಇದರಿಂದ ಸ್ಫೂರ್ತಿ ಪಡೆದು, ಉಳಿದವರೆಲ್ಲಾ ಸೀಕ್ವೆಲ್ಗಳಿಗೆ ಕೈ ಹಾಕಿದರೆ ವೀಕ್ಷಕರ ಮಂತ್ರ-ತಂತ್ರಗಳಿಗಂತೂ ಅಗ್ನಿ ಪರೀಕ್ಷೆ ಗ್ಯಾರೆಂಟಿ!

4 ಕಾಮೆಂಟ್‌ಗಳು:

ಏಕಾಂತ ಹೇಳಿದರು...

ಬ್ಲಾಗ್ ಅಚ್ಚುಕಟ್ಟಾಗಿದೆ. ವಿಷಯಗಳು ವಿಸ್ತಾರವಾಗಿದೆ. ಮುಕ್ತ ಮುಕ್ತ ಬಗ್ಗೆ ಬರೆದದ್ದು ಪ್ರಸ್ತುತವಗಿದೆ. ಗುಡ್ ಲಕ್..

ಬ್ರಹ್ಮಾನಂದ ಎನ್.ಹಡಗಲಿ ಹೇಳಿದರು...

TNS direction andare nanage tumbaa achhu mechhu. avaru matte kiruterege kaaliduttiddare endare prastuta samasye bagge ondu vicharavanna mandusuttare antale artha.

Brahmanand

ಅನಾಮಧೇಯ ಹೇಳಿದರು...

Hi, Gauri here.
I'm a big fan of T.N Sir,so I luv his works unconditionally.But evn I felt tat he dragged the story of Mukta jst 4 TRP.Anywayz ur writing ws good as usual.

Unknown ಹೇಳಿದರು...

KARTHIK.......

Good luck Keep it up I Like your neatness