ಭಾನುವಾರ, ಮಾರ್ಚ್ 9, 2008

ಬೊಗಸೆ ಕಂಗಳಿಗೊಂದು ಬಿನ್ನಹ

ನನಗೆ
ಉತ್ತರಗಳು ಬೇಡ
ಪ್ರಶ್ನೆಗಳಲ್ಲೇ
ಬದುಕಿ ಗೊತ್ತಿದೆ



ಪ್ರತೀ ಪ್ರಶ್ನೆಯು
ಇರಿದಾಗ
ಕುಟುಕಿದಾಗ
ನರಳಿ ಗೊತ್ತಿದೆ



ಬೀದಿ ದೀಪದ
ಬೆಳಕಲ್ಲಿ
ಪ್ರಶ್ನೆಗಳಲ್ಲೇ
ಮನೆ ಕಟ್ಟಿ
ಅಭ್ಯಾಸವಾಗಿದೆ



ಪ್ರತೀ ಮುಂಜಾನೆ
ನೆಲ ಸಾರಿಸಿ
ರಂಗವಲ್ಲಿ ಚುಕ್ಕಿ ಇಡುತ್ತಿ
ಎಂದು ಹಂಬಲಿಸಿ
ಮುಸ್ಸಂಜೆ ಹತ್ತಿರಾಗುತ್ತಿದೆ
ಮತ್ತೇಕೆ ಬೇಕು ಹೇಳು
ನಿನ್ನ ಉತ್ತರದ ಚಿ()ತೆ?



ಪ್ರಶ್ನೆಗಳ
ಶೂನ್ಯದಲ್ಲಿ
ವೃಂದಾವನ ಕಟ್ಟಲು
ಗೊತ್ತಿರುವ ನನಗೆ
ನೀನಿಲ್ಲದೆ ಬದುಕಬಹುದು
ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!




(ಬೆಂಗಳೂರಿನಕ್ರೈಸ್ಟ್ ಕಾಲೇಜು ನಡೆಸಿದ 2007-08ನೇ ಸಾಲಿನ ಡಾ..ರಾ.ಬೇಂದ್ರೆ ಸ್ಮೃತಿ ಅಂತರ್ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಸೋಮವಾರ, ಮಾರ್ಚ್ 3, 2008

'ಬೆಂದ'ಕಾಳೂರಿನ ಸ್ವಗತ

ಮಾತು

ಕಡಿಮೆ ಮಾಡು





ಕಂಪ್ಯೂಟರ್ರು ಕುಟ್ಟುತ್ತಾ


ಕುಟ್ಟುತ್ತಾ ವೈರಸ್ಸು

ಶಾಪಿಂಗು ಮಾಲುಗಳಲಿ

ಬಿಕರಿ ಎಂಟಾಣೆಗೆ

ತಪ್ಪಿದರೆ ಒಂದೂವರೆಗೆ





ಫುಟ್ಪಾತು ರಾತ್ರಿಗಳಲಿ


ನಗುವ ಎದೆ ತೆರೆದ ಸುಂದ್ರಿ

ಟಾಕೀಸಿನ ಮೂರಿ ಟಾಯ್ಲೆಟ್ಟು

ಮಾತು ಮಾತಿಗೂ ಚೌಕಾಸಿ'

ಆತನೊಬ್ಬ ಬಿಕ್ನಾಸಿ'

ಗೊಣಗುವ ಹಣ್ಣಿನ ಹುಡುಗಿ

ಇಲ್ಲ ಟು ಲೆಟ್ ಬೋರ್ಡ್

ಮನೆ ಮುಂದೆ ಮಾತ್ರ

'ನಾಯಿ ಇದೆ ಎಚ್ಚರಿಕೆ'!!





ಸಿಟಿ ಬಸ್ಸಲ್ಲಿ ಕಾಲು ತಾಕಿದ್ರೆ


ನಿನ್ನಮ್ಮನ್........ ಕಾಣಲ್ವಾ ಕಣ್ಣು

ಮುಂದಿನ ಸೀಟಲ್ಲಿ

ಹ್ಯಾರಿಪಾಟರ್ ಓದೋ ಕಾರ್ಮಲ್ ಪೆಣ್ಣು!!

ಟೈಮ್ಸ್ ನೋಡಿದರೆ

'ಸಿಟಿ ಬೆಳೆಯುತ್ತಿದೆ,

ನಾರಾಯಣ ಮೂರ್ತಿ ಗರಂ,

ಗೌಡ ಖತಂ,

ಭೂಲ್ ಭುಲಯ್ಯಾ- ನಾಟ್ ಎ ವರ್ತಿ

ಟು ವಾಚ್-ನಾನ್`ಸೆನ್ಸ್'!!

ಕಾರಲ್ಲಿ ಕೂತರೆ

ಎಫೆಮ್ಮು-ಸಖತ್ ಹಾಟ್ ಮಗಾ!





ಅದಕ್ಕೇ ಹೇಳಿದ್ದು


ಮಾತು ಕಡಿಮೆ ಮಾಡು