tag:blogger.com,1999:blog-42906476148064166382024-03-06T12:04:56.428+05:30ಹೆಜ್ಜೆ|ನೆಲ -ಮುಗಿಲು ಮುಟ್ಟುವ ಹಂಬಲ|ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.comBlogger78125tag:blogger.com,1999:blog-4290647614806416638.post-19633015297044860802014-03-05T21:53:00.001+05:302014-03-05T22:05:17.005+05:30ಕಾಡುವಂಥ ಸ್ವಪ್ನ ಸಾಕೇ<div dir="ltr" style="text-align: left;" trbidi="on">
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಸಂತೆಯಲಿ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಬಿದ್ದ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಸ್ವಪ್ನದಂತೆ</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ನೋವಿಗೆ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಅವಳದೇ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಪನ್ನೀರು</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕಾಡಿಗೆ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕರಗದೇ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಒಂಚೂರು</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<br /></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕುಂತ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಒಂದು</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಘಳಿಗೇಲಿ</span><span lang="KN" style="font-family: "Tunga","sans-serif"; mso-ansi-language: EN-US;"> </span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ನಡೆದ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಒಂದು</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಹೆಜ್ಜೇಲಿ</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಒಂಟಿಯಾಗಿ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಒಲವು</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಬೆಂದು</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಬಾಡಿದೆ</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಎದೆಯಲಿ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಮುಗಿಯದ ನೋವಿಗೆ</span><span style="font-family: "Nudi 01 e"; mso-ansi-language: EN-US; mso-bidi-font-family: Tunga;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕಣ್ಣಲಿ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕಾಣದ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಹಸಿವಿದೆ</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<br /></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಉಸಿರೆಲ್ಲೋ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕಳೆದು</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಹೆಸರೆಲ್ಲೋ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಉಳಿದು</span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಇರದೇ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಇದ್ದರೂ</span><span style="font-family: "Tunga","sans-serif"; mso-ansi-language: EN-US;"><o:p></o:p></span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಕಣ್ಣಲಿ ಕಾಣಿಸೋ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಸತ್ಯಕೆ</span><span lang="KN" style="font-family: "Tunga","sans-serif"; mso-ansi-language: EN-US;"> </span></div>
<div class="MsoNormal">
<span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಬೇರೆ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಪ್ರೇಮ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಪತ್ರ</span><span lang="KN" style="font-family: "Tunga","sans-serif"; mso-ansi-language: EN-US;"> </span><span lang="KN" style="font-family: "Tunga","sans-serif"; line-height: 115%; mso-ansi-language: EN-US; mso-bidi-font-size: 11.0pt; mso-bidi-language: KN;">ಬೇಕೇ</span></div>
<div class="MsoNormal">
<span lang="KN" style="font-family: Tunga, sans-serif; line-height: 115%;">ಕಾಡುವಂಥ</span><span lang="KN" style="font-family: Tunga, sans-serif;"> </span><span lang="KN" style="font-family: Tunga, sans-serif; line-height: 115%;">ಸ್ವಪ್ನ</span><span lang="KN" style="font-family: Tunga, sans-serif;"> </span><span lang="KN" style="font-family: Tunga, sans-serif; line-height: 115%;">ಸಾಕೇ</span><span style="font-family: Tunga, sans-serif;">.....</span></div>
</div>
ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com1tag:blogger.com,1999:blog-4290647614806416638.post-38658642737302137342011-12-14T20:16:00.000+05:302011-12-14T20:43:31.102+05:30ಮೌನದೊಳಗಿನ ಶಬ್ದವನ್ನು ಹುಡುಕುತ್ತಾ<div dir="ltr" style="text-align: left;" trbidi="on">
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj8xp-nyElUmkMqHU5uNhZ-7D5ZdQDriPCoal_-WUIYggl0Acs_XgQ0els2fkGCbfYXm4NL8PdwwNUwB5aLFSTKzDlaT69MW5UbgPEXES1lgdqCqussHLICUP0HUg_5Gct30K5kUTWoSM2i/s1600/its+all+gone+pete+tong+poster.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEj8xp-nyElUmkMqHU5uNhZ-7D5ZdQDriPCoal_-WUIYggl0Acs_XgQ0els2fkGCbfYXm4NL8PdwwNUwB5aLFSTKzDlaT69MW5UbgPEXES1lgdqCqussHLICUP0HUg_5Gct30K5kUTWoSM2i/s320/its+all+gone+pete+tong+poster.jpg" width="215" /></a></div>
<span class="Apple-style-span" style="font-size: large;"><br /></span><br />
<div style="text-align: center;">
<span class="Apple-style-span" style="font-size: large;"><b>ಸಿನಿಮಾ: ಇಟ್ಸ್ ಆಲ್ ಗಾನ್ ಪೀಟ್ ಟಾಂಗ್</b></span></div>
<div style="text-align: center;">
<span class="Apple-style-span" style="font-size: large;"><b>ಭಾಷೆ: ಇಂಗ್ಲೀಷ್/ಸ್ಪಾನಿಶ್</b></span></div>
<div style="text-align: center;">
<span class="Apple-style-span" style="font-size: large;"><b><span class="Apple-style-span" style="font-family: Arial, Helvetica, sans-serif; line-height: 28px;">ನಿರ್ದೇಶಕ</span>: ಮೈಕೆಲ್ ಡೋಸ್</b></span></div>
<div style="text-align: center;">
<span class="Apple-style-span" style="font-size: large;"><b>ಅವಧಿ: 90 ನಿಮಿಷ</b></span></div>
<div style="text-align: center;">
<span class="Apple-style-span" style="font-size: large;"><br /></span></div>
<span class="Apple-style-span" style="font-size: large;">ಪಬ್ಬಿನ ತಿಳಿ ನೀಲ ಬೆಳಕು, ಲೇಸರ್ ಕಿರಣಗಳ ಬಳುಕು, ಮತ್ತಿನಲ್ಲಿ ಜಗತ್ತನ್ನೇ ಮರೆತ ಯುವ ಜನ. ಅವರೆಲ್ಲರಿಗೂ ಇವ ಬಂದ್ರೆ ಮತ್ತೆ ಮತ್ತೇರುತ್ತೆ. ಸಂಗೀತವನ್ನು ರೀ-ಮಿಕ್ಸ್ ಮಾಡುತ್ತಾ ಹೊಸದನ್ನ ಆ ಕ್ಷಣಕ್ಕೆ ಸೃಷ್ಟಿಸುತ್ತಾ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ರೋಮಾಂಚಿತಗೊಳಿಸುತ್ತಾನೆ. ಅವನ ಬದುಕಿಗಿರೋ ಹೈ ಫ್ರೀಕ್ವೆನ್ಸಿ ಒಂದೇ. ಅವನಿಗೆ ಶಬ್ದವೇ ಜೀವ, ಜಗತ್ತು. ಇದು ಫ್ರ್ಯಾಂಕಿ ವೈಲ್ಡ್ ಅನ್ನೋ ಡಿಜೆಯೊಬ್ಬ ಬದುಕಿದ ಸಿನಿಮಾ- "ಇಟ್ಸ್ ಆಲ್ ಗಾನ್ ಪೀಟ್ ಟಾಂಗ್".</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಅವನಲ್ಲಿ ಎಲ್ಲವೂ ಇದೆ. ಯಶಸ್ಸು, </span><span class="Apple-style-span" style="font-family: Arial, Helvetica, sans-serif; font-size: large; line-height: 28px;">ಕೀರ್ತಿ</span><span class="Apple-style-span" style="font-size: large;">, ಹಣ, ಹೆಣ್ಣು, ಹೆಂಡ...ಮತ್ತಷ್ಟು ಮತ್ತೇರಲು ಡ್ರಗ್ಸು...ಪ್ರಸಿದ್ಧ ಡಿಜೆ ಬೇರೆ. ಕಾಲಿಟ್ಟಲ್ಲೆಲ್ಲಾ ಜನ ಮುತ್ತುತ್ತಾರೆ. ಕ್ಯಾಮರಾಗಳು ಕ್ಲಿಕ್ಕಾಗುತ್ತವೆ. ಮ್ಯಾಗಜೀನುಗಳು ಪುಟಗಟ್ಟಲೆ ಬರೆಯುತ್ತವೆ. ಪ್ರತೀ ಕ್ಷಣವನ್ನು ತೀವ್ರವಾಗಿ ತನಗಿಷ್ಟ ಬಂದಂತೆ ಬದುಕುತ್ತಾ ಹೋಗುತ್ತಾನೆ ಫ್ರ್ಯಾಂಕಿ. ಶಬ್ದ ಕರ್ಕಶವಾದರೆ, ಹಾದಿ ತಪ್ಪಿದರೆ ಫ್ರ್ಯಾಂಕಿ ನಿಗಿನಿಗಿ ಕೆಂಡ. ಅವನಿಗೆ ಫ್ರೀಕ್ವೆನ್ಸಿ ಯಾವತ್ತೂ ಮ್ಯಾಚಾಗ್ಬೇಕು.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಎಲ್ಲಾ ಸರಿಯಾಗಿದ್ದ ಘಳಿಗೆಗಳಲ್ಲೇ ಫ್ರ್ಯಾಂಕಿ ನೀನಿನ್ನೂ ಸಂಪೂರ್ಣ ಕಿವುಡ ಅಂತ್ಹೇಳಿ ಅಗತ್ಯವಾಗಿದ್ದಾಗ ಮಾತ್ರ ಬಳಸಲು ಹಿಯರಿಂಗ್ ಕೈಗಿಡುತ್ತಾನೆ ಡಾಕ್ಟರ್. ಕುಡಿತ ಬಿಡು, ಇರೋವಷ್ಟು ದಿನ ಬದುಕಿಗೆ ಕಂಟ್ರೋಲ್ ಇರಲಿ ಅಂತ ಕಿವಿಮಾತು ಹೇಳುತ್ತಾನೆ. ಅಕ್ಷರಶಃ ನಡುಗಿ ಹೋಗುತ್ತಾನೆ ಫ್ರ್ಯಾಂಕಿ. ಬರ ಬರುತ್ತಾ ಶಬ್ದ ಕಿವಿಗಳೊಳಗೆ ಇಳಿಯದೇ ಹೋದಾಗ ಸೃಷ್ಟಿಯಾಗುವ ಮೌನಕ್ಕೆ, ನೀರವತೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನೋದು ಗೊತ್ತಾಗದೇ ಅನಾಥನಾಗುತ್ತಾನೆ. ಪಬ್ಬಿನೊಳ ಹೊಕ್ಕಿ ಮ್ಯೂಸಿಕ್ನ ಮಿಕ್ಸ್ ಮಾಡೋಕೆ ಕೂತರೆ ಅದ್ಯಾವುದೂ ಅಲ್ಲಿರೋರನ್ನ ತಣಿಸುತ್ತಿಲ್ಲ. ತಾನು ಸೃಷ್ಟಿಸುತ್ತಿರುವ ಸಂಗೀತ ಕೇಳುಗನನ್ನು ಪುನೀತಗೊಳಿಸುತ್ತಿಲ್ಲ ಅಂತನ್ನಿಸೋ ಕ್ಷಣವಿದೆಯಲ್ಲ, ಅದು ಸೃಜನಶೀಲ ವ್ಯಕ್ತಿಯೊಬ್ಬನ ಸಾವು. ಅಂತಹ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಫ್ರ್ಯಾಂಕಿಗೆ. </span><span class="Apple-style-span" style="font-family: Arial, Helvetica, sans-serif; font-size: large; line-height: 28px;">ತುರ್ತಾಗಿ </span><span class="Apple-style-span" style="font-size: large;">ಬದುಕಬೇಕಿದೆ ಫ್ರ್ಯಾಂಕಿಗೆ. ಆದ್ರೇನು ಮಾಡೋದು ಕಿವಿಗೆ ಬೀಳ್ತಿರೋ ಅರೆ ಬರೆ ಸಂಗೀತವೂ ಕರ್ಕಶ. ಸ್ಥಿತಿ ನರಕ. ಎಲ್ಲವನ್ನೂ ಕಿತ್ತು ಎಸೀಬೇಕು ಅನ್ನೋ ಹತಾಶೆ. ಜೊತೆಗಿದ್ದ ಮ್ಯೂಸಿಕ್ ಕಂಪೆನಿ ಕೈ ಬಿಡುತ್ತೆ. ಸಹಚರರು ಮುಖ ತಿರುಗಿಸ್ತಾರೆ. ಮಾಡೆಲ್ ಹೆಂಡ್ತಿ ಮತ್ತೊಬ್ನ ಹಿಂದೆ ಹೋಗ್ತಾಳೆ. ಯಶಸ್ಸು, </span><span class="Apple-style-span" style="font-family: Arial, Helvetica, sans-serif; font-size: large; line-height: 28px;">ಕೀರ್ತಿ </span><span class="Apple-style-span" style="font-size: large;"> ಎಲ್ಲಾ ಜರ್ರಂತ ಇಳಿದು ಹೋಗುತ್ತೆ. ನಿನ್ನೆ ತನಕ ಸ್ಟಾರ್ ಆಗಿದ್ದೋನು ಇವತ್ತು ಬೆಳಗಾಗೋದ್ರೊಳಗೆ ಕಿವಿ ಕೇಳದ ಡಿಜೆ. ದಿಕ್ಕೇ ತೋಚಲ್ಲ. ಅಕ್ಷರಶಃ ಹುಚ್ಚು ಹಿಡಿದವನಂತೆ ಬೆಟ್ಟವೊಂದರ ಮೇಲೆ ನಿಂತು ಕಿವಿಗಳೆರಡನ್ನು ಮುಚ್ಚಿ ಜೋರಾಗಿ ಚೀರುತ್ತಾನೆ, ಅಸಹಾಯಕನಾಗಿ...ನೋವಲ್ಲಿ ಬೆಂದು ಹಣ್ಣಾದವನಂತೆ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಏಕಾಂತ ಕೊಲ್ಲುತ್ತದೆ. ಶಬ್ದವಿಲ್ಲದ ಮೌನ ಹಿಂಡಿ ಹಿಪ್ಪೆ ಮಾಡುತ್ತದೆ. ಶಬ್ದವಿಲ್ಲದ ಜಗತ್ತು ಫ್ರ್ಯಾಂಕಿಗೆ ಸಾವು. ಬಿಟ್ಟೂ ಬಿಡದೇ ಕಾಡುವ ಮೌನವನ್ನು ಕೊಲ್ಲಲು, ಮುಕ್ತಿ ಪಡೆಯಲು ಕಿವಿಗಳೆರಡಕ್ಕೆ ಬ್ಯಾಂಡೇಜು ಸುತ್ತಿ ಮಲಗಿಬಿಡುತ್ತಾನೆ, ದಿನಗಟ್ಟಲೆ. ಕೋಣೆಯೊಳಗೆ ಬರೋ ಬೆಳಕು ಕಳೆದುಕೊಂಡಿರುವ ಅಸ್ಥಿತ್ವವನ್ನು ಪ್ರಶ್ನಿಸುತ್ತದೆ ಅಂತನ್ನಿಸಿ ಕಿಟಕಿಗಳನ್ನು ಪಿಲ್ಲೋಗಳಿಂದ ಮುಚ್ಚುತ್ತಾ ಹೋಗುತ್ತಾನೆ. ನಿಶ್ಯಬ್ದದೊಳಗೆ ಸಾಯುತ್ತಾ, ಕತ್ತಲೊಳಗೆ ಅರಳಲು ಬೆಳಕು ಹುಡುಕುತ್ತಾ ಬಿದ್ದು ಒದ್ದಾಡುತ್ತಾನೆ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ನಾಲ್ಕಾರು ತಿಂಗಳು ಅಜ್ಞಾತವಾಗಿ ಕತ್ತಲ ಕೋಣೆಯಲ್ಲೇ ಬದುಕೋ ಫ್ರ್ಯಾಂಕಿ, ತಪಸ್ಸು ಮುಗಿಸಿದ ಸನ್ಯಾಸಿಯಂತೆ ಧಿಡೀರನೆ ಎದ್ದು ಬರುತ್ತಾನೆ. ನೀಟಾಗಿ ಶೇವ್ ಮಾಡ್ಕೋತಾನೆ. ತಿಂಗಳ ಮೌನ ಜೀವನೋತ್ಸಾಹವನ್ನು ತುಂಬಿರುತ್ತೆ. ಮತ್ತೆ ತನಗಿಷ್ಟ ಬಂದಂತೆ ಬದುಕೋದಿಕ್ಕೆ ನಿರ್ಧರಿಸುತ್ತಾನೆ ಫ್ರ್ಯಾಂಕಿ. ಆಗವ್ನು ಮಾಡೋ ಮೊತ್ತ ಮೊದಲ ಕೆಲ್ಸ-ಲಿಪ್ ರೀಡಿಂಗ್ ಕಲಿಕೆ. ಇಲ್ಲೇ ಅವನ ಬದುಕಿಗೊಂದು ತಿರುವು. ಕಲಿಸೋ ಹುಡುಗಿಗೂ ಕಿವಿ ಕೇಳಲ್ಲ. ತುಟಿಗಳ ನಡುವಿನ ಚಲನೆಯ ನಡುವೆ ಬದುಕು ಮತ್ತೆ ಚಲಿಸಲು ಪ್ರಾರಂಭಿಸುತ್ತೆ. ತುಟಿಗಳ ಚಲನೆಯೊಳಗೆ ಮೌನದೊಳಗಿನ ಶಬ್ದಗಳನ್ನು ಅರಿಯಲು ಶುರು ಮಾಡುತ್ತಾನೆ. ಅರಿವೇ ಗುರುವಾಗುತ್ತೆ. ತುಟಿ ಮತ್ತು ನಾಲಗೆ ಹುಟ್ಟಿಸುವ ಶಬ್ದದ ನಡುವೆ ಬತ್ತಿ ಹೋಗಿರೋ ಪ್ರೀತಿಗೆ ಮತ್ತೆ ಜೀವ ಬರುತ್ತೆ. ಕಿವಿ ಕೇಳದ ಆ ಹುಡುಗಿ ಸಂಗಾತಿಯಾಗಲು ಫ್ರ್ಯಾಂಕಿಗೆ ಕಾರಣಗಳೇ ಬೇಕಿಲ್ಲ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಕಿವುಡುತನದಿಂದ ಸಂಗೀತದ ಲಯವನ್ನ ಹಿಡಿಯಲು ಸಾಧ್ಯವಿಲ್ಲ, ಅದಕ್ಕೊಂದು ಕಿವಿ ಬೇಕೇ ಬೇಕು ಅನ್ನೋ ಭ್ರಮೆಯಲ್ಲೇ ದಿನ ದೂಡುತ್ತಿರುತ್ತಾನೆ ಫ್ರ್ಯಾಂಕಿ ವೈಲ್ಡ್. ಅದೊಂದು ಸಂಜೆ, ಸಂಗಾತಿ ಸ್ಪೀಕರಿನ ಪಕ್ಕ ಕೈ ಹಿಡಿದು ಶಬ್ದದ ರಿದಂನ ಕೇಳಲು ಕಿವಿಯಿಲ್ಲದಿದ್ದರೇನಾಯ್ತು, ಸ್ಪರ್ಶದ ಮೂಲಕ ರಿದಂನ ಹಿಡಿಯೋದು ಸುಲಭ ಅಂತ ತೋರಿಸಿಕೊಡುತ್ತಾಳೆ. ಡ್ಯಾನ್ಸರ್ಳ ಹೆಜ್ಜೆಯ ತಾಳವನ್ನು ಹಿಡಿ ಅಂತ ಹುರಿದುಂಬಿಸುತ್ತಾಳೆ. ಆಗಲೇ ಫ್ರ್ಯಾಂಕಿ ನಿಜವಾಗಿಯೂ ತೆರೆದುಕೊಳ್ಳೋದು. ತನಗೆ ಶಬ್ದದೊಂದಿಗೆ ದಾಂಪತ್ಯ ಸಾಧ್ಯವಿದೆ ಅಂತ ಮನವರಿಕೆಯಾಗೋದೇ ಸಿನಿಮಾದ ಅಪೂರ್ವ ಸನ್ನಿವೇಶ.</span><br />
<span class="Apple-style-span" style="font-size: large;"><br /></span><br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEia4TxEtDVYXd2F5J-0GpsGQWCFCAAM7oNarX5PjB0FzN6otsE-h6JzeSkd_2dp3VX4A6yG6o8hLz4DUVOyVQFrciowrfbFLsT6alasC_hE04CAG71cWRHw0J9nz1_D8itgPWKdByoDCZqp/s1600/paul+kyle.jpg" imageanchor="1" style="margin-left: 1em; margin-right: 1em;"><img border="0" height="180" src="https://blogger.googleusercontent.com/img/b/R29vZ2xl/AVvXsEia4TxEtDVYXd2F5J-0GpsGQWCFCAAM7oNarX5PjB0FzN6otsE-h6JzeSkd_2dp3VX4A6yG6o8hLz4DUVOyVQFrciowrfbFLsT6alasC_hE04CAG71cWRHw0J9nz1_D8itgPWKdByoDCZqp/s320/paul+kyle.jpg" width="320" /></a></div>
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಆಮೇಲಿನದು ವ್ಯಕ್ತಿಯೊಬ್ಬ ಎಲ್ಲಾ ಅಡೆತಡೆಗಳ ಮಧ್ಯೆ ಜೀನಿಯಸ್ ಹೇಗಾಗ್ತಾನೆ ಅನ್ನೋ ಕತೆ. ಸ್ಪೀಕರ್ಗಳ ಮೇಲೆ ಕಾಲಿಟ್ಟು ಶಬ್ದದ ಲಯ ಹಿಡಿಯುತ್ತಾ, ಫ್ರೀಕ್ವೆನ್ಸಿಗಳ ಜೊತೆ ಕುಂಟೆಬಿಲ್ಲೆ ಆಡುತ್ತಾ ಹೋಗುತ್ತಾನೆ. ಹೊಸ ಶಬ್ದ ತರಂಗಗಳು ಅರಳುತ್ತವೆ. ಕಿವಿ ಕೇಳದಿದ್ದರೂ ಸಂಗೀತ ನರನಾಡಿಗಳಲ್ಲಿ ಸಂಚರಿಸುತ್ತೆ. ಕಿವುಡ ಡಿಜೆ ಫ್ರ್ಯಾಂಕಿ ವೈಲ್ಡ್ ತನ್ನ ಸಂಗೀತದಿಂದಾಗಿ ಮತ್ತೆ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗ್ತಾನೆ. ಯುವ ಜನತೆಯ ಐಕಾನ್ ಆಗಿ ಬದ್ಲಾಗ್ತಾನೆ. ಹಾಗೇ ಯಶಸ್ಸಿನ ತುತ್ತ ತುದಿಯಲ್ಲಿರೋವಾಗ್ಲೇ ತನ್ನ ಗೆಳೆಯನಿಗೂ ಹೇಳದೇ ಫ್ರ್ಯಾಂಕಿ ಗೆಳತಿಯೊಂದಿಗೆ ಮರೆಯಾಗುತ್ತಾನೆ. ಬುದ್ಧನಂತೆ ಮೌನಿಯಾಗಿ ನಡೆಯುತ್ತಾನೆ. ಜ್ಞಾನೋದಯಕ್ಕೆ ಮುಖ ಮಾಡಿದಂತೆ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಯಶಸ್ಸು, <span class="Apple-style-span" style="font-family: Arial, Helvetica, sans-serif; line-height: 28px;">ಕೀರ್ತಿ</span>, ಹಣ ಎಲ್ಲವೂ ಮತ್ತೆ ಮತ್ತೇರಿಸಲು ರೆಡಿಯಾಗಿವೆ. ಆದರೆ ಫ್ರ್ಯಾಂಕಿ ಮಾತ್ರ ಇಲ್ಲ. </span><span class="Apple-style-span" style="font-size: large;">ಕೊನೆಗೂ ಫ್ರ್ಯಾಂಕಿ ವೈಲ್ಡ್ಗೆ ಪ್ರತೀ ಕ್ಷಣವನ್ನು ತೀವ್ರವಾಗಿ ಅನುಭವಿಸ್ತಾ ಬದುಕೋದೇ ಮುಖ್ಯವಾಗುತ್ತದೆ. </span><span class="Apple-style-span" style="font-family: Arial, Helvetica, sans-serif; font-size: large; line-height: 28px;">ಇವತ್ತಿನ ವರ್ತಮಾನದ ವೇಗ, ಜೊತೆಗೆ ಮೂಟೆಯಷ್ಟು ಗೊಂದಲದ ಗೂಡೊಳಗೆ ಬೇಯುತ್ತಿರೋ ನಾವೆಲ್ಲಾ ಒಂದಿಲ್ಲೊಂದು ಕ್ಷಣದಲ್ಲಿ ಫ್ರಾಂಕಿಯಂತೆಯೇ; ಶಬ್ದವನ್ನು ಗ್ರಹಿಸಿಯೂ ಕಿವುಡರಾಗುವ ಪರಮ ಶಾಪ ನಮ್ಮದು ಕೂಡ. ಸದ್ಯಕ್ಕೆ ನಮಗೆಲ್ಲಾ ಅರ್ಥವಾದರೂ, ನಾವೇ ಪಾತ್ರವಾಗದೇ ಉಳಿಯೋ ಸಿನಿಮಾ ನಮ್ಮ </span><span class="Apple-style-span" style="font-family: Arial, Helvetica, sans-serif; line-height: 28px;"><span class="Apple-style-span" style="font-size: large;">ನಿತ್ಯದ್ದು.</span></span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಪೌಲ್ ಕೈಲ್ ಅನ್ನೋ ನಟ ಫ್ರ್ಯಾಂಕಿ ವೈಲ್ಡ್ ಪಾತ್ರವನ್ನ ಮೈಮೇಲೆ ಅವಾಹಿಸಿಕೊಂಡವನಂತೆ ಅಭಿನಯಿಸಿದ್ದಾನೆ. ಅವನ ನಗೆ, ಅತೀ ಚೆಲ್ಲುತನ, ಹೊಳೆಯೋ ಚಿನ್ನ ಹಲ್ಲು ಎಲ್ಲವನ್ನೂ ನೋಡಿಯೇ ಆನಂದಿಸಬೇಕು. ತಾನಿನ್ನು ಕಿವುಡ ಅಂತ ಗೊತ್ತಾಗಿ ಕ್ರಮೇಣ ಶಬ್ದ ಕಿವಿಯೊಳಗಿಳಿಯದೇ ಬರೀ ಮೌನ ಆವರಿಸೋ ಕ್ಷಣದಿಂದ ಅವನ ಅಭಿನಯ ದಂಗುಬಡಿಸುತ್ತದೆ. ಒಮ್ಮೆ ದಿಕ್ಕೆಟ್ಟವನಂತೆ, ಮತ್ತೊಮ್ಮೆ ಸಂತನಂತೆ, ಅರ್ಥವೇ ಆಗದ ಅಮೂರ್ತ ಕ್ಷಣದೊಳಗೆ ಬದುಕಿ ಕಂಗಾಲಾಗೋ ದೃಶ್ಯಗಳಲ್ಲಿ ನಮ್ಮ ಬದುಕಿನ ಘೋರ ಘಳಿಗೆಗಳೂ ಸೇರಿಕೊಂಡಿವೆಯೇನೋ ಅಂತನ್ನಿಸುತ್ತೆ. ಒಂದರೆಕ್ಷಣ ನಾವೇ ಫ್ಯ್ರಾಂಕಿಯೇನೋ ಅನ್ನೋವಷ್ಟು ತಲ್ಲಣ ಹುಟ್ಟಿಬಿಡುತ್ತೆ. ಪಿಲ್ಲೋಗಳಿಂದ ಮುಚ್ಚಿರೋ ರೂಮಿನ ಗೋಡೆಗಳಿಗೆ ಆತ ಸಿಟ್ಟು, ಅಸಹಾಯಕತೆಯಿಂದ ಹಾರಿ ಹಾರಿ ಒದೆಯುತ್ತಿದ್ದರೆ ಮನಸ್ಸು ಮರುಗುತ್ತದೆ. ಇಡೀ ಸಿನಿಮಾವನ್ನು, ಅದರ ಮುಖ್ಯ ಪಾತ್ರವನ್ನು ನಮ್ಮ ಬದುಕಿನ ಭಾಗವೇನೋ ಅಂತ ಮಾಡಿಬಿಡೋದು ಪೌಲ್ ಕೈಲ್. ಬಿಟ್ಟೂಬಿಡದೇ ಕಾಡುವಂತೆ ಮಾಡೋದು ಅವನೇ. ಯಶಸ್ಸಿನ ಅಮಲು, ಸೋಲಿನ ಘೋರ ಕ್ಷಣಗಳು, ಏಕಾಂತದೊಳಗೆ ಸತ್ತು ಮತ್ತೆ ಹುಟ್ಟುವಲ್ಲೆಲ್ಲಾ ಪೌಲ್ ಒಂದಿಂಚೂ ಅವನೆಡೆಯಿಂದ ದೃಷ್ಟಿ ಹಾಯಿಸದಂತೆ ಅಭಿನಯಿಸಿದ್ದಾನೆ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಸಿನಿಮಾದ ಮಧ್ಯೆ ಮಧ್ಯೆ ಡಿಜೆಗಳು, ಫ್ರ್ಯಾಂಕಿ ವೈಲ್ಡ್ ಜೊತೆ ಒಡನಾಡಿದೋರ ಬಿಡಿ ಬಿಡಿ ಸಂದರ್ಶನದ ತುಣುಕುಗಳು ಸಿನಿಮಾಕ್ಕೆ ದೊಡ್ಡ ತಡೆ. ಫ್ರ್ಯಾಂಕಿಯಾಗಿರೋ ಪೌಲ್ ಕೈಲ್ ಮಾಡಿರೋ ಮೋಡಿಯದು. ಫ್ರ್ಯಾಂಕಿಯ ಬದುಕಿನ ಕಾಲ ಘಟ್ಟ ಮತ್ತು ಭಾವನಾತ್ಮಕತೆಯ ಗ್ರಾಫನ್ನು ಚಿತ್ರಕತೆಯಲ್ಲಿ ಜಾಣ್ಮೆಯಿಂದ ಹೆಣಿಯುತ್ತಾ ಹೋಗುತ್ತಾನೆ <span class="Apple-style-span" style="font-family: Arial, Helvetica, sans-serif; line-height: 28px;">ನಿರ್ದೇಶಕ</span>-ಮೈಕೆಲ್ ಡೌಸ್. ನೋಡಲೇ ಬೇಕಾದ ಸಿನಿಮಾವಿದು.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಇದೇ ಸಿನಿಮಾವನ್ನು ಇತ್ತೀಚೆಗೆ ನೀರವ್ ಘೋ<span class="Apple-style-span" style="font-family: Arial, Helvetica, sans-serif; line-height: 28px;">ಷ್</span> "</span><span class="Apple-style-span" style="font-size: large;">ಸೌಂಡ್ ಟ್ರ್ಯಾಕ್" ಹೆಸರಲ್ಲಿ ಹಿಂದಿಗೆ ಭಟ್ಟಿ ಇಳಿಸಿದ್ದಾರೆ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;"><b>(ಕುಡಿತ, ಡ್ರಗ್ಸ್ ಮತ್ತು ಬೈಗುಳದ ಭಾಷೆ ಬಳಕೆಯಾಗಿರೋದ್ರಿಂದ ಮಕ್ಕಳೊಂದಿಗೆ ಕೂತು ಈ ಸಿನಿಮಾ ದಯವಿಟ್ಟು ನೋಡ್ಬೇಡಿ.)</b></span></div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com3tag:blogger.com,1999:blog-4290647614806416638.post-41644218076283128342011-10-01T19:57:00.001+05:302011-10-01T19:59:07.792+05:30ಅನಾ"ಮತ್ತು"ಗಳು....<div dir="ltr" style="text-align: left;" trbidi="on">
<span class="Apple-style-span" style="font-size: large;">ಕುಣಿಯುತ್ತಿಲ್ಲ ನವಿಲು</span><br />
<span class="Apple-style-span" style="font-size: large;">ಹಣತೆ ಕಿಡಿಗೆ ಕೀಟಗಳ ಮುತ್ತು</span><br />
<span class="Apple-style-span" style="font-size: large;">ಮತ್ತು</span><br />
<span class="Apple-style-span" style="font-size: large;">ವರ್ಷಕ್ಕೆ ಒಂದೇ ಆಶಾಢ, ಒಂದೇ ಶ್ರಾವಣ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಚಿಗುರುವ ಎಲೆಗಳಲಿ ಮುದಿ ಮಾಯೆ</span><br />
<span class="Apple-style-span" style="font-size: large;">ಕಣ್ಣೀರ ಹನಿಗಳಲಿ ರೆಪ್ಪೆ ಬಯಲು</span><br />
<span class="Apple-style-span" style="font-size: large;">ಕಟ್ಟಡಗಳು ಏರುತ್ತಾ ನೆಮ್ಮದಿ ಸಾವು.</span><br />
<span class="Apple-style-span" style="font-size: large;">ಹೆಣೆದ ಜೇಡರ ಬಲೆಯಂತೆ ವಿದ್ಯುತ್ ತಂತಿ</span><br />
<span class="Apple-style-span" style="font-size: large;">ಮತ್ತು</span><br />
<span class="Apple-style-span" style="font-size: large;">ತಿಂಗಳಿಗೊಂದೇ ಸಂಬ್ಳ, ಒಂದೇ ನೌಕ್ರಿ.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಇಟ್ಟ ಕಣ್ಣಲ್ಲಿ ನೆಟ್ಟ ನೋಟದಲಿ</span><br />
<span class="Apple-style-span" style="font-size: large;"><span class="Apple-style-span" style="font-family: Arial, Helvetica, sans-serif; line-height: 28px;">ಸರ್ಕಾ</span>ರಿ ಬಸ್ಸಿನ ಕನ್ನಡಿ ಹೊಳಪು</span><br />
<span class="Apple-style-span" style="font-size: large;"><span class="Apple-style-span" style="font-family: Arial, Helvetica, sans-serif; line-height: 28px;">ದರ್ಶಿನಿಯ</span> ಬೈಟೂ ಕಾಫಿ</span><br />
<span class="Apple-style-span" style="font-size: large;">ಟೂ ಬಿಟ್ಟ ಮಗಳು</span><br />
<span class="Apple-style-span" style="font-size: large;">ಶಾಪಿಂಗಿನಲ್ಲೇ ಕಳೆದು ಕೂಡಿಸಿ ಗುಣಿಸಿದ</span><br />
<span class="Apple-style-span" style="font-size: large;">ಸಮಯ ಡಿಸ್ಕೌಂಟ್ ಫ್ರೀ..</span><br />
<span class="Apple-style-span" style="font-size: large;">ಫೋಟೋಶಾಪಿನಲ್ಲೇ ಹೂ ಅರಳಿ</span><br />
<span class="Apple-style-span" style="font-size: large;">ಘಮ್, ಘಮ್</span><br />
<span class="Apple-style-span" style="font-size: large;">ದರಿದ್ರ ಕರೆಂಟು..</span><br />
<span class="Apple-style-span" style="font-size: large;">ಲ್ಯಾಪ್ಟಾಪ್ ಬೆಳಕಲ್ಲೇ ಉಣ್ಣಬೇಕು</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;"><span class="Apple-style-span">ಬರಲಿ ಮತ್ತೊಂದು </span><span class="Apple-style-span" style="font-family: Arial, Helvetica, sans-serif; line-height: 28px;">ಚತುರ್ಥಿ</span><span class="Apple-style-span">, ದೀಪಾವಳಿ</span></span><br />
<span class="Apple-style-span" style="font-size: large;">ಮೆತ್ತಲು ಬೇಕು ದೇಸಿ ಪೌಡರು</span><br />
<span class="Apple-style-span" style="font-size: large;">ಟೆರೇಸಿನ ಮೇಲೇ ಮಾದರಿ ಕೃಷಿ: ಒಂದು ಚಿಂತನೆ</span><br />
<span class="Apple-style-span" style="font-size: large;">...ಮರೆತೇ ಹೋಗಿತ್ತು</span><br />
<span class="Apple-style-span" style="font-size: large;"><span class="Apple-style-span" style="font-family: Arial, Helvetica, sans-serif; line-height: 28px;">ಇಂಟರ್ನೆಟ್ಟು </span>ಕಟ್ಟಾಗಿದೆ, ಬಿಲ್ಲು ಪಾವತಿಯಾಗಿಲ್ಲ.</span><br />
<span class="Apple-style-span" style="font-size: large;">ಗೂಗಲ್, ಫೇಸ್ಬುಕ್, <span class="Apple-style-span" style="font-family: Arial, Helvetica, sans-serif; line-height: 28px;">ಆರ್ಕುಟ್ </span></span><br />
<span class="Apple-style-span" style="font-size: large;">ಸಾಕಷ್ಟು ಪರಿಚಯಗಳನ್ನು ಅಪ್ರೂವ್</span><br />
<span class="Apple-style-span" style="font-size: large;">ಮಾಡಬೇಕು.</span><br />
<span class="Apple-style-span" style="font-size: large;">ದರಿದ್ರದ್ದು ಫ್ಲೈಓವರ್ ಕೂಡಾ ಜಾಮು.</span><br />
<span class="Apple-style-span" style="font-size: large;"><br /></span><br />
<span class="Apple-style-span" style="font-size: large;">ಬನ್ನಿ ಸ್ವಲ್ಪ ದಿನ <span class="Apple-style-span" style="font-family: Arial, Helvetica, sans-serif; line-height: 28px;">ರೆಸಾರ್ಟಿಗೆ </span></span><br />
<span class="Apple-style-span" style="font-size: large;">ಪ್ರಕೃತಿ ಚಿಕಿತ್ಸೆಯ ನೆಮ್ಮದಿ</span><br />
<span class="Apple-style-span" style="font-size: large;">ಎರಡೇ ದಿನ</span><br />
<span class="Apple-style-span" style="font-size: large;">ಫ್ರೀ ಪ್ಯಾಕೇಜ್ ಬೇರೆ.</span><br />
<span class="Apple-style-span" style="font-size: large;">ಅಪ್ಪ-ಅಮ್ಮನನ್ನೂ ನೋಡಿದ ಹಾಗಾಯ್ತು</span><br />
<span class="Apple-style-span" style="font-size: large;">ಬನ್ನಿ, ಬನ್ನಿ..</span></div>
ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com4tag:blogger.com,1999:blog-4290647614806416638.post-12734430981616845472011-09-25T16:54:00.002+05:302011-09-25T16:56:14.362+05:30ಬಿಡಿಸದ ಪ್ರೇಮಚಿತ್ರ<div dir="ltr" style="text-align: left;" trbidi="on">
<br />
ಇಟೆಲಿಯ "ಸಿನಿಮಾ ಪ್ಯಾರಡಿಸೋ" ವನ್ನು ಮತ್ತೆ ಮತ್ತೆ ನೋಡುವುದರಲ್ಲೇ ಒಂದು ಸುಖವಿದೆ. ಅದರಲ್ಲಿ ಬರುವ ಥಿಯೇಟರಿನ ಪ್ರೊಜೆಕ್ಷನಿಸ್ಟ್ ಆಲ್ಫ್ರೆಡೋ, ಸಿನಿಮಾವೆಂಬ ವಿಸ್ಮಯದ ನೆರಳು ಬೆಳಕಿನಾಟವನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕರಗಿ ಹೋಗುವ ಟೋಟೋ, ಇವರಿಬ್ಬರೂ ನಮ್ಮೆಲ್ಲರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಆಲ್ಫ್ರೆಡೋ ಒಂದು ಸನ್ನಿವೇಶದಲ್ಲಿ ಅಮರ ಪ್ರೇಮಿಗಳಾದ ಟೋಟೋ ಹಾಗೂ ನಾಯಕಿ ಒಂದಾಗಬೇಕಾದ ಕ್ಷಣವನ್ನು ತಪ್ಪಿಸುವ ಸನ್ನಿವೇಶವಿದೆ.. ಪ್ರೀತಿಯ ಮತ್ತಿನಲ್ಲಿ ಗುರಿಯನ್ನು ಮರೆಯುವ ಹಂತಕ್ಕೆ ಬಂದಿದ್ದ ಟೋಟೋಗೆ ವೃದ್ಧ ಆಲ್ಫ್ರೆಡೋ ನಿಜವಾದ ಗುರುವಾಗುತ್ತಾನೆ. ಗುರಿಯನ್ನು ಗುರುತಿಸಿ ಕೊಡುತ್ತಾನೆ. ಟೋಟೋಗೆ ಆ ಕ್ಷಣದಲ್ಲಿ ತನ್ನ ಪ್ರೇಯಸಿಯ ಭೇಟಿಯನ್ನು ಸಾಧ್ಯವಾಗಿಸದೇ ಹೋದ ಆಲ್ಫ್ರೆಡೋ ಬಗ್ಗೆ ಸಿಟ್ಟು, ಅಸಹನೆ...ಎಷ್ಟೇ ಹತಾಶೆ ಅನುಭವಿಸಿದರೂ ಆ ನೋವು ಆತನಿಗೆ ಗುರಿಯನ್ನು ದಿಟ್ಟಿಸಿ ನೋಡಲು ಸಹಕರಿಸುತ್ತದೆ. ಟೋಟೋಗದು ಅವನ ಮುಪ್ಪಿನ ಸಮಯದಲ್ಲಿ ಗೊತ್ತಾಗುತ್ತದೆ.<br />
------------------------------<br />
ಬಿಟ್ಟೂ ಬಿಡದೇ ಕಾಡುವ ಅವಳ ಮುಂಗುರುಳು, ಅದ್ಯಾವುದೋ ಅಪರ ಘಳಿಗೆಯಲ್ಲೂ ಮಾಸದೇ ಉಳಿದ ನಗು, ಮೊಬೈಲಿನ ಡ್ರಾಫ್ಟ್ ಬಾಕ್ಸಿನಲ್ಲಿ ಬಾಕಿ ಉಳಿದ ಸಿಹಿ ಸಂಕಟದ ಪುಟಾಣಿ ಸಾಲು. ಬಿಡದೇ ಸುರಿಯೋ ಜಡಿಮಳೆ, ರೈಡ್ಗಾಗೇ ಕಾದು ಕುಳಿತಂತೆ ಖಾಲಿಯಾಗಿರೋ ಜಂಟಿ ರಸ್ತೆ..ಉಫ್...ಸಾಕಪ್ಪಾ ಸಾಕು...ನೆನೆದಷ್ಟೂ ನೆನೆಯುತ್ತೇವೆ, ಕಾಡಿಸಿ ಕೊಲ್ಲಲ್ಪಡುತ್ತೇವೆ. ನಮಗೂ ಒಬ್ಬ ಆಲ್ಫ್ರೆಡೋ ಬೇಕು..<br />
ಬಿಲ್ಕುಲ್ ಬೇಕೇ ಬೇಕು. ಅವನು ನಮ್ಮನ್ನು ದೇವದಾಸನನ್ನಾಗುವುದನ್ನು ತಪ್ಪಿಸುತ್ತಾನೆ, ವಿರಹಿಯಾಗಿಯೇ ಉಳಿಯುತ್ತಾ ಸವಿ ನೆನಪಿನಲ್ಲಿ ಅನೇಕಾರು ವರ್ಷಗಳ ನಂತರ ಪ್ರೀತಿಸಿದ ಮೊದಲ ಹುಡುಗಿಯನ್ನು ಬೆಂಬತ್ತುವಂತೆ ಮಾಡುತ್ತಾನೆ. ಅವಳನ್ನು ಮೊದಲ ಬಾರಿಗೆ ಚುಂಬಿಸಿದ ಸುಖದ ಘಳಿಗೆ, ಅವಳ ಮುಂಗುರುಳನ್ನು ಉಂಗುರವಾಗಿಸಿದ ಕ್ಷಣ, ಅವಳ ಹೆಜ್ಜೆ ಮೇಲೆ ಮೊತ್ತಮೊದಲು ಹೆಜ್ಜೆಯಿಟ್ಟ ಹುರುಪು ಎಲ್ಲವೂ ನಮ್ಮ ನೆನಪಿನ ಪರಿಧಿಯಲ್ಲೇ ಹೆಪ್ಪುಗಟ್ಟಿ ಬಿಡುವಂತೆ ಮಾಡಿಬಿಡುತ್ತಾನೆ ನಮಗೆ ಗೊತ್ತೇ ಆಗದಂತೆ. ಟೋಟೋಗೆ ಬೆನ್ನಿಗಿದ್ದು ಹೇಗೆ ಪೊರೆದನೋ ಹಾಗೆ; ಒಂದು ಒಳ್ಳೆಯ, ಸಾತ್ವಿಕ, ಆರೋಗ್ಯಕರ ಸುಳ್ಳನ್ನು ಸತ್ಯವಾಗಿಸುವ ಮೂಲಕ. ನಮ್ಮನ್ನು ಹಾಗೂ ನಮ್ಮ ಪ್ರೇಯಸಿಯನ್ನು ದೂರ ಮಾಡಿ, ಬದುಕಿಗೊಂದು ಮೋಕ್ಷ ಕರುಣಿಸುತ್ತಾನೆ. ಅದರಿಂದಾಗಿ ಆ ತಿರುವಿನ ನಂತರದ ದಾರಿಗೆ ಒಂದು ವಿಸ್ಮಯವೇ ಒದಗಿ ಬಂದಿರುತ್ತದೆ.<br />
ನಮ್ಮ ಯೌವನದ ಪ್ರಣಯದ ಕ್ಷಣಗಳು ಜೀವನ ಸಾರ್ಥಕ್ಯದ ಮಹಾ ತ್ಯಾಗದ ಘಳಿಗೆಗಳು ಅಂತ ಕೊನೆಯವರೆಗೂ ಅನ್ನಿಸುವುದಕ್ಕಿಂತ ಹೆಚ್ಚಾಗಿ ಅಂತಹದೊಂದು ಸನ್ನಿವೇಶ ದಿವ್ಯವಾಗಿತ್ತು ಎನ್ನುವುದೇ ಅಳಿಸಲಾಗದ ಅಕ್ಷರ ಸ್ಪಂದನೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಸಾಧ್ಯವಾಗಿಸುವವನು ಅವನೊಬ್ಬನೇ--ಆಲ್ಫ್ರೆಡೋ. ಅವನಿಗೆ ನಮ್ಮ ಮೇಲಿರುವ ಪ್ರೀತಿ ಹೇಳಿಸುವ ಸುಳ್ಳು ಬೇಕು. ಅದರಿಂದಾಗೇ ಸಿನಿಮಾ ಪ್ರೋಜೆಕ್ಟರ್ನ ಕಿಂಡಿಯ ಮೂಲಕ ಪರದೆಯ ಮೇಲೆ ಹಾಯುವ ಬೆಳಕಿನ ಕಿರಣಗಳಲ್ಲಿ ನಮ್ಮ ಬಿಡಿ ಬಿಡಿ ಸ್ಥಬ್ದ ಚಿತ್ರಗಳಿಗೆ ಜೀವ, ಚಲನೆ ಬಂದು ಕೂರುತ್ತದೆ. ಬತ್ತಿದ ಜೀವ ಸೆಲೆ ಮತ್ತೆ ಪುಟಿದುಕೊಂಡಂತೆ, ಚಿಕ್ಕ ಮಕ್ಕಳಂತೆಯೇ ಗಾಳಿಪಟ ಹಿಡಿದು ಓಡುತ್ತೇವೆ. ಮುಸ್ಸಂಜೆಯ ಗದ್ದೆ ಬದುವಿನಲ್ಲಿ.<br />
------------<br />
ನೋಡ ನೋಡುತ್ತಲೇ ಮಳೆಗಾಲ. ಬೆನ್ನತ್ತುತ್ತೆ ಚಳಿಗಾಲ. ಹೊದ್ದು ಮಲಗಿದರೆ ತೂರಿಕೊಳ್ಳುತ್ತೆ ಬೇಸಿಗೆಗಾಲ. ಕಾವು ಏರುವಷ್ಟರಲ್ಲಿ ಮತ್ತೆ ಮಳೆಗಾಲ...ಮಳೆಯಷ್ಟೇ ದಟ್ಟ ದರಿದ್ರ ನೆನಪೂ ಕೂಡಾ. ಅವಳೇ ಸಿಕ್ಕದಿದ್ದ ಮೇಲೆ ನೆನಪುಗಳೇ ಎಲ್ಲಾ ತಾನೇ. ಬೇಡ ಬೇಡ ಎಂದು ಬಚ್ಚಿಟ್ಟ ಆಕೆಯ ನೆನಪಿನ ಚಿಪ್ಪು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಒಡೆದು ಬಿಡುತ್ತದೆ. ಆಗ ನಮ್ಮಲ್ಲಿ ಎಲ್ಲವೂ ಇರುತ್ತದೆ. ಒಂದು ಕಾಲದಲ್ಲಿ ನಮ್ಮಲ್ಲಿ ಇಲ್ಲ ಅಂತಂದುಕೊಂಡಿದ್ದು...30 ಸೆಕೆಂಡಿನ ಟಿವಿ ಆಡ್ನಂತೆ. ಆದರೆ ಆಕೆಯಿಲ್ಲ. ಅದೆಷ್ಟೋ ವರ್ಷಗಳ ನಂತರ ನೆನಪು ವಾಸ್ತವವಾಗಿ ಬಿಡುತ್ತದೆ. ಬೆಚ್ಚಿಬೀಳುವಂತಾಗುವುದು ಆಗಲೇ. ಹುಚ್ಚೇ ಹಿಡಿದಂತಾಗುತ್ತದೆ. ಬೇಕಿದ್ದೋ ಬೇಡದೆಯೋ ಎಲ್ಲಾ ಜಂಜಡಗಳಿಂದ ಮುಕ್ತವಾಗಿ ಓಡುತ್ತೇವೆ. ಬೆತ್ತಲೆ ಓಡಿದಂತೆ. ಇಷ್ಟರವರೆಗೆ ಮಾಡಿಕೊಂಡಿದ್ದು ಹೊಂದಾಣಿಕೆ ಎನ್ನುವ ನಿಟ್ಟುಸಿರಿನೊಂದಿಗೆ. ಮತ್ತೊಮ್ಮೆ ಅಸಹ್ಯದೊಂದಿಗೆ...ಅದೇ ಹಳೇ ಗೆಳತಿಯ, ಪ್ರೇಯಸಿಯ ಮುಖವನ್ನು, ವಿಳಾಸಗಳನ್ನು ಅರಸುತ್ತಾ. ಒಂದೇ ಒಂದು ಕಿರುನಗೆಗೆ, ಒಂದೇ ಒಂದು ಬಿಸಿಯುಸಿರಿಗೆ, ಒಂದೇ ಒಂದು ಅಪ್ಪುಗೆಗೆ. ನಮ್ಮದಲ್ಲದ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದ ಮುದಿ ತಲ್ಲಣಗಳಿಗೆ...<br />
ಅದೆಷ್ಟೋ ಕನಸುಗಳನ್ನು, ಕನವರಿಕೆಗಳನ್ನು ಹಾಗೆಯೇ ಬಿಟ್ಟು ಬಂದ್ದೇವೆ ನಾವು. ಮತ್ತೆ ಅವೆಲ್ಲವನ್ನೂ ಹೆಕ್ಕಿಕೊಳ್ಳಬೇಕು ಕಾಲನ ತೆಕ್ಕೆಯಿಂದ. ನೆಮ್ಮದಿಯ ಗೂಡು ಕಟ್ಟಲು ಆಕೆಯೂ ಜೊತೆಗಿರುತ್ತಾಳೆಯೇ ಎನ್ನುವುದಷ್ಟೇ ಪ್ರಶ್ನೆ...ನೆನಪು ಮೆರವಣಿಗೆಯಲ್ಲ. ನಲಿವಿದೆ ಅಂತ ಭಾವಿಸೋ ನೋವಿನ ಸಂತೆ ಅಥವಾ ನೋವೆಂದು ಭಾವಿಸುವ ನಲಿವಿನ ಸಂತೆ. ಕತ್ತಲಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ವ್ಯಕ್ತಿಗಳಿಗೆ ರೂಪ ಕೊಡುತ್ತಾ ನಲಿವು ಕೊಡುತ್ತಾ ಮತ್ತೆ ಕೆಲವೇ ಕ್ಷಣಗಳಿಗೆ ಇರುವ ಬಣ್ಣಗಳನ್ನೆಲ್ಲಾ ಕರಗಿಸಿಕೊಂಡು ಬಿಳಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುವ ಸಿನಿಮಾ ಥಿಯೇಟರಿನ ಸ್ಕ್ರೀನಿನಂತೆ. ಅಂತಹ ಹುಚ್ಚುಗಳನ್ನು ಸಾಕಾರಗೊಳಿಸಿಕೊಳ್ಳಲು ನಮಗೆ ಎಲ್ಲವೂ ಬೇಕು.<br />
<br />
ಇಷ್ಟೆಲ್ಲಾ ಸಾಕ್ಷತ್ಕಾರವಾಗಲಾದರೂ ನಮಗೊಬ್ಬ ಆಲ್ಫ್ರೆಡೋ ಸಿಕ್ಕಬೇಕು! ನಾವೂ ಟೋಟೋನಂತೆ ಇಷ್ಟದ ಬಗೆಗೊಂದು ಹುಚ್ಚನ್ನಿಟ್ಟುಕೊಂಡು ಓಡಬೇಕು. ಯಾರದೋ ನೆನಪಿನ ಮುಡಿಯಲ್ಲಿ ನೇತಾಡುವ ಸಂಪಿಗೆ ನಮ್ಮದಾಗುವ ಸಮಯಕ್ಕೆ ಹಂಗಿಲ್ಲ...</div>
ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com2tag:blogger.com,1999:blog-4290647614806416638.post-8680550145711160842011-03-20T10:49:00.002+05:302011-03-20T12:36:22.456+05:30ಗೆಳತಿಯೊಬ್ಬಳ ಒಂಟಿ ಮಾತು<div dir="ltr" style="text-align: left;" trbidi="on">ರಾತ್ರಿಯಾಗುತ್ತದೆ. ಕಂಪ್ಯೂಟರಿನ ಪರದೆಯ ಹಾಗೆ ಮನಸ್ಸಲ್ಲಿ ಬಣ್ಣ ಬಣ್ಣದ ವಾಲ್ ಪೇಪರುಗಳು . ಅದರಲ್ಲಿರುವುದು ಅವನ ಚಿತ್ರವೇ? ಗೊತ್ತಿಲ್ಲ. ನೆನಪಿನ ಕೊಂಡಿಗೆ ಅವನ ಹಂಗ್ಯಾಕೆ ಎಂದು ಅನೇಕ ಬಾರಿ ಅಂದುಕೊಂಡದ್ದಿದೆ. ಆದರೆ ಅವನ ಹಂಗಿಲ್ಲದೇ ನೆನಪಾದರೂ ಎಲ್ಲಿ ಮುಂದೆ ಸಾಗುತ್ತದೆ. ಕೃಷ್ಣನನ್ನು ಕುರುಕ್ಷೇತ್ರ ಯುದ್ಧದ ನಡುವೆಯೂ ಪೊರೆದದ್ದು ರಾಧೆಯ ನೆನಪಲ್ಲದೆ ಮತ್ತಿನ್ನೇನು?<br />
<br />
ಹೇಳಬೇಕು ಅಂದುಕೊಂಡಿದ್ದೆ ಅವನಿಗೆ ಹಲವಾರು ಬಾರಿ. ಮೊನ್ನೆ ಮೊನ್ನೆ ಮದುವೆ ಮನೆಯಲ್ಲಿ ಸಿಕ್ಕಾಗಲೂ. ಅಳುಕು. ತಿರಸ್ಕರಿಸುತ್ತಾನೆ ಎನ್ನುವುದಕ್ಕಲ್ಲ. ತಿರಸ್ಕರಿಸಿದರೂ ಸಹಿಸಿಕೊಂಡೇನು. ಆದರೆ ಹೀಗೆ ಬರೀ ಶಬ್ದಗಳಲ್ಲಿ ನನ್ನ ಇಷ್ಟಾನಿಷ್ಟಗಳನ್ನು ಹೇಳುತ್ತಾ ಹೋದ ಹಾಗೆ ನನ್ನೆಲ್ಲಾ ಭಾವನೆಗಳು ಬಿಜಿನೆಸ್ ಪ್ರಪೋಜಲ್ನಂತೆ ಕಾಣುತ್ತವೆ. ನನಗೆ ಅವನ ಬಗ್ಗೆ ಇರುವ ಭಾವನೆಗಳನ್ನೆಲ್ಲಾ ಹೇಳಿಕೊಂಡರೆ ನನ್ನಲ್ಲೇನು ಉಳಿಯಿತು ಬಚ್ಚಿಟ್ಟುಕೊಳ್ಳುವುದಕ್ಕೆ. ಬಚ್ಚಿಟ್ಟುಕೊಳ್ಳುವುದರಲ್ಲೂ ಸುರೀಳಿತ ಸುಖವಿದೆ ಎನ್ನುವುದೂ ಗೊತ್ತಾಗಿದ್ದೂ ಇವತ್ತೇ. ಹಿಂದೆಲ್ಲಾ ಕಾಕಿ ಹಪ್ಪಳವೋ, ಸಂಡಿಗೆಯೋ ಕಾಯಲು ಹೇಳಿದಾಗ ಕದ್ದುಕೊಂಡು ಹೋಗಿ ತಿನ್ನುವಾಗ ಆಗುತ್ತಿದ್ದ ಭಯದ ಚೂರುಪಾರೂ ಈಗಲೂ ಆಗುತ್ತದೆ. ಹೇಳಿಬಿಟ್ಟರೆ ಆ ಭಯ ಇಮ್ಮಡಿಯಾಗಬಹುದು.<br />
<br />
ಆತ ಹಾಗೆಯೇ ಇರಲಿ. ಆತನಿಗೆ ನಾನೂ ಆತನನ್ನು ಇಷ್ಟಪಡುತ್ತಿದ್ದೇನೆ ಎನ್ನುವ ಸಣ್ಣ ಅನುಮಾನವಿದೆ. ಅದು ಹಾಗೆಯೇ ಇರಲಿ. ಯಾಕಾದರೂ ಹೇಳಬೇಕು. ಹೀಗೇ ಬದುಕಬಹುದಲ್ಲ. ಹೇಳಿಕೊಳ್ಳದೇ ಇರುವುದರಲ್ಲಿ ಇರುವ ಸುಖ ಹೇಳಿಕೊಳ್ಳುವುದರಲ್ಲೇನಿದೆ? ಹೇಳಿದರೆ ಹೇಳಿಕೆ ಬೇಡಿಕೆಯಾಗುತ್ತದೆ. ಬೇಡಿಕೆ ಹುಕುಂ ಆಗುತ್ತದೆ. ಮತ್ತೆ ಬರುವುದು ಬಗರ್ ಹುಕುಂ...ಮತ್ತೆ ಹೂಂ ಅನ್ನುವಲ್ಲೆಲ್ಲಾ ಊಹೂಂ ಎನ್ನುತ್ತಾ ಕೂರಬೇಕು..ಊಹೂಂಗಳೆಲ್ಲಾ ಹೂಂಗಳಾಗುತ್ತವೆ. ಇಷ್ಟ ಬಲು ಕಷ್ಟ.<br />
<br />
ಮೊಬೈಲಿಗೆ ಕಾಲ್ ಮಾಡಿದಾಗಲೆಲ್ಲಾ ಸಾವಿರಕ್ಕಾಗುವಷ್ಟು ಮಾತು ಆತನದ್ದು. ಎದುರು ಸಿಕ್ಕಾಗ ಮಾತೇ ಆಡುವುದಿಲ್ಲ. ನನ್ನ ಕಣ್ಣನ್ನೇ ನೋಡುತ್ತಾ ಆಹ್ಲಾದಕರ ದೃಶ್ಯವೊಂದನ್ನು ಮನದಲ್ಲಿ ಸಂಯೋಜಿಸುತ್ತಿರಬೇಕು. ಆತನ ತುಟಿಯಂಚು ನಕ್ಕಾಗ ಉಬ್ಬುತ್ತಾ ಉದ್ದವಾಗುವುದನ್ನೇ ನೋಡುವುದೇ ಒಂದು ಆನಂದ. ಮೊನ್ನೆ ಭೇಟಿಯಾಗಿದ್ದಾಗ ಆತ ಮಾಡಿದ್ದನ್ನು ನೋಡಬೇಕಿತ್ತು. ನಾನು ನಿತ್ಯದ ಅಪೂರ್ವ ಫಳಿಗೆಯ ದಿನಚರಿ ಒಪ್ಪಿಸುತ್ತಿದ್ದಾಗಲೇ ಆತ ಹಾಗೇ ಸುಮ್ಮನೆ ನನ್ನ ಕೈ ಹಿಡಿದುಕೊಂಡ. ನೈಲ್ ಪಾಲಿಶ್ ಹಾಕದೇ ಇದ್ದ ಉಗುರುಗಳನ್ನು ಮುಟ್ಟುತ್ತಾ ಸಾಗಿದ. ಸ್ಪರ್ಶದಲ್ಲೊಂದು ಪುಳಕವಿದೆ, ಉನ್ಮಾದವಿದೆ ಎಂದು ಗೊತ್ತಾದ ದಿನವದು. ಪ್ರತೀ ಸಲ ಸಿಕ್ಕಾಗ ಆತ ಇನ್ಯಾವುದೋ ರೀತಿಯಲ್ಲಿ ಸ್ಪರ್ಶಿಸುತ್ತಾ ಭೇಟಿಗಳನ್ನು ಮತ್ತಷ್ಟು ಬೇಗ ಸಾಧ್ಯವಾಗಲಿ ಎನ್ನುವಂತೆ ಮಾಡುತ್ತಾನೆ. ಹಿಂದೊಮ್ಮೆ ಕುತ್ತಿಗೆಯ ಹಿಂದಿನ ಬೆನ್ನ ಭಾಗವನ್ನಷ್ಟೇ ಸ್ಪರ್ಶಿಸಿ ನಗುತ್ತಾ ಎದ್ದುಹೋಗಿದ್ದ. ಮತ್ತೆ ಆಸಾಮಿಯದ್ದೂ ವಾರವಾದರೂ ಪತ್ತೆಯಿಲ್ಲ. ಎದುರು ಸಿಕ್ಕಾಗ ಮಾತಿಗಿಂತ ಆತನ ಮೌನದ ಜೊತೆಗಿನ ಇಂತಹ ತುಂಟತನಗಳೇ ನನ್ನನ್ನು ಬೆಳೆಸುತ್ತವೆ. ಸಣ್ಣ ಹೆಜ್ಜೆ, ಸಣ್ಣ ವಿಷಯ ಎಷ್ಟು ಖುಷಿಯ ಕ್ಷಣಗಳಲ್ಲಾ ಎನಿಸುತ್ತದೆ.<br />
<br />
"ತಿಂಗಳ ರಾತ್ರಿ ತೊರೆಯ ಸಮೀಪ, ಉರಿದಿದೆ ಯಾವುದೋ ದೀಪ" ಎನ್ನುವ ಕವಿತೆಯ ಸಾಲು ಆತನಿಗೆ ಬಹಳ ಇಷ್ಟ..ಆ ಸಾಲುಗಳನ್ನು ಕೇಳುತ್ತಿದ್ದ ಹಾಗೇ ಆತ ಮೈ ಮರೆಯುತ್ತಾನೆ. ಉಲ್ಲಾಸದಿಂದ ಬದುಕಿನ ಬಗ್ಗೆ ಹೊಸ ಕನಸುಗಳನ್ನು ಹೆಣೆದುಕೊಳ್ಳುತ್ತಾನೆ. ಅಂತಹ ನೆನಪುಗಳನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಸಾಧ್ಯವಾಗುವ ಸಮಯ, ನಿಮಿಷಗಳಲ್ಲೇ ಜಗತ್ತು ನಿಂತು ಬಿಡಬೇಕು ಅಂತ ಅನಿಸುತ್ತದಂತೆ ಆತನಿಗೆ. ಯಾಕೆ ಅನ್ನೋದು ಯಥಾ ಪ್ರಕಾರ ನನ್ನ ಪ್ರಶ್ನೆ. ಪ್ರಶ್ನೆಗಳನ್ನು ಹೆಣಿಯುತ್ತಾ ಉತ್ತರಗಳನ್ನೇ ಬಯಸುತ್ತಾ ಕೂತರೆ ನೆಮ್ಮದಿ ಸುಡುತ್ತದೆ ಎಂದ...ಅರ್ಥವಾಗಲಿಲ್ಲ...ಅವನಿಗದು ಅರ್ಥವಾಗಿ ನೀನು ಉದ್ಧಾರವಾದ ಹಾಗೇ ಅಂತ ರಕ್ಕಸ ನಗೆ ಬೀರಿದ...ಬೇಕಿತ್ತಾ ನಂಗೆ..ನಿಗೂಢವಾಗಿದ್ದಾಗಲೇ ವಿಸ್ಮಯ ಉಳಿದುಕೊಳ್ಳೋದು. ಪ್ರೀತಿ ಅರಳೋ ಸಮಯದಲ್ಲಿ ಅದೇ ಪಂಚಾಮೃತ. ಅದವನಿಗೆ ಚೆನ್ನಾಗಿ ಗೊತ್ತಿತ್ತು..<br />
<br />
ಭಾವೋದ್ವೇಗದ ಚಕ್ರವ್ಯೂಹದಲ್ಲಿ ಸಿಕ್ಕುಬಿದ್ದವನಂತೆ ಮೆಸೇಜು ಮಾಡುತ್ತಿದ್ದ ಪ್ರತೀ ದಿನ..ದಿನಗಟ್ಲೆ, ವಾರಗಟ್ಲೆ..ಎಲ್ಲೋ ಮೆಸೇಜು ಮಾಡೋದು ತಪ್ಪಿಸಿದ ಅಂತಂದ್ರೆ ಮುಗೀತು ಕತೆ...ಮತ್ತೆ ವಾರಗಟ್ಲೆ ಪರಿಚಯವೇ ಇಲ್ಲದವರಂತೆ ಇದ್ದು ಬಿಡುತ್ತಿದ್ದ...ಮೊದ ಮೊದಲು ಜಗಳ ಕಾಯುತ್ತಿದ್ದೆ. ನಿನ್ನ ನೆನಪು ಕಾಡುತ್ತದೆ, ನಿನ್ನ ಮುಖ ಕಣ್ಣೆದುರಿನಿಂದ ಜಾರುವುದಿಲ್ಲ. ಕಡೇ ಪಕ್ಷ ಹಾಯ್ ಅಂತಾದ್ರೂ ಮೆಸೇಜು ಮಾಡೋ ಅಂದಿದ್ದಕ್ಕೆ "ಎಲ್ಲವೂ ಹಚ್ಚಿಕೊಂಡಾಗ ಮಾತ್ರ ಹುಚ್ಚಾಗುತ್ತದೆ. ಹುಚ್ಚು ಯಾವತ್ತೂ ಆರೋಗ್ಯಕರವಾಗಿರಬೇಕು" ಅಂತ ಹೇಳಿ ಪಕ್ಕದ ಗಾಡಿಯಲ್ಲಿ ಕೆಂಡದ ಮಧ್ಯೆ ಕಾಯುತ್ತಿದ್ದ ಜೋಳದ ಬೆನ್ನತ್ತಿ ಹೋಗಿದ್ದ..<br />
<br />
ಈಗಲೂ ನೆನಪಿದೆ.<br />
ಅವನಿಗೆ ಆ ತಿಂಗಳು ಮೊದಲ ಸಂಬ್ಳ..ವಿಪರೀತ ಖುಷಿ ಖುಷಿಯಾಗಿದ್ದ..ಮೊದಲ ಸಂಬಳ, ಮೊದಲ ತುತ್ತು, ಮೊದಲ ಸ್ವರ ಎಲ್ಲವೂ ಅಮೂಲ್ಯ ಎನ್ನುವಾಗಲೇ ನಾನು ತಮಾಷೆಗೆ ತಟಕ್ಕನೆ ಮೊದಲ ಮುತ್ತು? ಎನ್ನುವುದನ್ನು ಮುಗ್ಧವಾಗಿ ಪ್ರಶ್ನಾರ್ಥಕವಾಗಿ ಕೇಳಿ ಮರುಕ್ಷಣವೇ ಪ್ರಬುದ್ಧೆಯಂತೆ ನಾಲಿಗೆ ಕಚ್ಚಿಕೊಂಡೆ.. ಆತನಿಗೆ ಅದ್ಯಾವ ಸೂಚನೆಯನ್ನು ನೀಡಿತೋ...ಮುಖವನ್ನು ಹತ್ತಿರ ಹತ್ತಿರಕ್ಕೆ ತಂದ...ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ....<br />
<br />
....<br />
<br />
....<br />
<br />
ಇನ್ನೂ ಕಾಯುತ್ತಿದ್ದೇನೆ.<br />
<br />
</div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com3tag:blogger.com,1999:blog-4290647614806416638.post-55011318585702329552011-03-17T10:48:00.000+05:302011-03-17T10:48:19.808+05:30ನನ್ನ ಬೆಡ್ರೂಮಿನ ಗೋಡೆಗಳಿಗೆ ಪೈಂಟ್ ಮಾಡಿಸಬೇಕಾಗಿದೆ<div dir="ltr" style="text-align: left;" trbidi="on"><br />
ನನ್ನ ಬೆಡ್ರೂಮಿನ<br />
ಗೋಡೆಗಳಿಗೆ<br />
ಪೈಂಟ್ ಮಾಡಿಸಬೇಕಾಗಿದೆ<br />
<br />
ಇಡೀ ಚಿತ್ರಗಳೆಲ್ಲಾ<br />
ಹುಡಿ ಹುಡಿ<br />
ಹುಡುಗಿಯ ಕಣ್ಣು<br />
ಒಂದೂವರೆ ಕಾಲಿನ ಮುದುಕಪ್ಪ<br />
ಹಾರಿ ಹೋಗಲಿಕ್ಕೆ<br />
ರೆಕ್ಕೆ ಬಡಿದ ಹಕ್ಕಿ...ಓಫ್<br />
ಉಳಿದದ್ದು ದೀರ್ಘ ಹಗಲು<br />
<br />
ನಾಚುತ್ತಾ ನೀರು<br />
ತರಲು ನಿಂತ<br />
ಹೆಣ್ಣಿನ ಚಿತ್ರ<br />
ಮಗ್ಗುಲಲಿ<br />
ದಿಬ್ಬಣದ ಅಬ್ಬರ<br />
ಮೇಲೆ ಕೆಳಗೆ<br />
ಬರಿದಾದದ್ದು<br />
ಉಸಿರೆಳೆದ ಹೆಣ್ಣು<br />
ಉಳಿದದ್ದು ಸಾಯುತ್ತಿರುವ<br />
ರಾತ್ರಿ<br />
<br />
ನನ್ನ ಬೆಡ್ರೂಮಿನ<br />
ಗೋಡೆಗಳಿಗೆ<br />
ಪೈಂಟ್ ಮಾಡಿಸಬೇಕಾಗಿದೆ<br />
</div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com4tag:blogger.com,1999:blog-4290647614806416638.post-18014837493404557262011-01-11T00:10:00.003+05:302011-01-11T00:22:59.566+05:30ಗುರುತೇ ಇರದ ಸಾಲುಗಳು<div style="text-align: center;">1</div><div style="text-align: center;">ಜರೂರತ್ತು</div><div style="text-align: center;">ಜವಾಬ್ದಾರಿ</div><div style="text-align: center;">ಜಮಾನ</div><div style="text-align: center;">ಜನ</div><div style="text-align: center;">ಜಾತ್ರೆ</div><div style="text-align: center;">ಜೈ ಹೋ</div><div style="text-align: center;"><br />
</div><div style="text-align: center;">2</div><div style="text-align: center;">ಮಳೆಯ</div><div style="text-align: center;">ಮೊದಲ ಹನಿಗೆ</div><div style="text-align: center;">ದನಿಗೂಡಿಸಿ ಹಾಡಿದ</div><div style="text-align: center;">ಬೀಜದಲ್ಲಿ ಬದುಕು</div><div style="text-align: center;"><br />
</div><div style="text-align: center;">3</div><div style="text-align: center;">ಮುತ್ತೆಲ್ಲಾ</div><div style="text-align: center;">ಮೌನವಾಗಿ</div><div style="text-align: center;">ಮೌನ ಬಸಿರಾಗಿ</div><div style="text-align: center;">ಮುಂಜಾನೆಯಾಗುವ ಹೊತ್ತು</div><div style="text-align: center;"><br />
</div><div style="text-align: center;">4</div><div style="text-align: center;">ಛಾಯೆ ಬಿಟ್ಟು ಹೋದ ಚಿತ್ರ</div><div style="text-align: center;">ಬಿಸಿಲಲ್ಲೇ ಮನೆ ಮಾಡಿತು.</div><div style="text-align: center;"><br />
</div><div style="text-align: center;">5</div><div style="text-align: center;">ತುಟಿಯಲ್ಲಿ ಉಳಿದ ಪ್ರಶ್ನೆಗಳು</div><div style="text-align: center;">ಉತ್ತರಗಳಿಗೆ ಚುಂಬಿಸುವ ಮನಸ್ಸಿಲ್ಲ</div><div style="text-align: center;"><br />
</div><div style="text-align: center;">6</div><div style="text-align: center;">ಹೇಳಿ ಹೋಗದ ಕಾರಣ</div><div style="text-align: center;">ಒಡೆದ ಬಿಂಬವ ಸೂಸುವ ಕನ್ನಡಿ</div><div style="text-align: center;"><br />
</div><div style="text-align: center;">7</div><div style="text-align: center;">ಅವಳ ತುಟಿಯಂಚಿನ ನಗೆಯಲ್ಲಿ</div><div style="text-align: center;">ಹುಟ್ಟಿದ ಯೌವನಕ್ಕೆ</div><div style="text-align: center;">ವಯಸ್ಸಿಲ್ಲ.</div><div style="text-align: center;"><br />
</div><div style="text-align: center;">8</div><div style="text-align: center;">ಮುಟ್ಟಿದರೆ ಮುನಿಯುತ್ತಾಳೆ</div><div style="text-align: center;">ದೂರ ಸರಿದರೆ ತೆಕ್ಕೆಗೆಳೆಯುತ್ತಾಳೆ</div><div style="text-align: center;">ಹರೆಯಕ್ಕೆ ಉಸಿರಿದೆ</div><div style="text-align: center;">ಅನ್ನೋದೇ ಮರೆತು ಹೋಗಿದೆ</div><div style="text-align: center;"><br />
</div><div style="text-align: center;">9</div><div style="text-align: center;">ಅವಳ ಕೈಯಲ್ಲಿ</div><div style="text-align: center;">ಉಳಿದು ಹೋದ</div><div style="text-align: center;">ರಂಗೋಲಿ ಹುಡಿಯಲ್ಲಿ</div><div style="text-align: center;">ನನ್ನ ಮದರಂಗಿ</div><div style="text-align: center;"><br />
</div><div style="text-align: center;">10</div><div style="text-align: center;">ಕೊಡೆಯ ತುದಿಯಿಂದ</div><div style="text-align: center;">ಕವಲೊಡೆದ ನೀರ ಹನಿಗಳಲ್ಲಿ</div><div style="text-align: center;">ಸಾವಿರ ಬಿಸಿ ನಿಟ್ಟುಸಿರು</div><div style="text-align: center;"><br />
</div><div style="text-align: center;">11</div><div style="text-align: center;">ಅವಳ ಹೆಜ್ಜೆಯ ಗುರುತಿನಡಿ</div><div style="text-align: center;">ಹಾರಿದ ಗಾಳಿಪಟಕ್ಕೆ</div><div style="text-align: center;">ನೆನಪಿನ ಹಂಗಿಲ್ಲ!</div><div style="text-align: center;"><br />
</div><div style="text-align: center;"><br />
</div><div style="text-align: center;">12</div><div style="text-align: center;">ನಿನ್ನ ತುಟಿಯ</div><div style="text-align: center;">ಜೇನ ಹೀರುವ ಹೊತ್ತಿಗೆ</div><div style="text-align: center;">ನಾನು</div><div style="text-align: center;">ಗುಲಾಬಿಯ ಪಕಳೆ</div><div style="text-align: center;"><br />
</div><div style="text-align: center;">13</div><div style="text-align: center;">ನಿನ್ನ ಕಂಗಳಲ್ಲಿ</div><div style="text-align: center;">ಅರಳುತ್ತಿರುವ</div><div style="text-align: center;">ಹೂವಿಗೆ</div><div style="text-align: center;">ನನ್ನ</div><div style="text-align: center;">ಪರಿಮಳ</div><div style="text-align: center;"><br />
</div><div style="text-align: center;">14</div><div style="text-align: center;">ಮುಖ ಮೂಕ!</div><div style="text-align: center;"><br />
</div><div style="text-align: center;">15</div><div style="text-align: center;">ಪ್ರಶ್ನೆಗಳಿರುವುದೇ ಸುಮ್ಮನೆ!</div><div style="text-align: center;"><br />
</div><div style="text-align: center;">16</div><div style="text-align: center;">ಒಪ್ಪಿಗೆ ಒಲವಲ್ಲ</div><div style="text-align: center;">ನಗು ನಲಿವಲ್ಲ</div><div style="text-align: center;"><br />
</div><div style="text-align: center;">17</div><div style="text-align: center;">ಕರುಣೆ ಇರಲಿ!</div><div style="text-align: center;"><br />
</div><div style="text-align: center;">18</div><div style="text-align: center;">ದನಿ ನಡುಗುತ್ತಾ</div><div style="text-align: center;">ಕಣ್ಣು ಜಲಪಾತವಾಗುವ ಹೊತ್ತಿಗೆ</div><div style="text-align: center;">ನೀನು ನೆನಪಿನ ಹಂಗು ತೊರೆದ</div><div style="text-align: center;">ಸಮುದ್ರ</div><div style="text-align: center;"><br />
</div><div style="text-align: center;"><br />
</div><div style="text-align: center;">19</div><div style="text-align: center;">ಬೆಟ್ಟದ ಮೇಲೆ</div><div style="text-align: center;">ನಿಂತ ಒಂಟಿ ಶವಕ್ಕೆ</div><div style="text-align: center;">ಹಾರಾಡುವ</div><div style="text-align: center;">ಉಸಿರು</div><div style="text-align: center;"><br />
</div><div style="text-align: center;">20</div><div style="text-align: center;">ನೋವು</div><div style="text-align: center;">ಅಭ್ಯಾಸವಾದರೆ</div><div style="text-align: center;">ಜೇನ</div><div style="text-align: center;">ಹನಿ</div><div style="text-align: center;">ಕಹಿ</div><div style="text-align: center;"><br />
</div><div style="text-align: center;">21</div><div style="text-align: center;">ಪಟಪಟಿಸುವ</div><div style="text-align: center;">ನಿನ್ನ</div><div style="text-align: center;">ಸೀರೆ ಸೆರಗೊಳಗೆ</div><div style="text-align: center;">ನನ್ನ</div><div style="text-align: center;">ಬೆವರು ಹಸಿರು</div><div style="text-align: center;"><br />
</div><div style="text-align: center;">22</div><div style="text-align: center;">ಅವಳ</div><div style="text-align: center;">ಮುಖದ</div><div style="text-align: center;">ನೆರಿಗೆಗಳಲ್ಲಿ</div><div style="text-align: center;">ವಿರಮಿಸದ</div><div style="text-align: center;">ನಾನು</div><div style="text-align: center;"><br />
</div><div style="text-align: center;">23</div><div style="text-align: center;">ಎಲ್ಲಾ</div><div style="text-align: center;">ಕಳೆದ ಮೇಲೆ</div><div style="text-align: center;">ಉಳಿದಿರುವುದರ</div><div style="text-align: center;">ಲೆಕ್ಕ</div><div style="text-align: center;">ಏತಕ್ಕೆ?</div><div style="text-align: center;"><br />
</div><div style="text-align: center;">24</div><div style="text-align: center;">ಕಣ್ಣ</div><div style="text-align: center;">ಒಳಗೆ ಬಿದ್ದ</div><div style="text-align: center;">ಕಾಮನಬಿಲ್ಲು</div><div style="text-align: center;">ನೋವುಗಳೆಲ್ಲಾ</div><div style="text-align: center;">ನಕ್ಕ</div><div style="text-align: center;">ಕ್ಷಣ</div><div style="text-align: center;"><br />
</div><div style="text-align: center;">25</div><div style="text-align: center;">ಮುಂಗುರುಳ</div><div style="text-align: center;">ತುದಿಯಲ್ಲಿ</div><div style="text-align: center;">ಅಂಟಿದ</div><div style="text-align: center;">ವಿಶಾದಕ್ಕೆ</div><div style="text-align: center;">ಗುರುತೇ ಇರದ</div><div style="text-align: center;">ಮುಖವಾಡ</div><div style="text-align: center;"><br />
</div><div style="text-align: center;">26</div><div style="text-align: center;">ಕಾಲವಾಗಿರುವ</div><div style="text-align: center;">ಸತ್ಯಗಳ</div><div style="text-align: center;">ಗೋರಿಯ ಮೇಲೆ</div><div style="text-align: center;">ನಾಳೆಯ ಹಾಡು</div><div style="text-align: center;"><br />
</div><div style="text-align: center;">27</div><div style="text-align: center;">ಮೊಳಕೆ</div><div style="text-align: center;">ಮರವಾಗುವ ಹೊತ್ತಿಗೆ</div><div style="text-align: center;">ಬಾಳ ಮುಸ್ಸಂಜೆಯಲ್ಲಿ</div><div style="text-align: center;">ಅವಳು.</div><div style="text-align: center;"><br />
</div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com4tag:blogger.com,1999:blog-4290647614806416638.post-62169208048949039782010-09-02T12:58:00.002+05:302010-09-02T18:24:06.641+05:30ಸಂತೆಯಲಿ ನಿಂತಂತೆ, ಪ್ರೀತಿ ಕತೆಯಲ್ಲೊಂದು ಗೊಂದಲಾಪುರ<div style="margin-bottom: 0px; margin-left: 0px; margin-right: 0px; margin-top: 0px; text-align: center;"><div style="text-align: left;"><b>(ಸೆಪ್ಟೆಂಬರ್ ತಿಂಗಳ "ರೂಪತಾರಾ"ದ ಸಂವಾದ ವಿಭಾಗದಲ್ಲಿ ಪ್ರಕಟವಾದ ಬರಹ)</b></div></div><div style="margin-bottom: 0px; margin-left: 0px; margin-right: 0px; margin-top: 0px; text-align: center;"><div style="text-align: left;"><br />
</div></div><div style="margin-bottom: 0px; margin-left: 0px; margin-right: 0px; margin-top: 0px; text-align: left;"></div><div style="margin-bottom: 0px; margin-left: 0px; margin-right: 0px; margin-top: 0px; text-align: left;">ಹೆಸರೇ ಹೇಳುವಂತೆ ಇದು ಕೃಷ್ಣನ್ ಲವ್ ಸ್ಟೋರಿ..ಒಂದು ಪ್ರೀತಿಯ ಕತೆಗೆ ಬೇಕಾದ ಎಲ್ಲವೂ ಇಲ್ಲಿದೆ. ನಾಯಕಿಯ ಪ್ರೀತಿಯ ಮೋಡಿಗೆ ಒಳಗಾಗುವ ನಾಯಕ, ಬಡತನದಲ್ಲಿದ್ದೂ ಮಹಾತ್ವಾಕಾಂಕ್ಷೆಯ ಮೆಟ್ಟಿಲು ಹತ್ತಲು ರೆಡಿಯಾಗಿ ನಿಂತಿರುವ ಘಾಟಿ ನಾಯಕಿ, ಕುಡುಕ ಅಣ್ಣ, ಪ್ರೀತಿಯ ಅಪ್ಪ ಹೀಗೆ ಎಲ್ಲರಿಗೂ ಅವರದ್ದೇ ಆದ ವಿಸ್ತಾರವಿದೆ, ಮಿತಿಯಿದೆ..ಒಂದು ಪ್ರೇಮಕತೆಯ ಚಿತ್ರದಲ್ಲಿ ಏನೆಲ್ಲಾ ಇರಬಹುದು ಎಂದು ನಾವೆಲ್ಲಾ ನಿರೀಕ್ಷಿಸಬಹುದೋ ಅದೆಲ್ಲಾ ಇದೆ...ಅದಕ್ಕಿಂತ ಹೊರತಾಗಿ ಹದಿಹರೆಯದ ಹುಡುಗರ ಭಾಷೆಯಲ್ಲಿ ಹೇಳಬಹುದಾದ ಫುಲ್ ಫೀಲಿಂಗಿದೆ!....ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನಿರ್ದೇಶಕನೆಂಬ ನಿಜವಾದ ನಾಯಕನಿದ್ದಾನೆ.</div><div><br />
</div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEibp_n6XCU3xZ3XqlnL0hDBjrg0dNKyRZ3sIz4mgLNWl4ssmcAElTE2Ex-5cRge8fo9Kk_bbDIkiFU6C3i_7UgusCoXdlhQfjmRi1TacaLWRMMVuHSn_Is-8-9jYtuxeEVMn1oA6t6QlFjF/s1600/krishnan-love-story-stills08.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEibp_n6XCU3xZ3XqlnL0hDBjrg0dNKyRZ3sIz4mgLNWl4ssmcAElTE2Ex-5cRge8fo9Kk_bbDIkiFU6C3i_7UgusCoXdlhQfjmRi1TacaLWRMMVuHSn_Is-8-9jYtuxeEVMn1oA6t6QlFjF/s320/krishnan-love-story-stills08.jpg" width="287" /></a></div><br />
<div style="text-align: center;"><br />
</div><div style="text-align: left;"></div><div style="text-align: left;">ಉತ್ತಮವಾದ ಪ್ರತೀ ದೃಶ್ಯಕ್ಕೂ ಒಂದು ಆರಂಭ, ಮಧ್ಯಂತರ ಹಾಗೂ ಕೊನೆ ಇದ್ದೇ ಇರುತ್ತದೆ. ನಾಯಕ ನಾಯಕಿಯೆದುರು ಪ್ರೀತಿ ನಿವೇದನೆ ಮಾಡುವ ದೃಶ್ಯವೇ ಇರಲಿ, ಅಥವಾ ನಾಯಕಿ ನಾಯಕನನ್ನು ತಿರಸ್ಕರಿಸುವ ದೃಶ್ಯವೇ ಇರಲಿ, ಮೇಲೆ ಹೇಳಿದ 3 ಹಂತಗಳು ಇದ್ದೇ ಇರುತ್ತವೆ. ಇದೆಲ್ಲಾ ಪರಿಣಾಮಕಾರಿಯಾಗಿದ್ದಾಗ ಮಾತ್ರ ದೃಶ್ಯವೊಂದರ ತೀವ್ರತೆಯನ್ನು, ಆದ್ರತೆಯನ್ನು, ನಲಿವನ್ನು ಕಟ್ಟಿಕೊಡಲು ಸಾಧ್ಯ. ಯೋಗರಾಜ್ ಭಟ್ಟರ ಮುಂಗಾರು ಮಳೆ ಗೆಲ್ಲಲು, ಜನಸಾಮಾನ್ಯನಲ್ಲಿ ನೆಲೆ ನಿಲ್ಲಲು ಚಿತ್ರಕತೆಯಲ್ಲಿ ಬರುವ ಇಂತಹ ಅಂಶಗಳ ಯಶಸ್ವಿ ಅಳವಡಿಕೆಯೇ ಕಾರಣ. ಈ ಸಿನಿಮಾಕ್ಕೆ ಶಶಾಂಕ್ ಆಯ್ದುಕೊಂಡ ಕತೆ ತುಂಬಾ ಸರಳವಾದದ್ದು. ಆದರೆ ಅದನ್ನು ಒಂದು ಚಿತ್ರವಾಗಿ ತೆರೆ ಮೇಲೆ ನಿರೂಪಿಸುವ ರೀತಿಯಿಂದ ಗಮನ ಸೆಳೆಯುತ್ತದೆ. ಚಿತ್ರಕ್ಕಿರುವ ಸಮಸ್ಯೆ ಪ್ರಥಮಾರ್ಧ. ಆರ್ಡಿನರಿ ಅಂತನ್ನಿಸುವ ವಿಷಯವನ್ನು ಆಪ್ತವಾಗಿ ಚಿತ್ರಿಸುವಂತೆ ಮಾಡುವ ಶಕ್ತಿ ಪ್ರತೀ ದೃಶ್ಯಕ್ಕಿದೆ. ಆದರೆ ಕೃಷ್ಣನ ಲವ್ ಸ್ಟೋರಿಯ ಪ್ರಥಮಾರ್ಧ ದೃಶ್ಯದ ಮಿಸ್ ಮ್ಯಾನೇಜ್ಮೆಂಟಿನಲ್ಲೇ ಬೋರ್ ಹೊಡೆಸುತ್ತದೆ. ಚಿತ್ರ ಶುರುವಾಗುವಾಗಲೇ ಚಿತ್ರಕತೆಗೆ ಧಾವಂತವಿದೆ. ಎಲ್ಲಾ ಪಾತ್ರಗಳನ್ನು ಆದಷ್ಟು ಬೇಗ ಎಸ್ಟಾಬ್ಲಿಶ್ ಮಾಡಿಬಿಡಬೇಕೆಂಬ ಅವಸರ ಯಾಕೋ ನೋಡುಗನಲ್ಲಿ ಅಸಹನೆ ಹೆಚ್ಚಿಸುತ್ತದೆ. ಇಂತಹ ಧಾವಂತದಿಂದಾಗಿಯೇ ಅರ್ಧಕ್ಕೇ ಕಟ್ಟಾಗುವ ದೃಶ್ಯದ ಫ್ಲೋ ಲೆವೆಲ್ನಿಂದ ಕಿರಿಕಿರಿ ಮತ್ತಷ್ಟು ಹೆಚ್ಚುತ್ತದೆ. ಸಂಕಲನದ ಸಂದರ್ಭದಲ್ಲಿ ಕತ್ತರಿಯಾಡಿಸುವಾಗ ಎಡವಟ್ಟಾಗಿದೆಯಾ ಎನ್ನುವ ಅನುಮಾನ ಬರುತ್ತದೆ. ಗಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ದೃಶ್ಯಗಳಲ್ಲಿ ಇವೆಲ್ಲಾ ಎದ್ದು ಕಾಣುತ್ತದೆ. </div><div style="text-align: left;"><br />
</div><div style="text-align: left;">ಇಂಟರ್ವಲ್ನ ನಂತರದ ದ್ವಿತೀಯಾರ್ಥ ಸರಾಗವಾಗಿದೆ. ಕತೆಯ ಜೀವಾಳವಿರುವುದು ದ್ವಿತೀಯಾರ್ಧವನ್ನು ಶಶಾಂಕ್ ನಿಭಾಯಿಸುವ ರೀತಿಯಲ್ಲಿ. ಒಂದು ವಾದವಾಗುವ ಎಲ್ಲಾ ಅಪಾಯಗಳಿದ್ದ ದೃಷ್ಟಿಕೋನವನ್ನು ದೃಶ್ಯವಾಗಿ ಸೆರೆಹಿಡಿಯುವಲ್ಲಿ ಅವರ ಜಾಣ್ಮೆ ಕೆಲಸ ಮಾಡಿದೆ. ನಾಯಕಿಯ ದೃಷ್ಟಿಕೋನದಲ್ಲಿ ಕತೆಯನ್ನು ಬೆಳೆಸುವ, ನೋಡುವ ಶಶಾಂಕ್ ಶೈಲಿ ಕನ್ನಡಕ್ಕೆ ಹೊಸತೇನೂ ಅಲ್ಲದಿದ್ದರೂ ಇವತ್ತಿನ ಕಮರ್ಶಿಯಲ್ ಅಂಶಗಳ ನಡುವೆ ಅದನ್ನವರು ನಿಭಾಯಿಸುವ ರೀತಿ ಖುಷಿ ಕೊಡುತ್ತದೆ. ಇಡೀ ಚಿತ್ರವನ್ನು ಸಹ್ಯಗೊಳಿಸಿರುವುದು ರಾಧಿಕಾ ಪಂಡಿತ್ ಅಭಿನಯ..ದ್ವಿತೀಯಾರ್ಧದಲ್ಲಿ ಆಕೆ ಇಡೀ ಚಿತ್ರವನ್ನು ಆವರಿಸಿಕೊಂಡು ಬಿಡುತ್ತಾಳೆ.. ಗೀತಾಳ ಸಿಟ್ಟು, ಅಸಹಾಯಕತೆ, ಪಾಪಪ್ರಜ್ಞೆ ಎಲ್ಲವನ್ನೂ ಶಶಾಂಕ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ...ಆಕೆಯ ಪ್ರತೀ ನಡಿಗೆ, ಚಲನೆ, ನೋಟ, ಮಾತಿನ ಧಾಟಿ ಎಲ್ಲದರಲ್ಲೂ ಪಾತ್ರದ ಬೇಗುದಿಯಿದೆ....ನಾಯಕನನ್ನು ಬಿಟ್ಟು ಹೋಗಿ ಆಕೆ ವಾಪಾಸ್ ಬಂದಾಗ ಸೃಷ್ಟಿಯಾಗುವ ಮುಜುಗರ, ಅವಮಾನ, ಹಿಂಸೆ, ಅಕ್ಕರೆ, ಅಸಹಾಯಕತೆಯ ವಾತಾವರಣ ಎಲ್ಲವನ್ನೂ ವ್ಯವಸ್ಥಿತವಾಗೇ ನಿಭಾಯಿಸಿದ್ದಾರೆ.</div><div style="text-align: left;"><br />
</div><div style="text-align: left;">ನಾಯಕಿಯ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಕಮರ್ಶಿಯಲ್ ಸೂಕ್ಷ್ಮಗಳನ್ನೊಳಗೊಂಡು ಕಟ್ಟಿಕೊಡುವ ಶಶಾಂಕ್ ಇತರೇ ಪಾತ್ರಗಳ ಇರುವಿಕೆಯನ್ನು ಪೇಲವ ಮಾಡಿಬಿಡುತ್ತಾರೆ ಕೆಲವೊಮ್ಮೆ...ಚಿಕ್ಕಪುಟ್ಟ ಪಾತ್ರಗಳನ್ನು ಮೇಲ್ಮೈಯಲ್ಲೇ ಅವಸರದಲ್ಲಿ ಚಿತ್ರಿಸಿ ಓಡುತ್ತಾರೆ. ಬೈಕನ್ನು ಸಿನಿಮಾದ ಚಿತ್ರಕತೆಯ ಟೂಲ್ ಆಗಿ ಬಳಸಿಕೊಂಡಂತೆ ನಾಯಕನ ಗೆಳೆಯರನ್ನು ನಿರೂಪಿಸುವಲ್ಲಿ ಇನ್ನಷ್ಟು ತಯಾರಿಗಳು ಬೇಕಿತ್ತು. ಚಿಕ್ಕ ಪಾತ್ರಕ್ಕೂ ನಾಯಕನಂತೆಯೇ ಸ್ವತಂತ್ರ ವ್ಯಕ್ತಿತ್ವವಿದೆ ಎನ್ನುತ್ತಾ ಪಾತ್ರಗಳನ್ನು ಕಟ್ಟುತ್ತಾ ಹೋದಾಗಲೇ ಚಿತ್ರಕತೆ, ಸಿನಿಮಾ ಇನ್ನಷ್ಟು ಗಟ್ಟಿಯಾಗೋದು...</div><div style="text-align: left;"><br />
</div><div style="text-align: left;">ಕೃಷ್ಣನ್ ಲವ್ ಸ್ಟೋರಿಯ ಕಾಮಿಡಿ ದೃಶ್ಯಗಳಲ್ಲಿ ಲವಲವಿಕೆ ಕಾಣವುದಿಲ್ಲ. ಕಾಸಿಲ್ಲದ ನಾಯಕನ ಎದುರು ಪಿಜ್ಜಾ ಕಾರ್ನರ್, ಕಾಫಿ ಡೇ ಇದೆ. ನಾಯಕನ ಪರಿಸ್ಥಿತಿಯನ್ನು ನೋಡಿ ವೆಂಕಟ್ರಮಣಾ ಗೋವಿಂದಾ, ಗೋವಿಂದಾ ಎನ್ನಲು ಶರಣ್ ಇದ್ದಾರಷ್ಟೇ....ಮೊಗ್ಗಿನ ಮನಸಿನಲ್ಲಿ ಶರಣ್ನನ್ನು ನಾಯಕರು ಹೇಳುವ ಕತೆಯ ಭಾಗವಾಗಿ ಮಾಡುವ ಮೂಲಕ ಹಾಸ್ಯವನ್ನು ನಿರೂಪಿಸುವ ತಂತ್ರವೇ ಆಕರ್ಷಕವಾಗಿ ಕಂಡಿತ್ತು ಪ್ರೇಕ್ಷಕನಿಗೆ. ಹಾಗಿದ್ದಾಗ ಮಾತ್ರ ಸಾಮಾನ್ಯವಾದ ಕಾಮಿಡಿ ಟ್ರ್ಯಾಕ್ ಕೂಡಾ ನೋಡಿಸಿಕೊಂಡು ಹೋಗುತ್ತದೆ. ನಗೆಯುಕ್ಕಿಸಲು ಒದ್ದಾಡಬೇಕಾದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ ಎನ್ನುವುದನ್ನು ನಿರ್ದೇಶಕ ಅರಿಯದೇ ಹೋದರೆ ಪ್ರೇಕ್ಷಕನೂ ವೆಂಕಟ್ರಮಣಾ ಗೋವಿಂದ ಅನ್ನುತ್ತಾನಷ್ಟೇ..</div><div style="text-align: left;"><br />
</div><div style="text-align: left;">ಪೋಷಕ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಶಶಾಂಕ್ರಲ್ಲೊಂದು ಮೋಡಿಯಿದೆ. ಅಪ್ಪನ ಸಂವೇದನೆಯನ್ನು ತುಂಬಾ ಆಸ್ಥೆಯಿಂದ ಕಟ್ಟಿಕೊಡುತ್ತಾರವರು. ಮೊಗ್ಗಿನ ಮನಸ್ಸಿನ ನಂತರ ಕೃಷ್ಣನ್ ಲವ್ ಸ್ಟೋರಿಯಲ್ಲೂ ಇದು ಪ್ರೂವ್ ಆಗಿದೆ. ಪ್ರೀತಿಯಿಂದ ಮೋಸ ಹೋದ ನಾಯಕ ಪ್ರೀತಿಯ ಉರಿಕೆಂಡವನ್ನು ಮನಸ್ಸಲ್ಲಿಟ್ಟುಕೊಂಡು ನರಳುತ್ತಾ, ಕೊನೆಗೆ ಬಾರಿಗೆ ಹೋಗಿ ಕುಡಿಯುತ್ತಾ ಕೂತಿರಬೇಕಾದರೆ ಎದುರುಗಡೆ ಆತನ ಅಪ್ಪನೂ ಕೂತಿರುವ ದೃಶ್ಯವೇ ಸಾಕು ಸಾಮಾನ್ಯನನ್ನು ತಟ್ಟಿಬಿಡುತ್ತದೆ. ಇತರ ಪಾತ್ರಗಳ ಬಗ್ಗೆ ಅಂತಹ ಆಸ್ಥೆ ಮುಂದಿನ ಚಿತ್ರಗಳಲ್ಲಿ ಇನ್ನಷ್ಟು ಹೆಚ್ಚಾದರೆ ಒಳ್ಳೇದು.</div><div style="text-align: left;"><br />
</div><div style="text-align: left;">ಇಡೀ ಸಿನಿಮಾದಲ್ಲಿ ಭಯಂಕರ ಕಿರಿಕಿರಿ ಉಂಟುಮಾಡುವುದು ಅಜೇಯ್ ರಾವ್ ಅಭಿನಯ...ಅಸಹಾಯಕ ಸನ್ನಿವೇಶಗಳಲ್ಲಿ ಅವರ ಅಸಹಾಯಕತೆಯೇ ಎದ್ದು ಕಾಣುತ್ತದೆ!...ನಾಯಕನ ಬೇಗುದಿಯನ್ನು, ಚಿರ ವ್ಯಾಮೋಹಿಯಾಗಿ ಬದುಕುವ ಕ್ಷಣಗಳನ್ನು ಜೀವಂತವಾಗಿ ಹಿಡಿದಿಡಲು ಅವರಿಗೆ ಸಾಧ್ಯವಾಗಿಲ್ಲ...ಮತ್ತೊಬ್ಬ ನಟ ಪ್ರದೀಪ್ ಎದುರು ನಟಿಸುವಾಗಲಂತೂ ಇದು ಕಣ್ಣೆದುರು ಕನ್ನಡಿ!.. ಅಜೇಯ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು...ದ್ವಿತೀಯಾರ್ಧವನ್ನು ರಾಧಿಕಾ ಪಂಡಿತ್ ಆವರಿಸಿಕೊಂಡು ಬಿಡುತ್ತಾರಾದ್ದರಿಂದ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ಸಿಕ್ಕಿದೆ. ಅಚ್ಯುತ್ರಾವ್, ಉಮಾಶ್ರಿ ಎಂದಿನಂತೆ ವಂಡರ್ಫುಲ್. ಸ್ವಯಂವರ ಮಂಜು ಅಣ್ಣನಾಗಿ, ಸಿಡುಕನಾಗಿ, ಕುಡುಕನಾಗಿ ಅಭಿನಯದಲ್ಲಿ ಗುರುತಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವುದು ಪ್ರದೀಪ್. ಇತ್ತೀಚೆಗಷ್ಟೇ ಸ್ಟಿಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದ "ನವಿಲಾದವರು" ಎನ್ನುವ ಸಿನಿಮಾದಲ್ಲಿ ಆಪ್ತವಾಗಿ ಅಭಿನಯಿಸಿದ್ದ ಪ್ರದೀಪ್, ಕೃಷ್ಣನ್ ಲವ್ ಸ್ಟೋರಿಯ ಮೂಲಕ ಮತ್ತೊಮ್ಮೆ ಭವಿಷ್ಯದ ಭರವಸೆಯ ಸೋಲೋ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ..... </div><div style="text-align: left;"><br />
</div><div style="text-align: left;">ಹಾಡುಗಳ ಚಿತ್ರೀಕರಣ, ವಿನ್ಯಾಸ ಎಲ್ಲವೂ ಮುದ ನೀಡುತ್ತದೆ... ಜಯಂತ್ ಕಾಯ್ಕಿಣಿ ಬರೆದ ಸಂತೆಯಲ್ಲಿ ನಿಂತರೂನೂ ನೋಡು ನೀನು ನನ್ನನ್ನೇ ಪ್ರೇಮೋತ್ಸವಕ್ಕೆ ನಂದಾ ದೀಪವಾದರೆ, ಮೋಸ ಮಾಡಲೆಂದು ಸದ್ಯದ ವಿರಹ ಗೀತೆ. ನೀನಾಡದ ಮಾತು ನನ್ನಲಿದೆ ಮಾಧುರ್ಯಕ್ಕೆ ಇಷ್ಟವಾಗುತ್ತದೆ. ಹಚ್ಚಿಕೊಂಡಷ್ಟು ಪ್ರೇಮಿಗಳಿಗೆ ಬದುಕು ಕಷ್ಟವಾಗುತ್ತದೆ!.. ಮುಸ್ಸಂಜೆ ಮಾತಿನ ನಂತರ ವಿ.ಶ್ರೀಧರ್ ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಂಭ್ರಮದ ರಾಗವನ್ನು ಸರಾಗವಾಗಿಸಿದ್ದಾರೆ. ಕೃಷ್ಣರ ಕ್ಯಾಮರಾ ಕೆಲಸ ಮತ್ತೆ ಸೆಳೆಯುತ್ತದೆ..ಸನ್ನಿವೇಶಗಳನ್ನು ಬೆಳಕು, ನೆರಳಿನ ನೆರಳಲ್ಲಿ ಕಟ್ಟಿಕೊಡುವಾಗಿನ ಕುಸುರಿ ಚಿತ್ರದ ಫ್ರೇಮುಗಳತ್ತ ಪ್ರೇಕ್ಷಕನಿಗೆ ಲವ್ ಅಟ್ ಫಸ್ಟ್ ಸೈಟ್!</div><div style="text-align: left;"><br />
</div><div style="text-align: left;">ಕೃಷ್ಣನ್ ಲವ್ ಸ್ಟೋರಿ ಒಮ್ಮೆ ನೋಡೋದಿಕ್ಕೆ ಓಕೆ. ಮತ್ತೊಮ್ಮೆಗೂ ಓಕೆ ಅಂತ್ಹೇಳಿ ಪ್ರೇಕ್ಷಕ ಹೋಗುತ್ತಾನಾದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್, ಶಶಾಂಕ್ ಮತ್ತು ಹಾಡುಗಳು!!!!</div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com0tag:blogger.com,1999:blog-4290647614806416638.post-81897309348469956852010-06-29T13:07:00.002+05:302010-06-29T13:14:55.169+05:30ಯಕ್ಷ ಕಿನ್ನರರ "ಮಾಯಾಲೋಕ""ಮಾಯಾಲೋಕ" ನನ್ನ ಇತ್ತೀಚಿನ 15 ನಿಮಿಷಗಳ ಸಾಕ್ಷ್ಯಚಿತ್ರ. ಇಲ್ಲಿರುವುದು ಒಂದು ರಾತ್ರಿಯ ಯಕ್ಷಗಾನ ಬಯಲಾಟ ಪ್ರಸಂಗವೊಂದರ ದೃಶ್ಯ ಕತೆ. <br />
<br />
ಯಕ್ಷಗಾನ ಸೃಷ್ಟಿಸುವ ಮಾಯಾಲೋಕದೆಡೆಗೆ ಕರಾವಳಿಯ ಮಂದಿಗೊಂದು ಬೆರಗಿದೆ. ದಿನವಿಡೀ ಸಾಮಾನ್ಯನಂತಿರುವ ವ್ಯಕ್ತಿ ಪ್ರತೀ ದಿನ ಸಂಜೆಯಾಗುತ್ತಲೇ ಬಣ್ಣ ಹಚ್ಚುತ್ತಾ ರಾತ್ರಿಗೆ ರಾವಣನೋ, ಮಹಿಷಾಸುರನೋ, ರಾಮನೋ ಆಗಿ ಇಡೀ ರಂಗಸ್ಥಳವನ್ನು ಭಯಭೀತಗೊಳಿಸುತ್ತಾನೆ, ಪುನೀತನನ್ನಾಗಿಸುತ್ತಾನೆ. ಮತ್ತೆ ಮರುದಿನ ರಾತ್ರಿ ಹೊಸದೊಂದು ಪ್ರಸಂಗದ ಭಿನ್ನ ಪಾತ್ರವಾಗಿ ನಲಿದು ಬಿಡುತ್ತಾನೆ. ಪ್ರೇಕ್ಷಕನ ಪಾಲಿಗೆ ಅನಿರ್ವಚನೀಯವಾದ ಇಂತಹ ಪುಳಕವನ್ನು ಹಿಡಿದಿಡುವುದು "ಮಾಯಾಲೋಕ" ಸಾಕ್ಷ್ಯಚಿತ್ರದ ಮುಖ್ಯ ಉದ್ದೇಶ. <br />
<br />
ಈ ವಿಷಯವನ್ನು ಮನದಲ್ಲಿಟ್ಟುಕೊಂಡು ಪ್ರೇಕ್ಷಕನೊಬ್ಬ ಯಕ್ಷಗಾನ ಬಯಲಾಟವನ್ನು ಎದುರುಗೊಳ್ಳುವಾಗ ಮೂಡುವ ದೃಶ್ಯ ಸರಣಿಯ ಮೂಲಕವೇ ಯಕ್ಷಗಾನದ ದೃಶ್ಯ ಕತೆಯನ್ನು ಹೇಳಲು ಪ್ರಯತ್ನಿಸಲಾಗಿದೆ. ಆದ್ದರಿಂದ ಪ್ರೇಕ್ಷಕನ ಭಾವಕೋಶದ ಬೆರಗಿನ ಭಾಗವಾದ ಚೌಕಿಯ ದೃಶ್ಯಗಳು ಇಡೀ ಸಾಕ್ಷ್ಯಚಿತ್ರದಲ್ಲಿ ಮಧ್ಯೆ ಮಧ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಡೆಯುವ ಬಣ್ಣಗಾರಿಕೆಯ ತಯಾರಿಗಳು ದೃಶ್ಯ ಗುಚ್ಛವಾಗಿ ಸರಣಿಯುದ್ದಕ್ಕೂ ಇವೆ.<br />
<br />
ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದ ಯಕ್ಷಗಾನ ಬಯಲಾಟವನ್ನು ಈ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಿಸಲಾಗಿದೆ. ಗೆಳೆಯ ದರ್ಶನ್ ಕ್ಯಾಮರಾ ಹಿಡಿದಿದ್ದಾನೆ. ಅವನ ಸಹಕಾರಕ್ಕೆ ಋಣಿ. ಇದಕ್ಕೆ ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ, ಧ್ವನಿಗ್ರಹಣ ಎಲ್ಲವೂ ನನ್ನದೇ. ಅಸಂಖ್ಯ ಮುದ್ದಾದ ಚಿತ್ರಿಕೆಗಳಲ್ಲಿ ಸೂಕ್ತವಾದದ್ದನ್ನು ಆಯ್ದುಕೊಳ್ಳುತ್ತಾ, ಮತ್ತೆ ಮತ್ತೆ ದೃಶ್ಯಸರಣಿಯನ್ನು ಚೊಕ್ಕಟಗೊಳಿಸುತ್ತಾ ಚಿತ್ರಿಕೆಗಳನ್ನು ಹೆಣಿಯುವ, ಬೆಸೆಯುವ ಕೆಲಸವಾದ ಸಂಕಲನವನ್ನೂ ನಾನೇ ನಿಭಾಯಿಸಿದ್ದೇನೆ. <br />
<br />
ಚಿತ್ರೀಕರಣದ ಸಂದರ್ಭದಲ್ಲಿ ಮನೆಮಂದಿಯಂತೆ ನಮ್ಮಿಬ್ಬರನ್ನು ಸತ್ಕರಿಸಿ, ಆದರಿಸಿದ ಕುಕ್ಕುಂದೂರಿನ ಮಂದಿಗೆ, ಕಟೀಲು ಯಕ್ಷಗಾನ ಮೇಳದ(2ನೇ ಮೇಳ) ಎಲ್ಲಾ ಕಲಾವಿದರಿಗೆ, ಆಡಳಿತ ಮಂಡಳಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಮ್ಮಿಯೇ. ಯಕ್ಷಗಾನದ ಬಗ್ಗೆ ಕಲಾವಿದರಿಗಿರುವ ಭಾವತೀವ್ರತೆಗೆ(ಪ್ಯಾಶನ್) ನಮ್ಮದೊಂದು ನಮಸ್ಕಾರ.<br />
<u><i><br />
</i></u><br />
<b><u><i>ಈ ಸಾಕ್ಷ್ಯಚಿತ್ರಕ್ಕಾಗಿ ಬಳಸಲಾದ ಉಪಕರಣ ಹಾಗೂ ತಂತ್ರಾಂಶಗಳು</i></u><br />
<br />
ಕ್ಯಾಮರಾ: ಸೋನಿ ಪಿಡಿ 170 (ರಾತ್ರಿ ಚಿತ್ರೀಕರಣ ಸ್ಥಳದಲ್ಲಿ ಲಭ್ಯವಿದ್ದ ಬೆಳಕಿನಲ್ಲೇ ಚಿತ್ರೀಕರಿಸಿದ್ದು)<br />
ಧ್ವನಿಗ್ರಹಣ: ಪ್ರೋ ಟೂಲ್ ಆಡಿಯೋ ಕನ್ಸೋಲ್, ಅಡೋಬ್ ಆಡಿಷನ್ 3.0<br />
ಸಂಕಲನ: ಅಡೋಬ್ ಪ್ರಿಮಿಯರ್ ಪ್ರೋ<br />
<br />
ಸಮಯ: 15 ನಿಮಿಷ /ಕನ್ನಡ<br />
ಫಾಮ್ಯಾಟ್: ಪಾಲ್ ವೈಡ್ ಸ್ಕ್ರೀನ್(16:9)</b><br />
<br />
ಈ ಸಾಕ್ಷ್ಯಚಿತ್ರದಿಂದ ಆಯ್ದ ಕೆಲವೊಂದು ದೃಶ್ಯ ತುಣುಕುಗಳನ್ನು ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದು. ನಿಮ್ಮ ಅನಿಸಿಕೆ ತಿಳಿಸಿ.<br />
<br />
<a href="http://www.youtube.com/watch?v=i5BpJRK0Amk">http://www.youtube.com/watch?v=i5BpJRK0Amk</a>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com7tag:blogger.com,1999:blog-4290647614806416638.post-8875885402064308102010-06-10T12:22:00.006+05:302010-06-15T21:23:50.909+05:30ಒಂದಂಕೆ- ನೋವೆಂಬ ನಲಿವಿನ ಕಾಲ<div style="font-family: Arial,Helvetica,sans-serif; text-align: center;"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjTPEmW5e-w_oyBwqCT3EvQnDRF1NYS5o6vCcOeuN-4ABHr7MP0BfQS8dx05RKfhsVnjqN0-I3rpc72U6lQ_88UfCYbL2o8eu-2gzCV-7iS_lFk2FqbZzXwwZYSZZNgteuCSh6TjoQDdxsF/s1600/ondanke+kavite.jpg" imageanchor="1" style="margin-left: 1em; margin-right: 1em;"><img border="0" height="200" src="https://blogger.googleusercontent.com/img/b/R29vZ2xl/AVvXsEjTPEmW5e-w_oyBwqCT3EvQnDRF1NYS5o6vCcOeuN-4ABHr7MP0BfQS8dx05RKfhsVnjqN0-I3rpc72U6lQ_88UfCYbL2o8eu-2gzCV-7iS_lFk2FqbZzXwwZYSZZNgteuCSh6TjoQDdxsF/s200/ondanke+kavite.jpg" width="146" /></a></div><br />
<span style="font-size: small;">ಒಂದು </span><br />
<span style="font-size: small;">ಮಾತನ್ನು ಕೂಡಿಟ್ಟಿದ್ದೆ</span><br />
<span style="font-size: small;">ಅದು ಮೌನದಲ್ಲೇ </span><br />
<span style="font-size: small;">ಕರಗಿ ಹೋಯಿತು</span><br />
<span style="font-size: small;"><br />
</span><br />
<span style="font-size: small;">ಒಂದು </span><br />
<span style="font-size: small;">ಹನಿ ಕಣ್ಣಲ್ಲಿ ಬಚ್ಚಿಟ್ಟಿದ್ದೆ</span><br />
<span style="font-size: small;">ಅದು ರೆಪ್ಪೆಗಳಿಗೆ </span><br />
<span style="font-size: small;">ತಿಳಿದು ಹೋಯಿತು</span><br />
<span style="font-size: small;"><br />
</span><br />
<span style="font-size: small;">ಒಂದು </span><br />
<span style="font-size: small;">ಮೊಗ್ಗನ್ನು </span>ಇಟ್ಟುಕೊಂಡಿದ್ದೆ <br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><span style="font-size: small;">ಅದು ಸೂರ್ಯನಿಗೆ </span><br />
<span style="font-size: small;">ಇಷ್ಟವಾಗಿ ಹೋಯಿತು</span><br />
<span style="font-size: small;"><br />
</span><br />
<span style="font-size: small;">ಒಂದು </span><br />
<span style="font-size: small;">ನವಿಲುಗರಿ ಸಿಕ್ಕಿತು</span><br />
<span style="font-size: small;">ಅದಕ್ಕೆ ನವಿಲು</span><br />
<span style="font-size: small;">ಬಣ್ಣ ತುಂಬದೇ ಹೋಯಿತು</span></div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com11tag:blogger.com,1999:blog-4290647614806416638.post-62840368348997622482010-05-02T09:33:00.003+05:302010-05-02T09:42:52.427+05:30ಕಥೆಯೊಂದು ದೃಶ್ಯವಾಗುವ ಪಯಣದ ಹಿಂದಿನ ಕಥೆ"ಈ ಪುಸ್ತಕ ಚಿತ್ರ ತಯಾರಿಕೆಗಾಗಲಿ, ಚಿತ್ರ ತಂತ್ರಜ್ಞರಾಗಲಿ ಅಥವಾ ಚಿತ್ರ ವಿದ್ಯಾರ್ಥಿಗಳಿಗಾಗಲಿ ರಚಿತವಾದ ಕೈಪಿಡಿ ಅಥವಾ ಪಠ್ಯವಲ್ಲ; ಚಲನಚಿತ್ರವೆಂಬ ಹೊಸ ಯಂತ್ರ ಭಾಷೆಯ ಪ್ರಕ್ರಿಯೆಗಳನ್ನು ಸ್ಥೂಲವಾಗಿ ಅರಿವುಗೊಳಿಸಿಕೊಂಡು ಚಲನಚಿತ್ರ ಸಹೃದಯತೆಯನ್ನು ರೂಢಿಸಿಕೊಳ್ಳಲು ಬಯಸುವ ಸಾಮಾನ್ಯ ಓದುಗರಿಗೊಂದು ಪರಿಚಯ ಪುಸ್ತಕ" ಎಂದು "ಸಿನಿಮಾದ ಯಂತ್ರಭಾಷೆ" ಪುಸ್ತಕದ ಪ್ರಾರಂಭದ ಪುಟಗಳಲ್ಲೇ ಸ್ಪಷ್ಟಪಡಿಸುತ್ತಾರೆ ಲೇಖಕರಾದ ಕೆ.ವಿ ಸುಬ್ಬಣ್ಣ ಮತ್ತು ಅಕ್ಷರ. 1981ರಲ್ಲಿ ಪ್ರಥಮ ಮುದ್ರಣ ಈ ಪುಸ್ತಕ ಕನ್ನಡದಲ್ಲಿ ಸಿನಿಮಾದ ತಾಂತ್ರಿಕತೆ ಕುರಿತು ಓದಲು ಸಿಗುವ ಅಪೂರ್ವ ಪುಸ್ತಕಗಳಲ್ಲೊಂದು(ಈಗ ಪ್ರತಿಗಳು ಲಭ್ಯವಿಲ್ಲ). ಇದಕ್ಕಿಂತ ಮೊದಲು ಬಿ ಪುಟ್ಟಸ್ವಾಮಿ, ಅಬ್ದುಲ್ ರೆಹಮಾನ್ ಪಾಶಾ ಸಿನಿಮಾ ತಾಂತ್ರಿಕತೆ ಕುರಿತು ಬರೆದಿದ್ದರೂ ಅದು ತಾಂತ್ರಿಕತೆಯ ಅಂಶಗಳನ್ನು ಒಳಗೊಂಡ ವ್ಯಾಪ್ತಿ ಬಹಳ ಸಣ್ಣದಿತ್ತು. ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ತಾಂತ್ರಿಕತೆಯ ಕುರಿತು ಬಂದ ಪುಸ್ತಕವೇ ವಿರಳ. ಅದರಲ್ಲಿ ನೆನಪಿನಲ್ಲುಳಿಯುವ ಪುಸ್ತಕ "ಸಿನಿಮಾದ ಯಂತ್ರ ಭಾಷೆ". ಹೆಗ್ಗೋಡಿನ ನೀನಾಸಂ ಚಿತ್ರ ಸಮಾಜದ ಪರವಾಗಿ ಅಕ್ಷರ ಪ್ರಕಾಶನ ಇದನ್ನು ಪ್ರಕಟಿಸಿದೆ.<br />
<br />
224 ಪುಟಗಳ ಈ ಪುಸ್ತಕ ಸಿನಿಮಾವನ್ನು ಕೇವಲ ಕತೆಯ ಅಥವಾ ಭಾವನಾತ್ಮಕ ನೆಲೆಯಲ್ಲಿ ಮಾತ್ರವಲ್ಲದೆ ತಾಂತ್ರಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿ. ಸಿನಿಮಾದ ತಾಂತ್ರಿಕ ಅಂಶಗಳನ್ನು ಸಾಮಾನ್ಯನಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿರುವುದು ಈ ಪುಸ್ತಕದ ಬಹುದೊಡ್ಡ ಶಕ್ತಿ. ಪುಸ್ತಕವನ್ನು 5 ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಿನಿಮಾದ ಹಿನ್ನೆಲೆ-ಹುಟ್ಟು, ಯಂತ್ರ ಪ್ರಕ್ರಿಯೆ, ತಂತ್ರ ಪ್ರಕ್ರಿಯೆ, ನಿರ್ಮಾಣ ಪ್ರಕ್ರಿಯೆ, ಭಾಷಾ ಪ್ರಕ್ರಿಯೆ ಎನ್ನುವ ವಿಭಾಗಗಳಲ್ಲಿ ಒಟ್ಟು ಸಿನಿಮಾ ತಾಂತ್ರಿಕವಾಗಿ ನಿರ್ಮಾಣವಾಗುವ ವಿವಿಧ ಹಂತಗಳ ಸ್ಥೂಲ ನೋಟವಿದೆ. ಸಿನಿಮಾದ ಜೀವಾಳವಾದ ದೃಷ್ಟಿ ವಿಶೇಷ ತತ್ವ(persistence of vision) ಕುರಿತ ವಿವರಣೆ, ಕ್ಯಾಮರಾ ಕೆಲಸ ಮಾಡುವ ರೀತಿ, ಲೆನ್ಸ್, ರೀಲ್, ಕ್ಯಾಮೆರಾ ಚಲನೆ, ಸಂಕಲನ ಹಾಗೂ ತಾಂತ್ರಿಕ ಜವಾಬ್ದಾರಿಗಳನ್ನು ನಿಭಾಯಿಸುವವರ ಹೊಣೆ ಮತ್ತು ಕೆಲಸಗಳ ವಿವರಗಳಿವೆ. 1981ರಲ್ಲಿ ಪ್ರಕಟವಾಗಿರುವುದರಿಂದ ಸಂಕಲನ ವಿಭಾಗದಲ್ಲಿ ಇತ್ತೀಚಿನ ಡಿಜಿಟಲ್ ತಾಂತ್ರಿಕತೆ ಕುರಿತು ಪ್ರಸ್ತಾಪವಿಲ್ಲ. <br />
<br />
ಚಿತ್ರೀಕರಣ ಪೂರ್ವ, ಚಿತ್ರೀಕರಣ ಸಂದರ್ಭ ಹಾಗೂ ಚಿತ್ರೀಕರಣೋತ್ತರ ಸಂದರ್ಭದಲ್ಲಿ ಘಟಿಸಬೇಕಾದ ತಾಂತ್ರಿಕ ಅವಶ್ಯಕತೆಗಳ ಮಹತ್ವವನ್ನು ಸಾಮಾನ್ಯ ಓದುಗನ ಮನದಲ್ಲಿ ದಾಖಲು ಮಾಡಲು ಲೇಖಕರು ಪ್ರಯತ್ನಪಟ್ಟಿದ್ದಾರೆ. ದೃಶ್ಯ ಮತ್ತು ಧ್ವನಿಯ ಸಮ್ಮಿಲನದ ಸೂಕ್ಮ್ಷತೆ, ಸಿನಿಮಾದ ನಿರ್ಮಾಣದ ಅಂತಿಮ ಫಲಿತಾಂಶದಲ್ಲಿ ಆಗುವ ಬದಲಾವಣೆಗಳನ್ನು ಹೇಳಿದ್ದಾರೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಪಾರಿಭಾಷಿಕ ಪದಗಳ ವಿವರಣೆ ತಾಂತ್ರಿಕ ಶಬ್ದಗಳನ್ನು ಓದುಗನಿಗೆ ಇರುವ ಅನುಮಾನಗಳನ್ನು ಪರಿಹರಿಸಿ, ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ.<br />
<br />
ಸಿನಿಮಾವನ್ನು ಬೆರಗಿನಿಂದ ನೋಡುತ್ತಾ, ಸಿನಿಮಾದ ಕತೆಯ ಭಾವನಾತ್ಮಕ ಸಾಧ್ಯತೆಗಳನ್ನು ಮಾತ್ರ ಚಚರ್ಿಸುವ ಸಿನಿಮಾ ಪ್ರಿಯರಿಗೆ "ಸಿನಿಮಾದ ಯಂತ್ರಭಾಷೆ" ತಾಂತ್ರಿಕ ಅಂಶಗಳ ಮೂಲಕ ಸಾಧ್ಯವಾಗುವ ದೃಶ್ಯ ಶಕ್ತಿಯನ್ನು ತಿಳಿದುಕೊಳ್ಳಲು ಉಪಯುಕ್ತ. ಕಥೆ ಮತ್ತು ಚಿತ್ರನಾಟಕದಲ್ಲಿ ತಾಂತ್ರಿಕ ಅಂಶಗಳನ್ನು ಬಳಸಿಕೊಂಡು ದೃಶ್ಯವೊಂದನ್ನು ಸೃಷ್ಟಿಸುವ ಹಿಂದಿನ ಸುದೀರ್ಘ ಪ್ರಯಾಣವನ್ನು ಅರ್ಥಮಾಡಿಸುತ್ತದೆ. ಈ ಮೂಲಕ ಸಿನಿಮಾದ ತಾಂತ್ರಿಕತೆ ಕುರಿತು ಇನ್ನಷ್ಟು ಆಸಕ್ತಿಯಿಂದ ಹೆಚ್ಚಿನ ಮಾಹಿತಿಯನ್ನು ವಿವಿಧ ಕಡೆಯಿಂದ ಕಲೆ ಹಾಕಲು ಈ ಪುಸ್ತಕವೊಂದು ನೆಪವಾಗುತ್ತದೆ.<br />
<br />
"ಸಿನಿಮಾದ ಯಂತ್ರಭಾಷೆ" ಯ ನಂತರ ಸಿನಿಮಾ ತಾಂತ್ರಿಕತೆಯನ್ನು ಮನದಟ್ಟು ಮಾಡಿಸುವ ಯಶಸ್ವಿ ಪುಸ್ತಕ ಪ್ರಯತ್ನ ಕನ್ನಡಲ್ಲಿ ಆಗಿಲ್ಲ. ಜೊತೆಗೆ ಕನ್ನಡದಲ್ಲಿ ಸಿನಿಮಾದ ಚಿತ್ರ ನಾಟಕ ರಚನೆ, ಕಡಿಮೆ ತಾಂತ್ರಿಕೆ ಸಾಧ್ಯತೆಗಳೊಂದಿಗೆ ಸಾಧ್ಯವಾಗಬಹುದಾದ ಸಿನಿಮಾ ನಿರ್ಮಾಣ ಕುರಿತು ಪುಸ್ತಕಗಳೇ ಇಲ್ಲ. ಬದಲಾಗುತ್ತಿರುವ ತಾಂತ್ರಿಕ ಆವಿಷ್ಕಾರ, ಸುಲಭಕ್ಕೆ ಜನಸಾಮಾನ್ಯನ ಕೈಗೆಟಕುತ್ತಿರುವ ವಿಡಿಯೋ ಕ್ಯಾಮೆರಾಗಳು, ಸಾಮಾನ್ಯವಾಗಿರುವ ಕಂಪ್ಯೂಟರ್ ಬಳಕೆ, ಸರಳ ಸಂಕಲನ ತಂತ್ರಾಂಶಗಳ ಲಭ್ಯತೆ ಇವೆಲ್ಲಾ ಇವತ್ತು ಮನೆಯಲ್ಲಿದ್ದುಕೊಂಡೇ ಡಿಜಿಟಲ್ ಸಿನಿಮಾ ನಿರ್ಮಾಣವನ್ನು ಸಾಧ್ಯವಾಗಿಸಿವೆ. ಅಂತಹ ಸಾಧ್ಯತೆಗಳಿಗೆ ಪೂರಕವಾಗುವ, ಉತ್ತೇಜಿಸುವಂತಹ "ಸಿನಿಮಾದ ಯಂತ್ರಭಾಷೆ"ಯಂತಹ ಪುಸ್ತಕಗಳ ಅವಶ್ಯಕತೆ ಇವತ್ತಿನ ಕನ್ನಡದ ಸಾಮಾನ್ಯನಿಗಿದೆ.ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com2tag:blogger.com,1999:blog-4290647614806416638.post-56609859592701521992010-04-26T14:27:00.007+05:302010-04-26T20:35:08.105+05:30ಬಾಬಾ ರಾಂಚೋಡದಾಸನ ದೇಹ, ಡೆಡ್ ಪೋಯೆಟ್ಸ್ ಸೊಸೈಟಿಯ ಜೀವ, ಲೆಕ್ಕವಿಲ್ಲದಷ್ಟು ರೂಪಾಂತರ<span style="font-size: small;"></span><br />
<div class="separator" style="clear: both; text-align: center;"><span style="font-size: small;"><a href="https://blogger.googleusercontent.com/img/b/R29vZ2xl/AVvXsEg5FY5iCTClNV6k9bVuwsvNAEYmKL5i4Y-mpLUTDnm035V5mpoBoFCreom5igcU1oC5GgL6kQAbmJOx4dzSq3NzlcQRcWEh_KWrjOdWaB1s2LzQzPMtFYVMWZJEyBQbzPAduFEe0hVxv17V/s1600/page.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEg5FY5iCTClNV6k9bVuwsvNAEYmKL5i4Y-mpLUTDnm035V5mpoBoFCreom5igcU1oC5GgL6kQAbmJOx4dzSq3NzlcQRcWEh_KWrjOdWaB1s2LzQzPMtFYVMWZJEyBQbzPAduFEe0hVxv17V/s320/page.jpg" width="266" /></a></span></div><div class="separator" style="clear: both; text-align: left;"><br />
</div><div class="separator" style="clear: both; text-align: left;"><span style="font-size: small;">ಚಿತ್ರಕತೆಯ ಬರವಣಿಗೆ ದೃಶ್ಯ ಲೆಕ್ಕಾಚಾರದ ಬರವಣಿಗೆಯೇ. ಅಲ್ಲಿ ಬರಹಗಾರನಿಗೆ ಪ್ರತೀ ಪಾತ್ರದ ಪೂರ್ವಾಪರಗಳು ಗೊತ್ತಿರಬೇಕು. ಆ ಪಾತ್ರದ ಬಿಡಿ ಬಿಡಿ ವಿವರಗಳು ಕೂಡಾ ಸ್ಪಷ್ಟವಿರಬೇಕು. ಆತನೋ/ಆಕೆಯೋ ಮೊದಲ ದಿನ ಶಾಲೆಗೆ ಹೋಗಿದ್ದಾಗ ಇದ್ದಿದ್ದ ದುಗುಡ, ಹಿಂಜರಿಕೆ, ಮೊದಲ ಬರ್ತ್ ಡೇ ಸಂಭ್ರಮ ಎಲ್ಲವೂ ನೆನಪಿರಬೇಕು.ಅದನ್ನಾತ ಚಿತ್ರಕತೆಯಲ್ಲಿ ಸೇರಿಸದೇ ಹೋಗಬಹುದು. ಆದರೂ ತನ್ನ ಪಾತ್ರಗಳ ಪ್ರತಿ ಹೆಜ್ಜೆಯೂ ಸ್ಪಷ್ಟವಿರಬೇಕು. ಹಾಗಿದ್ದಾಗ ಮಾತ್ರ ಪಾತ್ರ, ಸನ್ನಿವೇಶ ಹೆಚ್ಚು ಪರಿಣಾಮಕಾರಿಯಾಗಿ ಬರೆಯಲ್ಪಡುತ್ತದೆ.<br />
<br />
ಚಿತ್ರಕತೆಯೊಂದನ್ನು ಬರೆಯುವ ಹೊತ್ತಿಗೆ ಬರಹಗಾರನನ್ನು ಪ್ರಭಾವಿಸುವ ಅಂಶಗಳು ಹಲವಾರು. ಆತ ನೋಡಿದ ವಿಶ್ವದ ಯಾವುದೋ ಭಾಷೆಯ ಚಲನಚಿತ್ರ, ಓದಿದ ಕಾದಂಬರಿಯ ಪಾತ್ರವೊಂದರ ಗುಣ, ಅವಗುಣ, ಸ್ನೇಹಿತನ ಮದುವೆಯಲ್ಲಿ ಕಂಡ ದಬಾಯಿಸುವ ಹುಡುಗಿ ಕೂಡಾ ಪಾತ್ರವೊಂದನ್ನು, ಸನ್ನಿವೇಶವನ್ನು ಸೃಷ್ಟಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎಲ್ಲಾ ಅಂಶಗಳು ಚಿತ್ರಕತೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಅದೇ ಪಾತ್ರವನ್ನು, ಸನ್ನಿವೇಶವನ್ನು ಬೆಳೆಸಬಹುದು. ಆ ಮೂಲಕ ಪಾತ್ರ, ಸನ್ನಿವೇಶ ಮತ್ತಷ್ಟು ಗಟ್ಟಿಯಾಗುವ ಸಂದರ್ಭಗಳು ಜಾಸ್ತಿ. ಇಂತಹ ಗಮನಿಸುವಿಕೆ ಹಾಗೂ ಅಳವಡಿಸುವಿಕೆ ಚಿತ್ರಕತೆಯೊಂದನ್ನು ಬರೆಯುವ ಸಂದರ್ಭದಲ್ಲಿ ಬರಹಗಾರನಿಗೆ ಹೆಚ್ಚು ಸಹಕಾರಿ. ಅಂತಹದೊಂದು ಸಾಧ್ಯತೆಯನ್ನು ಚಿತ್ರಕತೆಯಲ್ಲಿ ಮಿಳಿತಗೊಳಿಸಲು ಬರಹಗಾರ ಪ್ರತೀ ಬಾರಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ತರಹದ ರೂಪಾಂತರ ನಾವು ನೋಡುವ ಹೆಚ್ಚಿನ ಸಿನಿಮಾಗಳ ಚಿತ್ರಕತೆಯಲ್ಲಿ ಕಂಡುಬರುತ್ತದೆ. ಅದೇ ಕಾರಣಕ್ಕೆ ಯೋಗರಾಜ ಭಟ್ಟರ ಮನಸಾರೆಯಲ್ಲಿ "ಶ್ವಶಾಂಕ್ ರಿಡಂಪ್ಶನ್"ನ ರೆಡ್ ಮತ್ತು ಬ್ರೂಕ್ ಛಾಯೆ ಕಾಣುವುದು. ಆದ್ದರಿಂದಲೇ ಗಾಳಿಪಟದಲ್ಲಿ ಡೈಸಿ ಬೋಪಣ್ಣನ ಪಾತ್ರವನ್ನು ನೋಡಿದಾಗ ಶೋಲೆಯ ಜಯಾ ಬಾಧುರಿ ಪದೇ ಪದೇ ನೆನಪಾಗುವುದು. ಮಜಾ ಎಂದರೆ ಸಿನಿಮಾ ನೋಡುತ್ತಿರುವಾಗ ಕೆಲವೊಮ್ಮೆ ಇದು ನಮ್ಮ ಗಮನಕ್ಕೇ ಬರುವುದಿಲ್ಲ. ಇಲ್ಲೇ ಚಿತ್ರಕತೆಯನ್ನು ಬರೆದ ಬರಹಗಾರನ ಯಶಸ್ಸಿರುವುದು. ಯಾಕೆಂದರೆ ಆತ ಅಂತಹದೊಂದು ರೂಪಾಂತರವನ್ನು ಅಥವಾ ಹೊಂದಾಣಿಕೆಯನ್ನು ನಾಜೂಕಾಗಿ ಭಿನ್ನ ಸನ್ನಿವೇಶ, ವಾತಾವರಣದಲ್ಲಿ ಕೂರಿಸಿರುತ್ತಾನೆ. </span> </div><div class="separator" style="clear: both; text-align: left;"><br />
</div><div class="separator" style="clear: both; text-align: center;"><span style="font-size: small;"><a href="https://blogger.googleusercontent.com/img/b/R29vZ2xl/AVvXsEi21RWKxZqHaXmKFnHnlnw2L2SCWh50bZPXumgJ8d5xjdKp5XwZdcgM0GCiwqEX4arHdFl14Ki72iYtBUu3ZYTIrm5TZuuNs293uwfOsi7NwR2MJFXX_uSnAL5AdMJ1e4OQTBjEjDIao09d/s1600/keating2.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEi21RWKxZqHaXmKFnHnlnw2L2SCWh50bZPXumgJ8d5xjdKp5XwZdcgM0GCiwqEX4arHdFl14Ki72iYtBUu3ZYTIrm5TZuuNs293uwfOsi7NwR2MJFXX_uSnAL5AdMJ1e4OQTBjEjDIao09d/s320/keating2.jpg" width="240" /></a></span></div><div class="separator" style="clear: both; text-align: center;"></div><div class="separator" style="clear: both; text-align: left;"><span style="font-size: small;"><br />
ಇತ್ತೀಚೆಗೆ ಬಂದ "ಥ್ರೀ ಈಡಿಯೇಟ್ಸ್" ಸಿನಿಮಾವನ್ನೇ ಬೇಕಿದ್ದರೆ ತೆಗೆದುಕೊಳ್ಳಿ. ಬಾಬಾ ರಾಂಚೋಡ್ ದಾಸ್ ಮೋಡಿಗೆ ಇಡೀ ದೇಶವೇ ಜಹಾಪನಾ ತುಸ್ಸೀ ಗ್ರೇಟ್ ಹೋ ಎಂದು ಸಲಾಮು ಹೊಡೆದದ್ದೇ ಹೊಡೆದದ್ದು. ಎಲ್ಲರಿಗೂ ಗೊತ್ತಿರುವಂತೆ ಥ್ರೀ ಈಡಿಯೆಟ್ಸ್ ಚೇತನ್ ಭಗತ್ ಬರೆದ "ಫೈವ್ ಪಾಯಿಂಟ್ ಸಮ್ವನ್" ಇಂಗ್ಲೀಷ್ ಕಾದಂಬರಿಯನ್ನು ಬಳಸಿಕೊಂಡಿದೆ. ಆದರೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಚಲನಚಿತ್ರದ ದೃಶ್ಯ ಅನುಕೂಲಕ್ಕೆ ತಕ್ಕ ಹಾಗೆ ಮೂಲ ಕಾದಂಬರಿಯ ಕಥಾ ಹಂದರದಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಹೊಸ ಪಾತ್ರಗಳು ಬಂದಿವೆ. ಸನ್ನಿವೇಶಗಳು ಬದಲಾಗಿವೆ. ಮತ್ತೊಂದಷ್ಟು ಸೇರಿಕೊಂಡಿವೆ. ಆದರೂ ಬಾಬಾ ರಾಂಚೋಡ್ ದಾಸನನ್ನು ನೋಡುತ್ತಿದ್ದ ಹಾಗೆ, "ಸಕ್ಸಸ್ ನ ಹಿಂದೆ ಓಡಬೇಡಿ. ಎಕ್ಸಲೆನ್ಸ್ ಮುಖ್ಯ" ಎನ್ನುವಾಗಲೆಲ್ಲಾ ಹಾಗೂ ಅದನ್ನು ಸಾಧಿಸಲು ಆತ ಹೊರಡುವ ಸಂದರ್ಭಗಳನ್ನು ನೋಡುತ್ತಿದ್ದಂತೆ 1989ರಲ್ಲಿ ತೆರೆಕಂಡ ಪೀಟರ್ ವೇರ್ ನಿರ್ದೇಶನ ದ "ಡೆಡ್ ಪೋಯೆಟ್ಸ್ ಸೊಸೈಟಿ"ಯ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಜಾನ್ ಕೀಟಿಂಗ್ ನೆನಪಾಗುತ್ತಾನೆ. ಆತನೂ ಹಾಗೆಯೇ. ಕವಿತೆ ಬದುಕನ್ನು ಫ್ರಫುಲ್ಲವಾಗಿಡುತ್ತದೆ, ಎಲ್ಲಾ ನೋವುಗಳಿಗೆ ಬೊಗಸೆ ಹಿಡಿಯುತ್ತದೆ ಎಂದು ನಂಬಿಕೊಂಡವ. ಕವಿತೆಯನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಡುವವ. ಅದೇ ಕಾರಣಕ್ಕೆ ಆತ ಫುಟ್ಬಾಲಿನ ಜೊತೆ, ಶಾಲೆಯ ಹೊರಾಂಗಣದಲ್ಲಿ ಸ್ವಚ್ಛಂದವಾಗಿ ಹುಡುಗರನ್ನು ಬಿಟ್ಟು ಕವಿತೆಯನ್ನು ಆಸ್ವಾದಿಸುವುದನ್ನು ಕಲಿಸುತ್ತಾನೆ. "ಡೆಡ್ ಪೋಯೆಟ್ಸ್ ಸೊಸೈಟಿ"ಯಲ್ಲಿ ಬರುವ ಈ ಇಂಗ್ಲೀಷ್ ಮೇಷ್ಟ್ರ ರೂಪಾಂತರವೇ ನಮ್ಮ ರಾಂಚೋಡ್ದಾಸ್(ಆಮೀರ್ ಖಾನ್). ರಾಂಚೋ ಪಾತ್ರದ ನಡೆ-ನಡವಳಿಕೆ "ಫೈವ್ ಪಾಯಿಂಟ್ ಸಮ್ವನ್" ಕಾದಂಬರಿಯಲ್ಲಿರುವ ರೆಯಾನ್ನಂತೆಯೇ ಇದ್ದರೂ ಸಹ, ಆತ ಬದುಕನ್ನು, ಎದುರಾಗುವ ಪ್ರತೀ ಕೆಲಸವನ್ನು ಆಸ್ವಾದಿಸುವುದನ್ನು ಕಲಿಸಲು ಬಳಸಿಕೊಳ್ಳುವ ಫಿಲಾಸಫಿಯ ಹಿಂದಿರುವುದು ಇಂಗ್ಲೀಷ್ ಮೇಷ್ಟ್ರು ಕೀಟಿಂಗೇ. ಮೂಲ ಕಾದಂಬರಿಯಲ್ಲಿ ಬರುವ ರೆಯಾನ್(ಸಿನಿಮಾದಲ್ಲಿ ರಾಂಚೋ) ಪಾತ್ರಕ್ಕೊಂದು ಸರಿಯಾದ ಪಾತ್ರ ಚೌಕಟ್ಟೇ ಇಲ್ಲ. ಜನಪ್ರೀಯ ಇಂಗ್ಲೀಷ್ ಸಾಹಿತ್ಯದ ಮೂಲಕ ತಲುಪಬೇಕಿರುವ ಮೇಲ್ಮಧ್ಯಮ ವರ್ಗದ ಇಷ್ಟಾನುಸಾರದ ಟೈಂಪಾಸ್ ರೀಡಿಂಗಿಗೆ ಬೇಕಾದಷ್ಟೇ ಉದ್ದೇಶಗಳನ್ನಿಟ್ಟುಕೊಂಡು ಚೇತನ್ ಭಗತ್ ಇಡೀ ಕಾದಂಬರಿಯನ್ನು ಬರೆದಂತೆ ಅನ್ನಿಸುತ್ತದೆ. ಹಾಗಾಗಿ ರಾಂಚೋಗೆ ಒಂದು ಬಲವಾದ "ಮುಖ್ಯ ಪಾತ್ರಕ್ಕಿರುವ ಗುರಿ"ಯನ್ನು(ಚಿತ್ರಕತೆಯ ಬರವಣಿಗೆಯಲ್ಲಿ ಬಹುಮುಖ್ಯ ಅಂಶ) ನೀಡುವಲ್ಲಿ ಕೀಟಿಂಗ್ ಪಾತ್ರ ರಾಜ್ ಕುಮಾರ್ ಹಿರಾನಿ ಮತ್ತವರ ತಂಡಕ್ಕೆ ಸಹಾಯಕ್ಕೆ ಬಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವಿದೆ. ರಾಂಚೋನಷ್ಟೇ ಯಂತ್ರಗಳ ಮೇಲೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡಿರುವ ಜೋಯ್ ಲೋಬೋ, ಡೆಡ್ ಪೋಯೆಟ್ ಸೊಸೈಟಿಯ ನೀಲ್ ಪೆರ್ರಿಯ ಪಾತ್ರದಂತೆ ಅಸಹಾಯನಾಗಿ, ಅವಸರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜಾಯ್ ಲೋಬೋ ಮತ್ತು ನೀಲ್ ಪೆರ್ರಿಯ ನಡೆ-ನಡವಳಿಕೆ ಒಂದೇ ರೀತಿಯಾದದ್ದು.</span> </div><div class="separator" style="clear: both; text-align: left;"><span style="font-size: small;"><br />
</span></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg-eQt2nzIMswu5Z8FAxmIxmumd1__dDfUexBdXoy-ngi3vaQfZ432JtwF90ffdO3QBhFf3K6CrjMXLOFtv2PNvg9ruwnPfeUXUgkGyWtir0-62qetkebrfIiSSVQR1WbPDIrv3g4-FdBvB/s1600/neel.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEg-eQt2nzIMswu5Z8FAxmIxmumd1__dDfUexBdXoy-ngi3vaQfZ432JtwF90ffdO3QBhFf3K6CrjMXLOFtv2PNvg9ruwnPfeUXUgkGyWtir0-62qetkebrfIiSSVQR1WbPDIrv3g4-FdBvB/s1600/neel.jpg" /></a></div><div class="separator" style="clear: both; text-align: left;"><span style="font-size: small;"><br />
ಇಂತಹ ಅಳವಡಿಕೆಗಳನ್ನು ರಿಮೇಕು ಅಥವಾ ಯಥಾವತ್ತು ನಕಲು ಎಂದು ನೇರವಾಗಿ ಆಪಾದಿಸಲಾಗುವುದಿಲ್ಲ. ಯಾಕೆಂದರೆ ಮೇಲೆ ಉದಾಹರಿಸಿದ ಎಲ್ಲಾ ಸಿನಿಮಾ ಅಳವಡಿಕೆಗಳು ಒಟ್ಟಾರೆಯಾಗಿ ಚಿತ್ರಕತಾ ಬರಹಗಾರನನ್ನು ಬಹಳಷ್ಟು ಪ್ರಭಾವಿಸಿದ ಸಿನಿಮಾ, ಕಾದಂಬರಿಯ ಯಾವುದೋ ಒಂದು ಪಾತ್ರ ಇವೆಲ್ಲವನ್ನೂ ಮಿಳಿತಗೊಳಿಸಿಕೊಂಡಿವೆ. ಒಟ್ಟು ಸಿನಿಮಾದ ಹೂರಣವನ್ನೋ, ಪಾತ್ರದ ಅಪರಿಮಿತ ಆತ್ಮವಿಶ್ವಾಸವನ್ನೋ ಬಳಸಿಕೊಂಡರೆ ತಪ್ಪಲ್ಲವಲ್ಲ. ಪಾಂಡವರ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ "ಹಬ್ಬ" ಎನ್ನುವ ಸಿನಿಮಾ ಬಂದದ್ದು ನೆನಪಿದೆ ತಾನೇ. ಅದೇ ರೀತಿ ಪಾಂಚಾಲಿಯ ದೃಷ್ಟಾಂತವನ್ನು ಅಳವಡಿಸಿಕೊಂಡು ದಿನೇಶ್ ಬಾಬು ಕನ್ನಡದಲ್ಲಿ "ಪಾಂಚಾಲಿ" ಎನ್ನುವ ಸಿನಿಮಾ ಮಾಡಿರುವುದನ್ನೂ ಇದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಜೂನ್ನಲ್ಲಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂರ "ರಾವಣ"ದಲ್ಲೂ ರಾಮಾಯಣದ್ದೇ ಅಳವಡಿಕೆ ಇದೆ...ಆದರೆ ಇಲ್ಲೆಲ್ಲಾ ಗಮನಿಸಬೇಕಾದ ಮತ್ತೊಂದು ಅಂಶವಿದೆ...ಮೂಲ ಕತೆಯನ್ನು ಭಿನ್ನ ಕಥಾ ಆಯಾಮದೊಂದಿಗೆ ಬೆಳೆಸುತ್ತಾ ಹೋದ ಹಾಗೆ ಹೊಸದೊಂದು ಚಿತ್ರಕತೆ ಹುಟ್ಟುತ್ತಾ ಹೋಗುತ್ತದೆ... ಮಜಾ ಇರೋದು ಇಲ್ಲೇ..ಹೀಗೆ ಪುರಾಣದ್ದೋ, ಕಾದಂಬರಿಯದ್ದೋ ಒಂದು ಪಾತ್ರವನ್ನು ಆಯಾ ಲೇಖಕ ನಿರ್ಮಿಸಿದ ವಾತಾವರಣವನ್ನು ಮೀರಿ ಭಿನ್ನ ಸನ್ನಿವೇಶ, ಸಂದರ್ಭದಲ್ಲಿ ಯೋಚಿಸುತ್ತಾ ಹೊರಟರೆ ಸಿನಿಮಾಕ್ಕಾಗುವ ಚಿತ್ರಕತೆ ಬರವಣಿಗೆಗೆ ಕೂರಬಹುದು. ಚೀನೀ ಸಿನಿಮಾ "ಸಂಸಾರ"ವನ್ನೇ ಬೇಕಿದ್ದರೆ ಗಮನಿಸಿ... ಬುದ್ಧನ ಸಂಸಾರ ತ್ಯಜಿಸುವ ನಿರ್ಧಾರವನ್ನೇ ಪ್ರಶ್ನಿಸುವ, ಆ ಮೂಲಕ ಬುದ್ಧ ಹೆಣ್ಣೊಬ್ಬಳನ್ನು ಅತಂತ್ರಕ್ಕೆ ದೂಡುವುದನ್ನು ಒಂದು ವೇಳೆ ಯಶೋಧರೆ ದಿಟ್ಟತನದಿಂದ ಪ್ರಶ್ನಿಸಿದರೆ ಹೇಗಿರುತ್ತದೆ ಎನ್ನುವ ನೆಲೆಗಟ್ಟಿನಲ್ಲಿ ಬೌದ್ಧ ಭಿಕ್ಷುವಿನ ಕತೆಯ ಹಿನ್ನೆಲೆಯಲ್ಲಿ ಚಿತ್ರಕತೆಗಾರ ಹೆಣೆಯುತ್ತಾ ಹೋದಾಗ ಸೃಷ್ಟಿಯಾಗುವ ಸಮಸ್ಯೆ ಹಾಗೂ ಅದನ್ನು ಪರಿಹರಿಸಿಕೊಳ್ಳಲು ಪಾತ್ರಗಳು ಹುಡುಕುವ ದಾರಿಗಳೇ ಚಿತ್ರಕತೆಯ ಬರವಣಿಗೆಯ "ಸೆಟಪ್-ಕನ್ಫ್ರಂಟೇಶನ್-ರಿಜಲ್ಯೂಶನ್" ಎನ್ನುವ ಚಿತ್ರಕತೆಯ ಮೂಲ ಸೂತ್ರವಾಗುತ್ತದೆ(ಪ್ರತಿ ಸಿನಿಮಾದ ಚಿತ್ರಕತೆಯು ಕ್ರಮವಾಗಿ ಈ ಮೂರು ಅಂಶಗಳನ್ನು ಹೊಂದಿರುತ್ತದೆ). </span> <span style="font-size: small;"><br />
</span></div><div class="gmail_quote" style="text-align: left;"><span style="font-size: small;"><br />
ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಒಪ್ಪುತ್ತೇವೆ ತಾನೇ. ಬಿ.ಆರ್ ಅಂಬೇಡ್ಕರ್ ರಾಮನ ಬಗೆಗೊಂದು ಲೇಖನ ಬರೆದಿದ್ದಾರೆ(ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ "ದೇವರನ್ನು ಕುರಿತು ಒಂದು ಹಿನ್ನೋಟ" ಪುಸ್ತಕದಲ್ಲಿದೆ). ಅದೇ ರಾಮ ಸೀತೆಯನ್ನು ಜೀವಿತಾವಧಿಯಲ್ಲಿ ನಡೆಸಿಕೊಂಡ ರೀತಿ ಸರಿಯೇ ಎನ್ನುವುದು ಆ ಬರವಣಿಗೆಯ ಮೂಲ ತಿರುಳು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಾನವೀಯ ನೆಲೆಯಲ್ಲಿ ರಾಮನ ನೆಲೆಗಟ್ಟು ಎಷ್ಟರಮಟ್ಟಿಗೆ ಅಭದ್ರವಾದದ್ದು, ಸ್ವಾರ್ಥದಿಂದ ಕೂಡಿದ್ದು ಎನ್ನುವುದನ್ನು ಅಂಬೇಡ್ಕರ್ ಬರೆಯುತ್ತಾ ಹೋಗುತ್ತಾರೆ. ರಾಮನ ಬಗ್ಗೆ ಇರುವ ಈ ಜಿಜ್ಙಾಸೆಯೇ ಸಿನಿಮಾ ಚಿತ್ರಕಥೆಯ ಬರವಣಿಗೆಗೆ ಸಹಾಯಕ. ಇದೇ ವಿಷಯವನ್ನು ಇವತ್ತಿನ ಸಂದರ್ಭದ ಪಾತ್ರಗಳಿಗೆ ಅಳವಡಿಸಿದರೆ ಒಂದು ಸಿನಿಮಾದ ಚಿತ್ರಕತೆ ಖಂಡಿತಾ ಸಾಧ್ಯವಾಗುತ್ತದೆ. ಇದೇ ಗೊಂದಲಗಳಿಗೆ, ವೈರುಧ್ಯಗಳಿಗೆ ಇನ್ನಷ್ಟು ಸನ್ನಿವೇಶಗಳನ್ನು ಸೇರಿಸುತ್ತಾ ಹೋದಾಗ ಚಿತ್ರಕತೆಗೊಂದು ಸೂಕ್ತ ಚೌಕಟ್ಟು ನಿರ್ಮಾಣವಾಗುತ್ತದೆ. ತರ್ಕ, ಸಮಸ್ಯೆ, ಪರಿಹಾರ ಇವೆಲ್ಲಾ ಚಿತ್ರಕತೆಯ ಬರವಣಿಗೆಯ ಅಗತ್ಯಗಳು.</span><br />
<br />
</div><div class="gmail_quote" style="text-align: left;"></div><div class="separator" style="clear: both; text-align: left;"><span style="font-size: small;"><a href="https://blogger.googleusercontent.com/img/b/R29vZ2xl/AVvXsEi58bw-yYaDQa-MlEjy9GWuzoIk9_-4-cwaeS-wshmxcbUSr3rmTUbf8sPft8iR8G5ov4ugIhULGuxAZtEi_GowB7_zeMKUVHIZzmVRuC40JGugWP1zUOXJ1WhD6tlP2A_ksXXj23Ze_N9j/s1600/all%20stand%20up.jpg" imageanchor="1" style="margin-left: 1em; margin-right: 1em;"><img border="0" height="190" src="https://blogger.googleusercontent.com/img/b/R29vZ2xl/AVvXsEi58bw-yYaDQa-MlEjy9GWuzoIk9_-4-cwaeS-wshmxcbUSr3rmTUbf8sPft8iR8G5ov4ugIhULGuxAZtEi_GowB7_zeMKUVHIZzmVRuC40JGugWP1zUOXJ1WhD6tlP2A_ksXXj23Ze_N9j/s320/all%20stand%20up.jpg" width="320" /></a></span></div><div class="gmail_quote" style="text-align: left;"></div><div class="gmail_quote" style="text-align: left;"><br />
<span style="font-size: small;">ಮುಗಿಸುವ ಮುನ್ನ:</span> <span style="font-size: small;"><br />
<br />
"ಸಕ್ಸೆಸ್ ಕೇ ಪೀಛೆ ಮತ್ ಭಾಗೋ, ಲೈಫ್ ಕಾ ಮಜಾ ಲೂಟ್ ಲೋ" ಎಂದು ರಾಂಚೋ ಹೇಳುವಾಗಲೆಲ್ಲಾ ಡೆಡ್ ಪೋಯೆಟ್ ಸೊಸೈಟಿಯ<span style="font-size: small;"><b> "I went to the woods because i wanted to live deliberately, i wanted to live deep and suck out all the morrow of life, to put to rout all that was not life and not when i had come to die discover that i had not lived "</b></span> ಎನ್ನುವ ಸಾಲುಗಳೇ ಮತ್ತೆ ಮತ್ತೆ ನೆನಪಾಗುತ್ತವೆ. ಶಾಲೆಯಿಂದ ಹೊರಹಾಕಲ್ಪಟ್ಟ ಕೀಟಿಂಗ್ ತರಗತಿಯಿಂದ ಹೊರ ನಡೆಯುವಾಗ ಶಾಲಾ ಮುಖ್ಯಸ್ಥನ ಮಾತನ್ನು ಧಿಕ್ಕರಿಸಿ "ಕ್ಯಾಪ್ಟನ್ ಓ ಮೈ ಕ್ಯಾಪ್ಟನ್" ಎನ್ನುತ್ತಾ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರೇ ಡೆಸ್ಕಿನ ಮೇಲೇರುವ ಸನ್ನಿವೇಶದ ಅಳವಡಿಕೆಯೇ ಥ್ರೀ ಈಡಿಯೆಟ್ಸ್ ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ಕಾರಿಡಾರಿನಲ್ಲೇ ಫರ್ಹಾನ್, ರಾಜು ಪ್ಯಾಂಟು ಬಿಚ್ಚಿ "ಜಹಾಪನಾ ತುಸ್ಸೀ ಗ್ರೇಟ್ ಹೋ" ಎನ್ನುತ್ತಾ ರಾಂಚೋಗೆ ಸಲಾಮು ಹೊಡೆಯುವ ಅಪೂರ್ವ ಸನ್ನಿವೇಶವಾಗಿದೆ. ಇನ್ನೊಮ್ಮೆ ಡೆಡ್ ಪೋಯೆಟ್ಸ್ ಸೊಸೈಟಿಯನ್ನೋ, ಥ್ರೀ ಈಡಿಯೆಟ್ಸ್ ಸಿನಿಮಾವನ್ನೋ ನೋಡುವಾಗ ಇದನ್ನೆಲ್ಲಾ ಹಾಗೇ ಸುಮ್ಮನೆ ಗಮನಿಸಿ.</span></div><div class="gmail_quote" style="text-align: left;"><span style="font-size: small;"><br />
</span> </div><div class="gmail_quote" style="text-align: left;"><b><span style="font-size: small;">("ಸಾಂಗತ್ಯ"ದ ಪ್ರಥಮ ಮುದ್ರಿತ ಸಂಚಿಕೆಯಲ್ಲಿ ಪ್ರಕಟಗೊಂಡ ಬರಹ)</span></b> </div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com6tag:blogger.com,1999:blog-4290647614806416638.post-22139537408027359492010-04-01T01:04:00.002+05:302010-04-01T18:56:20.404+05:30ಬೆಂಗಳೂರೆಂದರೆ,,,,,,,,<div class="separator" style="clear: both; text-align: center;"></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhRCBme4upjhm8hr8d9rDL3H0fct_zKsaMV1KD9VwRR6LLn-btLJDSh03thMy7IZZAyOrDZZfre92nHN2OJ2fPgIxXVY51x2q-zy2fFCAz0bjgVcKWJ7SZOeJiFBgt0di4EdT05K_TOulsc/s1600-h/tea.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEhRCBme4upjhm8hr8d9rDL3H0fct_zKsaMV1KD9VwRR6LLn-btLJDSh03thMy7IZZAyOrDZZfre92nHN2OJ2fPgIxXVY51x2q-zy2fFCAz0bjgVcKWJ7SZOeJiFBgt0di4EdT05K_TOulsc/s320/tea.jpg" width="222" /></a></div><span style="font-size: small;"></span><span style="font-size: small;"></span><span style="font-size: small;"></span><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><br />
<div style="font-family: inherit;"><span style="font-size: small;">ಬೆಂಗಳೂರೆಂದರೆ........<br />
<br />
ಕುಡಿದು ಬಿಟ್ಟ ಬೈಟೂ ಕಾಫಿ, ಸಂಜೆಯ ಹೊತ್ತಿಗೆ ಹೆಚ್ಚಾಗಿ ಸುರಿಯುವ ಮಳೆ, ಪಿಡ್ಜಾ ಹಟ್ಟಿನ ಮುಂದುಗಡೆ ಹೋಂ ಡೆಲಿವರಿಗೆ ನಿಂತ ಹೀರೋ ಹೋಂಡಾ, ಪಲ್ಸರ್ಗಳು, ತಿಂಗಳಾಂತ್ಯದಲ್ಲೋ ವಾರಾಂತ್ಯದಲ್ಲೋ ಧಿಡೀರ್ ಹುರುಪುಗೊಂಡು ಕಾರ್ಯಾಚರಣೆಗೆ ಇಳಿಯುವ ಜ್ಞಾನೋದಯಗೊಂಡ ಬುದ್ಧಂತಹ ಟ್ರಾಫಿಕ್ಕು ಪೋಲೀಸರು, ಕೆಂಪು ಬಣ್ಣದ ಸಿಗ್ನಲ್ಲು ಬಿದ್ದಾಗ ನಿಂತ ಹೋಂಡಾ ಆಕ್ಟಿವಾದ ಹ್ಯಾಂಡಲನ್ನು ಏಕಾಗ್ರತೆಯಿಂದ ಹಿಡಿದು ಡ್ರೈವಿಂಗ್ ಸೀಟಿನಲ್ಲಿ ಕೂತ ಅಮ್ಮನ ಕತೆ ಕೇಳುತ್ತಿರುವ ಮುದ್ದು ಪುಟಾಣಿ, ಸತ್ತ ಮೀನನ್ನು ಚರಂಡಿಗೆ ಎಸೆಯುತ್ತಿರುವ ತ್ಯಾಗರಾಜನಗರದ ಅಕ್ವೇರಿಯಂ ಅಂಗಡಿಯ ಮಾಲೀಕ, ಜಗಮಗಿಸುವ </span>ಪಾರ್ಟಿ<span style="font-size: small;">-ಮದುವೆ ಹಾಲ್, ದ್ವಾರದಲ್ಲೇ ಇಂಥೋರು ವೆಡ್ಸ್ ಇಂಥೋರನ್ನ ಅನ್ನೋ ಹೂವಿನ ಕಟೌಟ್, ಮೆಟ್ರೋಗೆ ಕಟ್ಟುತ್ತಿರುವ ಕಂಬ, ಸೇತುವೆ ಮೇಲೆ ಕುಳಿತ ವೆಲ್ಡರಿನ ಹಣೆಯಿಂದ ನೆಲ ಸೇರುತ್ತಿರುವ ಬೆವರಿನ ಹನಿ, ಸಿಟಿ ರೈಲ್ವೆ ಸ್ಟೇಶನ್ನಿನ ಅಂಡರ್ಪಾಸಿನ ಮೆಟ್ಟಿಲಿಳಿಯುವಾಗ ಪಕ್ಕದಲ್ಲೇ ನಡೆಯುತ್ತಾ "ಇನ್ನೂರು </span>ಬರ್ತೀಯಾ<span style="font-size: small;">" ಎಂದು ಕಿವಿ ಹತ್ತಿರ ಉಸುರಿದ ಹುಡುಗಿ, ಉತ್ತರ ಸಿಕ್ಕದೇ ಮುಂದಿನವನತ್ತ ಅದೇ ವೇಗದಲ್ಲಿ ನಡೆಯುವ ಆಕೆಯ ಹೆಜ್ಜೆಗಳು, "ಡಬ್ಬಾ ತರಹಾ ಇದೆ ಸಾರ್ ಸಿನ್ಮಾ. ಮಲ್ಕೊಳಿ ಮನೆಗ್ಹೋಗಿ" ಎನ್ನುತ್ತಾ ಬೈಕು </span>ಪಾರ್ಕು <span style="font-size: small;">ಮಾಡುವಾಗ ಬುದ್ದಿಮಾತು ಹೇಳುವ ಥಿಯೇಟರಿನ ವಾಚ್ಮನ್ನು, ಆಫ್ ಮಾಡಿದ ಬೈಕು ಸಿಗ್ನಲ್ಲು ಬಿದ್ದಾಗ ಹೊಡೆದ ಕಿಕ್ಕಿಗೆ </span>ಸ್ಟಾರ್ಟ್ <span style="font-size: small;">ಆಗದೇ ಇದ್ದೋರೆಲ್ಲಾ ಸಿಟ್ಟಿನಲ್ಲಿ, ರಣೋತ್ಸಾಹದಲ್ಲಿ ಹೊಡೆಯುತ್ತಿರುವ ವೆರೈಟಿ </span>ಹಾರ್ನುಗಳು<span style="font-size: small;">, ಮೆಜೆಸ್ಟಿಕ್ಕಿನ ಕಲ್ಲುಬೆಂಚಿನಲ್ಲಿ ತನ್ನ ಹುಡುಗ ಮಾಡುತ್ತಿರುವ ಚೇಷ್ಟೆಗಳಿಗೆ ಹುಸಿಮುನಿಸು ತೋರಿಸುತ್ತಾ, ಅಕ್ಕ ಪಕ್ಕದವರ ಪರಿವೆಯೇ ಇರದೇ ಜೋರಾಗಿ ಗದರುತ್ತಾ ನಗುತ್ತಿರುವ ಹುಡುಗಿ, ತಡೆಹಿಡಿದ ಮೂತ್ರವನ್ನು </span>ವಿಸರ್ಜಿಸಲು <span style="font-size: small;">ಬೇರ್ಯಾವುದೇ ಸೂಕ್ತ ಮಾರ್ಗ ಕಾಣದೇ ಮೂಗು ಹಿಡಿಯುತ್ತಾ, ಕಾಲಿನ ಪ್ಯಾಂಟನ್ನು ಎತ್ತಿಹಿಡಿಯುತ್ತಾ ಮೆಜೆಸ್ಟಿಕ್ಕಿನ ಜಗತ್ಪ್ರಸಿದ್ಧ ಸುವಾಸನೆ ಭರಿತ ಸಾರ್ವಜನಿಕ ಮೂತ್ರಾಲಯ ಹೊಕ್ಕ ಎಂಜಿನಿಯರಿಂಗ್ ಸ್ಟೂಡೆಂಟು, ಉತ್ತರ ಪ್ರದೇಶದ ಮೀಸೆ ಚಿಗುರದ ಹುಡುಗ ಫುಟ್ಪಾತಲ್ಲಿ ನಿಂತು ನೀಡುತ್ತಿರುವ ಪಾನಿಪುರಿಯನ್ನು ಚಪ್ಪರಿಸಿ ತಿನ್ನುತ್ತಿರುವ ಹರೆಯದ ಹುಡುಗಿ, ಅವಳನ್ನೇ ತದೇಕಚಿತ್ತದಿಂದ ಬಿಎಂಟಿಸಿ ಬಸ್ಸೊಳಗಿನ ರಶ್ಶನ್ನೂ ಲೆಕ್ಕಿಸದೇ ನೋಡುತ್ತಾ ತನ್ನ ಸುತ್ತ ವೃಂದಾವನ ಕಟ್ಟಿಕೊಳ್ಳುತ್ತಿರುವ ಹುಡುಗ, ತಮ್ಮತಮ್ಮೊಳಗೆ ಕನ್ನಡದಲ್ಲೇ ವ್ಯವಹರಿಸುತ್ತಾ ಬಂದ ಗಿರಾಕಿಗಳ ಮುಂದೆ ಮಾತ್ರ "ವಾಟ್ ಡು ಯು ವಾಂಟ್ ಸರ್" ಎನ್ನುತ್ತಿರುವ ಪಿಜ್ಜಾ ಕೌಂಟರಿನವರು, ಸಿಗ್ನಲ್ಲು ಬೀಳದಿದ್ದರೂ ತಟಕ್ಕನೆ ಕೆಜಿ ರೋಡು ದಾಟಲು ಹರಸಾಹಸ ಪಡುತ್ತಾ ವೇಗವಾಗಿ ಬರುವ ವಾಹನಗಳ ಬ್ರೇಕಿನ ಸದ್ದಿಗೆ ಹೆದರಿ ಮತ್ತೆ ರಸ್ತೆ ಪಕ್ಕಕ್ಕೆ ಬಂದು ನಿಲ್ಲುವ ಮಂದಿ, ಸೆಂಟ್ರಲ್ ಕಾಲೇಜಿನ ಕಂಪೌಡು ಹಾರಿ</span> ಶಾರ್ಟ್ <span style="font-size: small;">ಕಟ್ಟಿನಲ್ಲಿ ಲೇಟಾದ ಕ್ಲಾಸು ತಲುಪಲು ಹೊರಟ ಗುಜರಾತಿ, ಪಿಕ್ಪಾಕೇಟ್ ಆದ ಮೊಬೈಲಿನ ಬಗ್ಗೆ ಕಂಪ್ಲೇಂಟು ಕೊಡಲು ಜಯನಗರ ಸ್ಟೇಶನ್ನಿನ ಒಳಹೊಕ್ಕು ಪೋಲೀಸರನ್ನು ಕಂಡರೆ ನೆನಪಾಗುವ ಸಾಯಿಕುಮಾರ್ ಸಿನಿಮಾಗಳು, ಭಯಂಕರ ಭಯಂಕರ ಡೈಲಾಗುಗಳು, ಫುಟ್ಪಾತಿನಲ್ಲಿ ತೆಗೆದುಕೊಂಡ ಸಿನಿಮಾ ಡಿವಿಡಿ ಹೀರೋ ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ ಎನ್ನುವ ದೃಶ್ಯದಲ್ಲೇ ಸಿನಿಮಾದ ಕೊನೆಯ ದೃಶ್ಯದಂತೆ ನಿಂತುಹೋಗಿರುವ ದುರದೃಷ್ಟದ ಘಳಿಗೆ, ಎರಡೆರಡು ಸಾರಿ ಪ್ರಯತ್ನಪಟ್ಟರೂ </span>ಕಾರ್ಡು <span style="font-size: small;">ಡಿಟೆಕ್ಟು ಮಾಡದ ಎಟಿಎಂ ಮೆಶಿನ್ನು, </span>ಮಾರ್ಕೆಟ್ಟಿನಲ್ಲಿ <span style="font-size: small;">ಭವಿಷ್ಯವೇ ಕೈಕೊಟ್ಟ ವ್ಯಕ್ತಿಯಿಂದ ಭವಿಷ್ಯ ಕೇಳುತ್ತಿರುವ ಬಡ ಹೆಂಗಸು, ಅದ್ಯಾವುದೋ ಘಳಿಗೆಯಲ್ಲಿ ಪೈಪು ಒಡೆದು ನದಿಯಂತೆ ಹರಿಯುತ್ತಿರುವ ಕಾವೇರಿ ನೀರು, ಕೈ ಕೋಳ ಹಾಕಿ ಹರೆಯದ ಹುಡುಗನೊಬ್ಬನನ್ನ ಚಿಕ್ಕಪೇಟೆಯ </span>ದರ್ಗಾದ <span style="font-size: small;">ಎದುರಿನ ಜನ ದಟ್ಟಣೆಯಲ್ಲಿ ಒಯ್ಯುತ್ತಿರುವ ಪೋಲೀಸ್ ಪೇದೆ, ಎಸ್ಪಿ ರೋಡಲ್ಲಿ 7 ರೂಪಾಯಿಗೆ ಸಿಗುವ ಬ್ಲ್ಯಾಂಕು ಡಿವಿಡಿ, ನಿಂತ ಬೈಕಿಗೆ ರಭಸದಿಂದ ಬಂದು ಗುದ್ದಿದ ಬಸ್ಸು, ಹಾರಿ ಮುಂದಿದ್ದ ಕಾರಿನ ಮೇಲೆ ಬಿದ್ದ ಟೈ ಹಾಕಿಕೊಂಡ ಮಧ್ಯವಯಸ್ಕ, ಹಿಂದೆ ಮುಂದೆ ನಡೆಯಲು ತಿರುಗಲೂ ಸಾಧ್ಯವಾಗದ ಬೆಳಿಗ್ಗಿನ-ಸಂಜೆಯ ಬಿಎಂಟಿಸಿಯಲ್ಲಿ ಮುಂದಕ್ಕೆ ಹೋಗಲಿಕ್ಕೆ ದಾರಿ ಬಿಡದಿದ್ದಕ್ಕೆ ತಾವು ತಾವೇ ಲಾಯರುಗಳೆಂಬಂತೆ ವಾದ ಮಾಡುತ್ತಾ, ಜಗಳ ಕಾಯುತ್ತಾ ಸುತ್ತಲಿನವರನ್ನು ಸಿಂಪತಿ, ಹೂಂಕಾರ, ಠೇಂಕಾರಗಳಿಗೆ ಎಳೆಯಲು ಯತ್ನಿಸುತ್ತಾ ಬಿಎಂಟಿಸಿಯಲ್ಲೇ ಕ್ರಾಂತಿ ಮಾಡಲು ಹೊರಟವರು, ಹೇ ಅವನೇ ಕಣೋ ಕೊತ್ವಾಲನ ರೈಟ್ ಹ್ಯಾಂಡು ಆಗಿದ್ದವ-ಶೆಟ್ಟಿ ಎನ್ನುತ್ತಾ ಕೌಂಟರಿನಲ್ಲಿರುವ ಬೋಳುತಲೆಯ ಕನ್ನಡಕದ ಆಸಾಮಿಯನ್ನು ಕ್ಯಾಂಟೀನಿನಲ್ಲಿ ತೋರಿಸುತ್ತಿರುವ ಕಾಲೇಜು ಹುಡುಗರು, "ಮಗಾ ಅವ್ಳ ಮನೆ ಹತ್ರ ಹೋಗಿದ್ಯಾ, ಏನಂದ್ಳೋ" ಎನ್ನುತ್ತಾ ಗೆಳೆಯನೊಬ್ಬನನ್ನು ಥೇಟು ಲೂಸು ಮಾದನ ಸಿನಿಮಾದ ದೃಶ್ಯದಂತೆ ಕೇಳುತ್ತಿರುವ ಹೈಸ್ಕೂಲು ಹುಡುಗ, </span>ಕ್ರಿಕೆಟ್ <span style="font-size: small;">ಆಡಿ ಕೊಳೆಯಾದ ಅವನ ಸಮವಸ್ತ್ರ, ಒಂದೆರಡು ಗಂಟೆ ಗಿಜಿಗುಡುವ ಮೆಜೆಸ್ಟಿಕ್ಕಿನಲ್ಲಿ ಸುಮ್ಮನೆ ಕೂತರೆ ಜೀವನ ನಶ್ವರ, ಕ್ಷಣಿಕ ಎನ್ನುವ ಸತ್ಯ ಗೊತ್ತಾಗಿ ಗಾಬರಿಯಿಂದ ಸನ್ಯಾಸಿಗಳಾಗುತ್ತೇವೋ ಎನ್ನುವ ಭಯದಿಂದ ಸಿಕ್ಕ ಬಸ್ಸು ಹತ್ತಿಬಿಡುವ ಧಾವಂತ, ಆನಂದ ರಾವ್ ಸರ್ಕಲ್ಲಿನ ಫ್ಲೈ ಓವರಿನಲ್ಲಿ ಟ್ರಾಫಿಕ್ ಜಾಮಾಗಿ ಅಟೇನ್ಶನ್ನಲ್ಲಿ ಅಡ್ಡಾ ದಿಡ್ಡಿ ನಿಂತ ಬಸ್ಸು, ಕಾರು, ಪ್ರವಾಸಕ್ಕೆ ಹೊರಟ ಟೆಂಪೋ ಟ್ರ್ಯಾಕ್ಸು, ದೊಡ್ಡ ನೀಲಿ ಡ್ರಮ್ಮು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿಟ್ಟ ರಾಮನವಮಿಯ ಪಾನಕ ಫುಲ್ರಶ್ಶಿನ ಮಧ್ಯೆ ಅರೆ ಕಾಸಿನ ಮಜ್ಜಿಗೆ, ಪದ್ಮನಾಭನಗರದ ಬಸ್ಸ್ಟ್ಯಾಂಡಿನಲ್ಲಿ ಸಂಜೆ ಆರೂವರೆ ಹೊತ್ತಿಗೆ ತಪ್ಪಿಸದೇ ಬೇಟಿಯಾಗುವ ಎಂಟುಮಂದಿ ತಾತಂದಿರು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಪೇರಿಸಿಟ್ಟ ಮುದ್ದೆ, ಮಧ್ಯಾಹ್ನಗಳಲ್ಲಿ ಗಾಂಧೀನಗರದಲ್ಲಿ ಸಾಲಾಗಿ ಊಟಕ್ಕೆ ಬಂದು ನಿಲ್ಲುವ ಆಟೋರಿಕ್ಷಾದವರು, ರಿಕ್ಷಾದ ಮುಂದೆ ಹಿಂದೆ ಅಂಟಿಹೋದ ರಾಜ್ಕುಮಾರು, ಶಂಕರ್ನಾಗು..ಕನ್ನಡಿಯಲ್ಲಿ ಬರೆದಿಟ್ಟ ತಂದೆ ತಾಯಿ </span>ಆಶೀರ್ವಾದ<span style="font-size: small;">, ನಾರಿ ಮುನಿದರೆ ಮಾರಿ, ಎರಡು ಕಾರು ಬಸ್ಸುಗಳ ಮಧ್ಯೆ ಇರುವ ಹೊದ್ದು ಹಾಸಲಾಗುವಷ್ಟೇ ಇರುವ ಜಾಗದಲ್ಲಿ ಬೈಕು ನುಗ್ಗಿಸುತ್ತಾ ತುಂಬಾ ಮುಂದೆ ಬಂದೆ ಎಂದು ಖುಷಿಯಾಗಿ ಬೀಗಿ ಗತ್ತಿನಿಂದ ಹಿಂದಕ್ಕೆ ನೋಡುತ್ತಿರುವ ಬೈಕಿನವ, ಗಾಜಿನ ಕಟ್ಟಡಗಳ ಮೇಲೆ ಭಯಕ್ಕೋ ಭಕ್ತಿಗೋ ಕನ್ನಡದ ಧ್ವಜ, ರಾಜ್ಕುಮಾರು, ಇತ್ತೀಚೆಗೆ ವಿಷ್ಣುವರ್ಧನ್ನು, ಬೆಳಿಗ್ಗೆಗೆ ಮುಗಿದು ಹೋದ ಕರಗ, ಉಳಿದು ಹೋದ ಬಣ್ಣದ ಬಲೂನು, ಪ್ರಸಾದದ ಹೂ, ನಿಂತಲ್ಲೆಲ್ಲಾ ಕಸ ಲೋಡು ಮಾಡುತ್ತಾ ಅದೆಲ್ಲಾ ಓವರ್ ಲೋಡಾಗಿ ಕಸದ ವಾಹನ ಚಲಿಸುವಾಗ ಒಂದೋ ಎರಡೋ </span>ಪರ್ಸೆಂಟು <span style="font-size: small;">ಗಾಳಿಗೆ ಹಾರುತ್ತಾ ತನ್ನೆಲ್ಲಾ ಘಮಗಳನ್ನು ಹರಡುತ್ತಿರುವ ಬೆಳಿಗ್ಗಿನ ಹೊತ್ತು, ಹರಿದು ಹೋದ ಪೋಸ್ಟರಿನಲ್ಲಿ ನಿಂತು ನಗುತ್ತಿರುವ ನಾಯಕ, ಜಾಸ್ತಿ ವಾಹನಗಳು ಚಲಿಸಿದಾಗ ಸಣ್ಣಗೆ ನಡುಗುವ </span>ಮಾರ್ಕೆಟ್ಟಿನ <span style="font-size: small;">ಫ್ಲೈಓವರ್ರು, ದೇವೇಗೌಡ ಪೆಟ್ರೋಲ್ ಬಂಕಿನ ಸಿಗ್ನಲ್ಲಿನಲ್ಲಿ ಹೂ, ಹರಿವೆ ಸೊಪ್ಪನ್ನು ಮಾರುತ್ತಿರುವ ಹೈಸ್ಕೂಲು ಹುಡುಗಿಯ ಕಣ್ಣಲ್ಲಿ ಮಿನುಗುತ್ತಿರುವ ಸಂಜೆಯ ಉತ್ಸಾಹ......</span></div><div style="font-family: inherit;"><br />
</div><div style="font-family: inherit;"><span style="font-size: small;">ಹೀಗೆ.........<br />
<br />
ಬೆಂಗಳೂರೆಂದರೆ ಪೂರ್ಣ ವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ....ಬಣ್ಣ ಬಣ್ಣದ ಗಾಳಿಪಟ....ಸೂತ್ರ ಹಿಡಿದು ನಿಯಂತ್ರಿಸುತ್ತಾ, ಸಣ್ಣವರಾಗುತ್ತಾ, ಸೂತ್ರ ಹರಿದಾಗ ಅಷ್ಟು ಹೊತ್ತು ಆಡಿದ ಆಟವನ್ನು ನೆನೆಯುತ್ತಾ ಬಿದ್ದ ಗಾಳಿಪಟವನ್ನು ಹುಡುಕುವುದು..ಸಿಗದಿದ್ದರೆ ಒಂದಿಷ್ಟು ಪರ್ಸಂಟೇಜು ದುಃಖಿಸುತ್ತಾ ಮತ್ತೊಂದಷ್ಟು ಪರ್ಸಂಟೇಜು ಆಶೋತ್ತರಗಳೊಂದಿಗೆ ಗೋಂದು, ಬಣ್ಣದ ಪೇಪರು, ಹಿಡಿಸುಡಿ ಕಡ್ಡಿ ಹಿಡಿದು ಮತ್ತೊಂದು ಗಾಳಿಪಟಕ್ಕೆ ರೆಡಿಯಾಗುವುದು.....<br />
<br />
ಬೆಂಗಳೂರೆಂದರೆ ಹಾಗೇ......... </span><br />
<br />
<span style="font-size: small;"><b>ಚಿತ್ರ ಕೃಪೆ: <a href="http://www.flickr.com/photos/bhat_balu/">ಬಾಲು ಮಂದರ್ತಿ</a> </b></span></div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com16tag:blogger.com,1999:blog-4290647614806416638.post-79295622833895891472010-03-27T22:42:00.003+05:302010-03-27T23:01:03.490+05:30ಅಡಿಕೆ ತೋಟಗಳಿಗೆ ಅಡರಿದೆ ಮುಪ್ಪು<span style="font-size: small;"></span><span style="font-size: small;"></span><span style="font-size: small;"></span><span style="font-size: small;"></span><span style="font-size: small;"></span><br />
<div class="separator" style="clear: both; text-align: center;"><span style="font-size: small;"><a href="https://blogger.googleusercontent.com/img/b/R29vZ2xl/AVvXsEhTG2P80VZ1o-JFFEqkwoY6mpKb4_k6IIPhSELh5xKqyCWghAgkw3gbkW4vKSbEMoo4XHKvpPnn-XByzk3tj9AiNNZUDZ4qXVT0LkIKGmhV_85pySE_rF4PENAosD0goa6sthQwZtAg6jOb/s1600-h/4031737504_6627771802_b.jpg" imageanchor="1" style="margin-left: 1em; margin-right: 1em;"><img border="0" height="266" src="https://blogger.googleusercontent.com/img/b/R29vZ2xl/AVvXsEhTG2P80VZ1o-JFFEqkwoY6mpKb4_k6IIPhSELh5xKqyCWghAgkw3gbkW4vKSbEMoo4XHKvpPnn-XByzk3tj9AiNNZUDZ4qXVT0LkIKGmhV_85pySE_rF4PENAosD0goa6sthQwZtAg6jOb/s400/4031737504_6627771802_b.jpg" width="400" /></a></span></div><span style="font-size: small;"><br />
</span><br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><span style="font-size: small;">ತೋಟದೊಡೆಯನೇ ಅಡಿಕೆ ಹೆಕ್ಕುವವನು, ಅಡಿಕೆ ಹೊರುವವನು. ರಟ್ಟೆಯಲ್ಲಿ ತಾಕತ್ತಿದ್ದರೆ ಮರದಿಂದ ಅಡಿಕೆ ಇಳಿಸುವವನು" ಎನ್ನುವಲ್ಲಿಗೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರ ಪರಿಸ್ಥಿತಿ ಬಂದು ನಿಂತಿದೆ(ಉಳಿದ ಭಾಗದ ಕೃಷಿಕರದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ). "ದುಡ್ಡು ಕೇಳಿದಷ್ಟು ಕೊಡುವ. ಮಜಲಿನದ್ದು, ಬಾಕಿಮಾರಿನ ತೋಟದ ಅಡಿಕೆ ಇಳಿಸಿ ಕೊಡು. ಅಡಿಕೆ ಹೆಕ್ಲಿಕ್ಕೆ ಮುಂದಿನ ವಾರ ಒಂದು ದಿನ ಇಬ್ಬರು ಬರ್ತಾರಂತೆ</span><span style="font-size: small;">. ಅಷ್ಟರೊಳಗೆ ಮುಗಿಸಿಕೊಡು ಮಾರಾಯ" ಎಂದು ಪರಿಚಯವಿರುವ ಕೆಲಸಗಾರರಿಗೆ ದಮ್ಮಯ್ಯ ಗುಡ್ಡೆ ಬಿದ್ದರೂ ಕೆಲಸಕ್ಕೆ ಜನ ಸಿಗುತ್ತಿಲ್ಲ. ನಾಳೆಯಿಂದ ನಾಲ್ಕು ದಿನ ನಿರಂತರವಾಗಿ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿದ ಕೆಲಸದವರು ಆ ನಾಲ್ಕು ದಿನ ಕಳೆದು ವಾರವಾದರೂ ಪತ್ತೆಯಿಲ್ಲ. ಮೊಬೈಲಿಗೆ ಕಾಲ್ ಮಾಡಿದರೆ ರಿಂಗ್ ಮಾತ್ರ ಆಗುತ್ತದೆ. ರಿಸೀವ್ ಮಾಡುವವರಿಲ್ಲ.</span><br />
<span style="font-size: small;"><br />
</span><br />
<span style="font-size: small;"> "ನಿಮ್ಮಲ್ಲಿ ಕೆಲಸಕ್ಕೆ ಜನ ಸಿಗ್ತಾರಾ??" ಎನ್ನುವುದು ಪರಸ್ಪರ ಭೇಟಿಯಾಗುವ ಅಡಿಕೆ ಕೃಷಿಕರೆಲ್ಲರ ಮೊದಲ ಮುಖ್ಯ ಪ್ರಶ್ನೆ. ಮದುವೆ ಇರಲಿ, ಸಾರ್ವಜನಿಕ ಗಣೇಶೋತ್ಸವವಿರಲಿ, ತಾಲೂಕು ಪಂಚಾಯಿತಿ ಮೀಟಿಂಗ್ ಇರಲಿ, ರಶ್ಶಾದ ಖಾಸಗಿ ಬಸ್ಸಲ್ಲಿ ಪರಸ್ಪರರು ಸಿಕ್ಕಲಿ ಇದಂತೂ ನಿತ್ಯದ ಸುಪ್ರಭಾತ. </span><br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><span style="font-size: small;"><br />
ಒಂದು ಕಾಲದಲ್ಲಿ ಅಂದರೆ ಹತ್ತೋ ಹದಿನೈದು ವರ್ಷಗಳ ಹಿಂದೆ ಎರಡೋ ಮೂರೋ ಎಕರೆಯಲ್ಲಿ ಅಡಿಕೆ ಸಸಿ ನೆಟ್ಟು ಅದನ್ನು ತನ್ನದೇ ಮಗುವೇನೋ ಎಂಬಂತೆ ಬೆಳೆಸಿದ ಅಡಿಕೆ ಕೃಷಿಕ ಇವತ್ತು ಕೆಲಸದವರಿಲ್ಲದೇ ಪೂರ್ತಿ </span><span style="font-size: small;">ಕಂಗಾಲು. ಜೊತೆಗೆ ಅವನ ತೋಟವೀಗ ಹತ್ತು ಎಕರೆಯಷ್ಟು ವಿಸ್ತಾರ ಬೇರೆ. ಪ್ರಾರಂಭದ ದಿನಗಳಲ್ಲಿ ತೋಟ ಮಾಡಬೇಕು ಎನ್ನುವ ಹುರುಪಿತ್ತು. ಸ್ವತಃ ಅಡಿಕೆ ಮರಕ್ಕೆ ಹತ್ತಿ ಅಡಿಕೆ ಇಳಿಸುವ ತಾಕತ್ತಿತ್ತು. ಮೊದಲೆರಡು ವರ್ಷಗಳಲ್ಲಿ ಬಂದ ಹಿಡಿ ಪಾವು ಲಾಭದಲ್ಲಿ ಹೆಂಡತಿಯ ಕೊರಳು ಖಾಲಿ ಖಾಲಿ ಕಾಣುವುದನ್ನು ಕಂಡು ಲಕ್ಷ್ಮಣ ಆಚಾರಿ ಹತ್ರ ಸಿಂಪಲ್ಲಾದ ಚಿನ್ನದ ಚೈನು ಮಾಡಿಸಬೇಕು ಎಂದುಕೊಂಡಿದ್ದ ತನ್ನ ಯೋಜನೆಯನ್ನೇ ಮುಂದೂಡಿ ಹೊಸದಾಗಿ ಬಂದ ಸ್ಪಿಂಕ್ಲರ್ ಹಾಕಿಸಿದರೆ ಕಡೇ ಪಕ್ಷ ಬೇಸಿಗೆಯಲ್ಲಿ ನೀರು ಸರಿಯಾಗಿ ಗಿಡಗಳಿಗೆ ಸಿಗುತ್ತದೆ ಎನ್ನುವಂತಹ ಅಭಿವೃದ್ಧಿ ಯೋಜನೆಗಳಿದ್ದವು. ಇದೆಲ್ಲದರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಮಗನ ಆಸೆ ಪೂರೈಸಲಿ ಎನ್ನುವ ಏಕೈಕ ಉದ್ದೇಶದಿಂದ ತನ್ನ ಹಣಕಾಸಿನ ಇತಿಮಿತಿಗೆ ದುಬಾರಿಯಾದ ಮಗನ ಇಷ್ಟದ ಕೋರ್ಸಿಗೆ </span><span style="font-size: small;">ಸೇರಿಸಿದ್ದ ಆತ. ಅದಕ್ಕೆ ತೆಗೆದ ಸಾಲವನ್ನು ಮುಂದಿನ ಕೆಲವಾರು ವರ್ಷಗಳಲ್ಲಿ ತೀರಿಸಿಕೊಂಡರಾಯಿತು ಎನ್ನುವ ದೂರಾಲೋಚನೆ ಆತನದ್ದು. ಇದೆಲ್ಲದರ ಮಧ್ಯೆ ಬೆಳೆದ ಮಗಳಿಗೆ ಮದುವೆ ಮಾಡಿರುತ್ತಾನೆ. ತೋಟವನ್ನು ಸಲಹುತ್ತಾ, ಸಂಬಂಧಿಗಳಿಗೆ ಬೇಜಾರಾಗಬಾರದು, ಸಂಬಂಧಗಳು ಉಳಿಯಬೇಕು ಎನ್ನುವ ಕಾಳಜಿಯಿಂದ ಎಪ್ರೀಲ್ ಮೇಯ ಮದುವೆ ಸೀಜನ್ನಿನಲ್ಲಿ ಒಂದೇ ದಿನ ಮೂರು ಮೂರು ಮದುವೆ ಅಟೆಂಡು ಮಾಡುತ್ತಾ, ಮತ್ತೊಂದಕ್ಕೆ ಹೆಂಡತಿಯನ್ನು ಕಳಿಸಿ ಅಬ್ಬಾ ಅಂತೂ ಈ ವರ್ಷದ ಮದುವೆ ಕೋಟಾ ಮುಗಿಯಿತು ಎಂದು ಉಸಿರೆಳೆದುಕೊಂಡಿರುತ್ತಾನೆ.</span><br />
<span style="font-size: small;"><br />
</span><br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><span style="font-size: small;"> "ನಿಮಗೇನು ಬಿಡೋ ಮಾರಾಯ. ಅಡಿಕೆ ತೋಟ ಇದೆ. ಮರದಲ್ಲಿ ಅಡಿಕೆ ಬೆಳೆಯುತ್ತದೆ. ಇಳಿಸಿ ಮಾರಿದರಾಯ್ತು. ಜೀವನ ಆರಾಮು" ಎನ್ನುವ ಉಡಾಫೆಯ ಮಾತುಗಳೇ ಸಂಬಂಧಿಕರದ್ದು. ಅವರಿಗಂತೂ "ತೋಟ ಮಾಡಿಕೊಂಡು ಇವನೊಬ್ಬ ಆರಾಮವಾಗಿ ದಿನದೂಡುತ್ತಿದ್ದಾನೆ. ನಮ್ಮಂತೆ ನಗರದಲ್ಲಿ ಒದ್ದಾಡುತ್ತಿಲ್ಲವಲ್ಲ" ಎನ್ನುವ ಭ್ರಮೆ. ಇನ್ನು ಊರಲ್ಲಿರುವ ಪಿತ್ರಾರ್ಜಿತವಾಗಿ </span><span style="font-size: small;">ಬಂದ ಆಸ್ತಿಯನ್ನು ಕಂಡು "ನಮಗೆ ಊರಲ್ಲಿ ಉಂಟು" ಎಂದು ನಗರದಲ್ಲಿ ತಮ್ಮ ಪ್ರೆಸ್ಟೀಜು ಹೆಚ್ಚಿಸಲು ಮಾತಾಡುವವರಿಗೇನು ಕಮ್ಮಿ ಇಲ್ಲ. ಇವರ್ಯಾರಿಗೂ ಅಡಿಕೆ ತೋಟವನ್ನು ಸಂಭಾಳಿಸುವುದು ಮೊದಲಿನಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗೆಲ್ಲಾ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಡಿಕೆ ತೋಟ ಅಡ್ಡಾಡಲು ಪಾರ್ಕಿನಂತೆ </span><span style="font-size: small;">ಕಾಣುತ್ತದೆಯೇ ಹೊರತು ತೋಟದ ಜ್ವಲಂತ ಸಮಸ್ಯೆಗಳು ಬೇಕಿಲ್ಲ. ನಿಭಾಯಿಸುವವ ಅದನ್ನು ಹೇಳಲು ಹೊರಟರೂ ಅವರಿಗೆ ಕೇಳಲು ಆಸಕ್ತಿ ಇಲ್ಲ. ಇದೆಲ್ಲ ಸಾವಿರದೊಂಬೈನೂರ ಐವತ್ತನಾಲ್ಕನೇ ಇಸವಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾದ ಅವ್ಯಾಹತ ಗೋಳಿನ ದೃಶ್ಯದಂತೆ ಕಾಣುವ ಮಟ್ಟಿಗಿನ ಸಿನಿಕತೆ ಅವರಲ್ಲಿ ತುಂಬಿ ತುಳುಕಾಡುತ್ತಿದೆ. ಅದನ್ನು ನಗರದ ವಾತಾವರಣ ಹುಟ್ಟು ಹಾಕಿದೆ. <br />
<br />
ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತೋಟ ತೋಟ ಎಂದು ಓಡಾಡುತ್ತಿದ್ದಂತಹ ಜೀವಗಳಿಗಿವತ್ತು ವಯಸ್ಸಾಗಿದೆ. ಅಡಿಕೆ ರೇಟು ಪಾತಾಳದಲ್ಲಿ ನೇತಾಡಲು ಶುರು ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಗ ಬೆಂಗ್ಳೂರು, ಮಂಗ್ಳೂರು ಸೇರಿಕೊಂಡು ಕೆಲಸ ಮಾಡಲು ಶುರು ಮಾಡಿ ಒಂದೆರಡು ವರ್ಷವಾಗಿದೆ. ಅವನಿಗೆ ತೋಟದಲ್ಲಿ ದೊಡ್ಡ ಮಟ್ಟಿನ ಇಂಟರೆಸ್ಟ್ ಇಲ್ಲ. ಹಾಕಿದ ಕಾಸೇ ಹುಟ್ಟದಿರುವ ಸನ್ನಿವೇಶವಿರುವಾಗ ಅಪ್ಪನೂ ಮಗನಿಗೆ ಒತ್ತಾಯ ಮಾಡುತ್ತಿಲ್ಲ. ಕೆಲಸಕ್ಕೆ ಜನ ಮೊದಲಿನಂತೆ ಸಿಗುತ್ತಿಲ್ಲ ಎನ್ನುವುದೇ ದೊಡ್ಡ ತಲೆನೋವು. ತಾನೇ ಕೆಲಸ ಮಾಡುವ ಎಂದರೆ ವಯಸ್ಸು ಕೇಳುತ್ತಿಲ್ಲ. ಯಾರಿಗೆ ಬೇಕು ಅಡಿಕೆ ಕೃಷಿ ಎನ್ನುವಂತಾಗಿದೆ. ಮೊದಲಿನಂತೆ ಈಗಿನ ಕೆಲಸಗಾರರು ಇಲ್ಲ. ಮಂಗ್ಳೂರು ಬೆಂಗ್ಳೂರು ಟ್ರೈನು ಶುರುವಾದ ಮೇಲೆ ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಡುಗರು, ಬೆಂಗ್ಳೂರಲ್ಲಿ ಮೇಸ್ತ್ರಿ ಕೆಲಸಕ್ಕೆ ಹೆಲ್ಪರ್ಗಳಾಗಿ ಸೇರಿಕೊಳ್ಳುವ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಶೀಘ್ರವಾಗಿ "ನಗರದಲ್ಲಿ ಮೇಸ್ತ್ರಿ"ಗಳಾಗುವ ಹಂಬಲ. ಮತ್ತೆ ಕೆಲವರು ನಗರದಲ್ಲಿ ಒದ್ದಾಡಿ ಕೆಲಸ ಹುಡುಕಿಕೊಂಡಿದ್ದಾರೆ. ಊರಲ್ಲಿ ತೋಟದ ಕೆಲಸಕ್ಕೆ ಹೋದರೆ ಜೀವನ ಪರ್ಯಂತ ತಮ್ಮ ಅಪ್ಪ-ಅಮ್ಮಂದಿರಂತೆ ಹೊಟ್ಟೆಗಷ್ಟೇ ಮಾತ್ರ ದುಡಿಯುವ ಪರಿಸ್ಥಿತಿ ಮುಂದುವರಿಯುವುದು ಅವರಿಗೆಲ್ಲಾ ಬೇಕಾಗಿಲ್ಲ. ಬೆಂಗ್ಳೂರಲ್ಲಿ ತಿಂಗಳುಗಟ್ಟಲೆ ದುಡಿದರೆ ಉಳಿಸಬಹುದು ಎನ್ನುವ ಯೋಚನೆಯಿಂದ ಟ್ರೈನು ಹತ್ತುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಗ್ರೇಡಿಂಗ್ ಸಿಸ್ಟಂ ಊರಿಗೆ ಬಂದಾಗಲೆಲ್ಲಾ ಚಲಾವಣೆಯಾಗುತ್ತದೆ ಎನ್ನುವ ತೀರ್ಮಾನಗಳಿವೆ</span><span style="font-size: small;">. "ಇಲ್ಲಿಗಿಂತ ಕಾಲು ವಾಶಿ ಜಾಸ್ತಿ ದುಡಿದರೂ, ಬೆಂಗ್ಳೂರಲ್ಲಿ ಕೈಯಲ್ಲಿ ದುಡ್ಡು ಉಳೀಲಿಕ್ಕೆ ಉಂಟಾ. ಇವರಿಗೆಲ್ಲ ಮರ್ಲ್(ಹುಚ್ಚು)" ಎಂದು ಊರ ಹಿರಿಯರು ಗೊಣಗುತ್ತಿರುತ್ತಾರೆ. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಜಡ್ಜ್ಮೆಂಟು ಪಾಸು ಮಾಡುವುದರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಉಳಿದಿಲ್ಲ. "ಎಲ್ಲಾ ನಮ್ಮ ಕರ್ಮ" ಎಂದು ಗೊಣಗುತ್ತಾರಷ್ಟೇ.<br />
<br />
ಇನ್ನು ಖಾಯಮ್ಮಾಗಿ ಅಡಿಕೆ ಸುಲಿಯಲು ಬರುತ್ತಿದ್ದವರೂ ಸಹ ಕಳೆದ ವರ್ಷದಿಂದ ನಿಯಮಿತವಾಗಿ ಕೈ ಕೊಡಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ರಾಯಿಯ ಅಡಿಕೆ ಸುಲಿಯುವ ಹುಡುಗರು ದೂರದ ಸುಬ್ರಮಣ್ಯಕ್ಕೆ ಹೋಗಿ ಒಂದೆರಡು ವಾರ ನಿಂತು ಅಡಿಕೆ ಸುಲಿದು ಕೊಟ್ಟು ಬಂದಿದ್ದಾರೆ. ಹಾಗೆ ಹೋಗಿದ್ದರಿಂದ ಊರಲ್ಲಿ ಅವರು ಖಾಯಮ್ಮಾಗಿ ಅಡಿಕೆ ಸುಲಿಯುತ್ತಿದ್ದ ಮನೆಗಳ ಅಡಿಕೆ ಸುಲಿಯುವವರಿಲ್ಲದೇ ಬಾಕಿಯಾಗಿದೆ. ಕೆಲಸಗಾರರಿಗೆ ಯಾವ ಪರಿ ತತ್ವಾರವೆಂದರೆ ಕೆಲವರಂತೂ ಕಳೆದ ವರ್ಷ ಅಡಿಕೆ ಸುಲಿಯಲು ಜನ ಸಿಕ್ಕದೇ ಆ ಅಡಿಕೆಯನ್ನು ಈ ವರ್ಷ ಸುಲಿಯಲು ಜನರನ್ನು ಹೊಂದಿಸಿಕೊಳ್ಳುವಷ್ಟರಲ್ಲೇ ಸುಸ್ತಾಗಿದ್ದಾರೆ. ದೂರದ ಸುಬ್ರಮಣ್ಯಕ್ಕೆ ರಾಯಿಯಿಂದ ಅಡಿಕೆ ಸುಲಿಯಲು ಜನ ಹೋಗಲು ಕಾರಣ ಸಹ ಕೆಲಸಗಾರರ ಕೊರತೆಯೇ. ಅಡಿಕೆ ಸುಲಿಯಲು, ಅಡಿಕೆ ತೆಗೆಯಲು ಗೊತ್ತಿರುವುದು ಸಹ ತುಂಬಾ ಕಡಿಮೆ ಮಂದಿಗೇನೇ. ಅವರೆಲ್ಲಾ ಹೆಚ್ಚು ಕಡಿಮೆ ಹತ್ತು ವರ್ಷದಿಂದ ಅದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. </span><br />
<br />
<span style="font-size: small;">ಅವರನ್ನು ಬಿಟ್ಟರೆ ಯುವಕರಲ್ಲಿ ಬಹುತೇಕರು ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಡಿಕೆ ಸಂಬಂಧಿ ವೃತ್ತಿಗಿಂತ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಆಕರ್ಷಕವಾದ ಸ್ವಲ್ಪ ಅಧಿಕ ಸಂಬಳವನ್ನು ಕೊಡುವ ಕೆಲಸಗಳು ಹಲವಾರು ಕಣ್ಣೆದುರಿಗಿವೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡುವ ಜರೂರತ್ತಿಲ್ಲ. ಟಿಪ್ಟಾಪಾಗಿ ಡ್ರೆಸ್ ಮಾಡಿಕೊಂಡು ಬಸ್ ಹತ್ತಿದರಾಯಿತು. ಹೇಗೆ ಅಡಿಕೆ ಕೃಷಿಕರು ತಮ್ಮ ಮಕ್ಕಳಿಗೆ ತೋಟದ ಉಸಾಬರಿ ಬೇಡ, ಚೆನ್ನಾಗಿ ಓದಿ ಕೆಲಸ ಹಿಡಿಯಲಿ ಎಂದು ಆಶಿಸುತ್ತಿದ್ದಾರೋ ಅದೇ ರೀತಿಯ ಆಸೆ ಕೆಲಸಗಾರರ ಕುಟುಂಬಗಳಲ್ಲೂ ಹೆಚ್ಚಾಗಿ ಕಾಣುತ್ತಿದೆ. ಜಾಗತೀಕರಣದಿಂದಾಗಿ ಮೊಬೈಲ್ ಮೂಲಕ ಹಳ್ಳಿಗಳಲ್ಲೂ ಸಾಧ್ಯವಾದ ಸಂಪರ್ಕ ಕ್ರಾಂತಿ, ಎರಡು ಸಾವಿರದ ಆಸುಪಾಸಿನಲ್ಲಿ ಸಿಗುವ ಡಿಟಿಹೆಚ್, ಕಡಿಮೆ ದರದಲ್ಲಿ ಕೈಗಟಕುವ ಎಲೆಕ್ಟ್ರಾನಿಕ್ ಉಪಕರಣಗಳು, ಡಿಸ್ಕೌಂಟಿನಲ್ಲಿ ಸಿಗುವ ಥರವೇಹಾರಿ ಬಟ್ಟೆಗಳು ಇತ್ಯಾದಿಗಳು ಸೇರಿ ಕೆಲಸಗಾರ ಕುಟುಂಬಗಳಿಗೆ ಮೊದಲಿಗಿಂತ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕರಿಸಿವೆ. ಇದೆಲ್ಲದರಿಂದಾಗಿ ಅಡಿಕೆ ಸುಲಿಯುವ, ತೋಟದ ಕೆಲಸಗಾರನಿಗೆ ಮಗ ತನಗಿಂತ ಅರೆಪಾವು ನೆಮ್ಮದಿಯ ಕೆಲಸ ಮಾಡಲಿ ಎನ್ನುವ ಆಸೆ ಇರುತ್ತದೆ. ಹಾಗಿದ್ದಾಗ ಮಗ ಗ್ಯಾರೇಜಿನಲ್ಲಿ ಕೆಲಸಕ್ಕೆ ಹೋದರೂ ಮುಪ್ಪಾದ ಅಪ್ಪನಿಗೆ ಸಂತೋಷವೇ. ಫ್ಯಾಶನೆಬಲ್ </span><span style="font-size: small;"> ಆಗಿ, ಕಂಫರ್ಟ್ ಜೋನ್ ನಲ್ಲಿ </span><span style="font-size: small;">ಬದುಕುವುದು ಒಂದು ಕಾಲದಲ್ಲಿ ಮೇಲ್ವರ್ಗಕ್ಕೆ ಮಾತ್ರ ಸೀಮೀತವಾಗಿತ್ತು. ನಂತರ ಮಧ್ಯಮ ವರ್ಗಕ್ಕೆ ಬಂತು. ಇತ್ತೀಚೆಗಂತೂ ಅದು ದಕ್ಷಿಣ ಕನ್ನಡದ ಕೆಳ ಮಧ್ಯಮ ಹಾಗೂ ದುಡಿಯುವ ವರ್ಗದಲ್ಲಿ ಢಾಳಾಗಿ ಕಾಣಿಸುತ್ತಿದೆ.<br />
<br />
ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದಂತೂ ಕನಸಿನ ಮಾತೇ. ಹಟ್ಟಿಯ ಗೊಬ್ಬರ ಹೊರುವ ಕೆಲಸ ಅಂದ್ರೆ ಸಾಕು ಕೆಲಸಕ್ಕೆ ಬರುವವರೂ ದಿಢೀರ್ ಕಣ್ಮರೆಯಾಗುತ್ತಾರೆ. ಒಂದು ವೇಳೆ ನಿಮ್ಮ ಮನೆಗೆ ಖಾಯಮ್ಮಾಗಿ ಕೆಲಸಕ್ಕೆ ಬರುವವರು ತಪ್ಪಿಸಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗಿ ಮೆತ್ತಗೆ ಅಸಮಾಧಾನ ಹೊರಹಾಕಿದಿರೋ ನಿಮ್ಮ ಕತೆ ಮುಗಿದಂತೆಯೇ. ಅವರೆಲ್ಲಾ ಶಾಶ್ವತವಾಗಿ ನಿಮ್ಮ ತೋಟದ ಕಡೆ ಮುಖವೇ ಹಾಕುವುದಿಲ್ಲ. ಅವರಿಗಂತೂ ಕೆಲಸಕ್ಕೆ ಕರಿಯುವವರ ಕ್ಯೂ ಇದೆ. ಅಲ್ಲಿಗೆ ನಿಮ್ಮ ತೋಟದ ಕೆಲಸ ಪಡ್ಚಾ. ನೀವೂ ಪಡ್ಚಾ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಅಡಿಕೆ ತೋಟ ಹೊಂದಿರುವವರು ಕೆಲಸಗಾರರ ಜೊತೆ ವ್ಯವಹರಿಸುವಾಗ, ಮಾತನಾಡುವಾಗ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ. </span><br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><span style="font-size: small;">ಮಾತಿನಲ್ಲಿ ಕೃತಿಯಲ್ಲಿ ಯಡವಟ್ಟಾದರೆ ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಯಾವ ದೇವರೂ, ದೈವವೂ ಕಾಪಾಡುವುದಿಲ್ಲ. ಈಗಿರುವ ಕೆಲಸಗಾರರ ಕೊರತೆ, ಅವರಿಗಾಗಿ ಕಾದುಕುಳಿತುಕೊಳ್ಳುವ ಉಸಾಬರಿ ತಪ್ಪಿಸಲು ಪಡ್ರೆ ಸಮೀಪದ ಸಮಾನ ಪಂಗಡದ ಅದೇ ಊರಿನ ಕೆಲವು ಅಡಿಕೆ ತೋಟದವರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಂತೆ ಪಡ್ರೆಯ ಈ ಗುಂಪು ಕೆಲಸ ಮಾಡುತ್ತದೆ. ವಾರದಲ್ಲಿ ಒಂದೋ ಎರಡೋ ದಿನ ಆ ಗುಂಪಿನಲ್ಲಿರುವವರ ಮನೆಯಲ್ಲಿ ಕೆಲಸ ಮಾಡುವುದು. ಆ ಗುಂಪಿನಲ್ಲಿರುವ ಯಾರೇ ಕರೆದರೂ ಅವರಲ್ಲಿ ತೋಟದ ಕೆಲಸಕ್ಕೆ ಹೋಗಬೇಕು. ಅವರವರೇ ಗೊಬ್ಬರ ಹೊರುವುದರಿಂದ ಹಿಡಿದು ಅಡಿಕೆ ಕೊಯ್ಯುವವರೆಗೆ ಕೆಲಸ ಮಾಡುತ್ತಾರೆ. ಅಡಿಕೆ ಸುಲಿಯುತ್ತಾರೆ, ಮಳೆ ಸೂಚನೆ ಸಿಕ್ಕರೆ ಸಾಕು ಅಡಿಕೆ ರಾಶಿ ಮಾಡಲು ಓಡಿಬರುತ್ತಾರೆ. ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಇಲ್ಲ. ಆವತ್ತು ಕೆಲಸ ಮಾಡಿದ್ದಕ್ಕೆ ಅಲ್ಲೊಂದು ಗಡದ್ದು ಹಬ್ಬದ ಊಟ. ಹೀಗೆ ನಮ್ಮ ನಮ್ಮ ತೋಟದ ಕೆಲಸಗಳನ್ನು ನಾವೇ ಮಾಡಿದರೆ ಮಾತ್ರ ಊಟಕ್ಕುಂಟಷ್ಟೇ ಎನ್ನುವಲ್ಲಿಗೆ ಸಮಸ್ಯೆ ಬಂದು ನಿಂತಿದೆ.<br />
<br />
ಕೆಲಸದವರನ್ನು ನಂಬಿಕೊಂಡು ಕೃಷಿ ಮಾಡುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕೆ ಬೆಂಕಿ ಬಿದ್ದು ಕಾಲವಾಗಿದೆ. ಈಗಿರುವುದಂತೂ ಆದೇ ಆತ್ಮವಿಶ್ವಾಸದ ಬೂದಿ. ಅದನ್ನು ತೋಟದ ಮಾಲೀಕರೇ ಅಡಿಕೆ ಮರದ ಬುಡಕ್ಕೆ ಹಾಕಿದರೆ ಸ್ವಲ್ಪ ಹೆಚ್ಚು ದಿನ ಅಡಿಕೆ ಮರ ಬದುಕಬಹುದು. ಆದರೆ ಅದಕ್ಕೆ ತಕ್ಕ ಫಲ ನೀಡುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ! ಅಡಿಕೆ ಕೃಷಿ ನಮ್ಮ ಕಾಲಕ್ಕಾಯಿತು ಎಂದು ಹಿರಿಯರು ಸ್ವಗತದಲ್ಲಿ ಮಾತಾಡಲು ಶುರುಮಾಡಿ ವರ್ಷಗಳೇ ಕಳೆದಿವೆ. ಆದರೂ ಆ ಹಿರಿ ಜೀವಗಳು ಪ್ರತೀ ವರ್ಷದ ಬಜೆಟ್ ನೋಡುವುದನ್ನು ಬಿಟ್ಟಿಲ್ಲ. ಅಲ್ಲೇನಾದರೂ ಪರ್ಯಾಯ ಕೃಷಿಗೆ ಉಪಯುಕ್ತವಾಗುವಂತಹ ಸವಲತ್ತುಗಳಿವೆಯಾ ಎಂದು ತಡಕಾಡುತ್ತಾ "ಎಂತ ಕರ್ಮ. ಎಲ್ಲಾ ಪಕ್ಷಗಳೂ ಒಂದೇ. ಎಲ್ಲರದ್ದೂ ಕಣ್ಣೊರೆಸುವ ತಂತ್ರ" ಎನ್ನುತ್ತಾ ಉಸಿರೆಳೆದುಕೊಳ್ಳುತ್ತಾರೆ. <br />
<br />
ಗೋಪಾಲಕೃಷ್ಣ ಕುಂಟಿನಿ ಅವರ "ದೀಪದ ಕೆಳಗೆ ಕತ್ತಲು" ಎನ್ನುವ ಕತೆಯಲ್ಲಿ ಸಂಕಪ್ಪಯ್ಯ ಎನ್ನುವ ಪಾತ್ರವೊಂದು ಬರುತ್ತದೆ. ಸಂಕಪ್ಪಯ್ಯ ಕಷ್ಟಪಟ್ಟು ಮಾಡಿದ ತೋಟ ಹೊಸದಾಗಿ ನಿರ್ಮಿಸಲ್ಪಡುವ </span><span style="font-size: small;">ಅಣೆಕಟ್ಟಿನಿಂದಾಗಿ ಮುಳುಗುವ ಹಂತಕ್ಕೆ ಬಂದಿರುತ್ತದೆ. ಅದ್ದರಿಂದ ಊರು ಬಿಡುವ ಮೊದಲು ಸಂಕಪ್ಪಯ್ಯನ ಮಗ ತೋಟದ ಅಡಿಕೆ ಮರಗಳನ್ನು ಕಡಿಯಲು ಫೀಟಿಗೆ ಇಂತಿಷ್ಟು ಎಂದು ಕಂಟ್ರ್ಯಾಕ್ಟು ಕೊಡುತ್ತಾನೆ. ಇದನ್ನೆಲ್ಲಾ ಈಜಿ ಚೇರಿನ ಮೇಲೆ ಕುಳಿತು ವೃದ್ಧ ಸಂಕಪ್ಪಯ್ಯ ಕೇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕೆಲವು ಕಡೆ ಅಡಿಕೆ ಮರ ಕಡಿದು ರಬ್ಬರು ಹಾಕುತ್ತಿದ್ದಾರೆ. </span><br />
<span style="font-size: small;"><br />
ಸಂಕಪ್ಪಯ್ಯನಂತಹ ವೃದ್ಧರು ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ಈಜಿ ಚೇರಿನಲ್ಲಿ ಒಂಟಿಯಾಗಿ ಕುಳಿತಿದ್ದಾರೆ. ಅವರ ಕಣ್ಣ ಮುಂದೆ ಅವರೇ ಬೆಳೆಸಿದ ತೋಟ ಮೌನದಿಂದಿದೆ.</span><br />
<span style="font-size: small;"><br />
</span><br />
<span style="font-size: small;"><b>ಚಿತ್ರ ಕೃಪೆ: <a href="http://www.flickr.com/photos/maheshkumble/">ಮಹೇಶ್ ಪಿ ಕುಂಬ್ಳೆ</a> </b></span> <br />
<script id="avg_inject_popup" src="chrome://searchshield/content/avgls-inline.js" type="text/javascript">
</script><style type="text/css">
#avg_ls_inline_popup { position:absolute; z-index:9999; padding: 0px 0px; margin-left: 0px; margin-top: 0px; width: 240px; overflow: hidden; word-wrap: break-word; color: black; font-size: 10px; text-align: left; line-height: 13px;}
</style><br />
<span style="font-size: small;"> </span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com10tag:blogger.com,1999:blog-4290647614806416638.post-88525079632676325542010-03-24T18:23:00.006+05:302010-03-26T17:08:31.001+05:30ನಗರದ ನಿಟ್ಟುಸಿರುಗಳ ನಡುವೆ ಒಂದು ಸಂಜೆ<span style="font-size:130%;">ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...<br />ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ ಆಫೀಸಿನ ಕ್ಯಾಬುಗಳನ್ನು ಏರುವವರಿಗೆ ಹುಣ್ಣಿಮೆಯಿದ್ದರೂ, ಅಮಾವಾಸ್ಯೆ ಇದ್ದರೂ ತಲೆಕೆಡಿಸಿಕೊಳ್ಳುವ ಉಮೇದಿಲ್ಲ. ನಿದ್ದೆ ಕಣ್ಣಲ್ಲಿ ಕರಗುವುದಷ್ಟೇ ಗೊತ್ತು. ಕ್ಯಾಬಿನ ಕಿಟಕಿಯಿಂದ ಹೊರಕ್ಕೆ ಇಣುಕಿ ನೋಡುತ್ತಾ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆಸ್ಥೆಯಿಲ್ಲ. ಪ್ರತೀ ನೂರು ಮೀಟರಿಗೆ ಒಂದಕ್ಕೊಂದು ಅಪ್ಪಿಕೊಂಡಂತೆ ಇರುವ ನಿಯಾನು ದೀಪ, ಟ್ಯೂಬ್ಲೈಟುಗಳ ಮಧ್ಯೆ ನಗರದಲ್ಲಿರುವ ಚಂದ್ರ ಡೆಡ್ ಇನ್ವೆಸ್ಟ್ಮೆಂಟ್. ಅನಗತ್ಯ <span>ಎನರ್ಜಿ</span> </span><span style="font-size:130%;"> ವೇಸ್ಟು....ಸುಮ್ಮನೆ ಮಧ್ಯಾಹ್ನಗಳಲ್ಲಿ <span>ಕಾರ್ಪೋರೇಷನ್ನಿನ</span> </span><span style="font-size:130%;"> ಆಫ್ ಮಾಡದ ಲೈಟುಗಳಂತೆ ಬೆಳಗುತ್ತಿರುವವ ಎನ್ನುವ ಭಾವನೆಯೇ ಆತನ ಬಗ್ಗೆ....<br /><br />ಸದ್ಯಕ್ಕೆ ನಮಗೆಲ್ಲಾ ಚಂದ್ರನಿಲ್ಲದ ರಾತ್ರಿ, ನಿರ್ಜನ, ಏಕಾಂತ ಪ್ರದೇಶಗಳಲ್ಲಿ ಹುಟ್ಟುವ ಚಡಪಡಿಕೆ, ಕಾತರವನ್ನು ನಗರ ಉಳಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಚಂದ್ರ ನಗರಗಳಲ್ಲಿ ಅಪ್ರಸ್ತುತ. ಆತನ ಗೈರು ಹಾಜರಿಯೂ ನಮಗೆಲ್ಲಾ ಒಪ್ಪಿತವಾಗುವ ವಿಷಯವೇ.<br /><br />ನಮ್ಮ ನಗರದ <span>ಅಪಾರ್ಟ್ಮೆಂಟಿನ</span> </span><span style="font-size:130%;"> ಬಾಲ್ಕನಿ, ಮನೆಯ ಮಹಡಿಗಳಿಂದ ಕಾಣಲು ಹೊರಡುವ ಚಂದ್ರನಿಗೆ ಬೆಳಕಿನ ಸರಪಳಿ. ಯಾಕೆಂದರೆ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ. ನಿತ್ಯದ ಸುಸ್ಥಿತಿಗೆ ನಮಗೆಲ್ಲಾ ಬೆಳಗಿನ <span>ಸೂರ್ಯೋದಯ</span> </span><span style="font-size:130%;"> ಬೇಕು. ಟ್ರಾಫಿಕ್ಕು ಜಾಮು ಬೇಕು. ಜೊತೆಗೆ ಉಪಹಾರ <span>ದರ್ಶಿನಿಯ</span> </span><span style="font-size:130%;"> ಬೈಟೂ ಕಾಫಿ. ಅಭ್ಯಾಸವಿದ್ದರೆ ಸೇದಲು ಚೋಟುದ್ದದ ಸಿಗರೇಟು. ಏಕಾಂತದ ರಾತ್ರಿ, ನಿಶ್ಯಬ್ದವಾಗಿರುವ ಸಂಜೆ, ರಾತ್ರಿ ಯಾರಿಗೂ ಬೇಡ. ಬೆಳಕಿಗೆ ಇರುವ ಅಗಾಧ <span>ಮಾರ್ಕೆಟ್ಟು</span> </span><span style="font-size:130%;"> ಕತ್ತೆಲೆಗಿಲ್ಲ. ಬೆಳಕು ಇವತ್ತು ಬೆರಗಲ್ಲವೋ ಅಣ್ಣಾ...ಅದು ಕೇವಲ ಬೆಸ್ಕಾಂನ ಮಧ್ಯೆ ಮಧ್ಯೆ ಬಂದು ಹೋಗುವ ಲೋಡ್ಶೆಡ್ಡಿಂಗು, ಪವರ್ಕಟ್ಟು.<br /><br />ರಾತ್ರಿಯಾಯಿತೆಂದರೆ ಸಾಕು ಜಗತ್ತಿಗೆ ನಿದ್ದೆಯ ನಾಟಕ. ಹೇಳಿಕೊಳ್ಳಲು ಆಯಾಸದ ಸಬೂಬು. ಚಳಿಗೆ ನಡೆಯುತ್ತಾ, ಒಂಟಿಯಾಗಿ ರಾತ್ರಿಗಳಲ್ಲಿ ಸುಮ್ಮನೆ ಕೂತುಕೊಳ್ಳಿ ಅಂತ ನೀವು ಹೇಳಿದರೆ ಹೇಗೆ ಸ್ವಾಮಿ ಎಂದು ದಬಾಯಿಸಲು ಸಾವಿರ ನಾಲಿಗೆಗಳಿವೆ. ನಮ್ಮದೇನಿದ್ದರೂ ಗಂಟೆಗೆ 24 ಡಾಲರು ದುಡಿಯುವವರ ದಂಡು. ತಪ್ಪದೇ ರಾತ್ರೆ ಇಡೀ ಕಂಪ್ಯೂಟರ್ ಮುಂದೆ ಸೈನ್ ಇನ್ ಆಗಿದ್ದರೆ ಮಾತ್ರ ಕೆಲಸ, ಆಕರ್ಷಕ ಸಂಬಳ ಉಳಿಯುತ್ತದೆ. ಅಷ್ಟರಮಟ್ಟಿಗೆ ರಾತ್ರಿ, ಕೊನೇ ಕ್ಷಣದ ಆಕ್ಸಿಜನ್ ಇದ್ದಂತೆ ಇವತ್ತಿನ ಆಧುನಿಕ ಜಗತ್ತಿಗೆ. ರಾತ್ರಿಯ ತಂಪು, ತಂಗಾಳಿ ಎನ್ನುವುದೆಲ್ಲಾ ಕವಿಗಳ ಗಿಮಿಕ್ಕು ಎನ್ನುವ ಅಸಡ್ಡೆ. ನಗರದ ರಾತ್ರಿಗಳಲ್ಲಿ ಹೆಚ್ಚೆಂದರೆ ಜೀವಭಯ, ನಡುಕ......ಹೆಚ್ಚೆಂದರೆ ವೀಕೆಂಡುಗಳಲ್ಲಿ ಶಾಪಿಂಗು, ಔಟಿಂಗು ಹೋಗಿ ಹಿಂತಿರುಗುವಾಗ ಆಗುವ ಸ್ಟುಪಿಡ್ ಚಳಿ. ಅದಕ್ಕಾಗಿ ಮೆಗಾ ಮಾಲ್ಗಳಲ್ಲಿ ತೆಗೆದುಕೊಂಡ ಬ್ರ್ಯಾಂಡೆಡ್ <span>ಜರ್ಕಿನ್ನು</span> </span><span style="font-size:130%;">, ಸ್ವೆಟರು ಹಾಕಿಕೊಳ್ಳುತ್ತಾ ಕಟ ಕಟ ಎಂದು ಹಲ್ಲು ಕಡಿಯುವುದು.... ಯಾರಿಗೆ ಬೇಕು ಸ್ವಾಮಿ ರಾತ್ರಿಯ ಉಸಾಬರಿ...ಸಿಗ್ನಲ್ನಲ್ಲಿ ನಿಂತಾಗ ಚಂದ್ರ ಇದ್ದಾನೋ ಇಲ್ಲವೋ ಎಂದು ಆಕಾಶದತ್ತ ತಲೆ ಹಾಕುವ ಉಸಾಬರಿ. ಸಿಗ್ನಲ್ಲಿನ ಕೆಂಪು ದೀಪ ಹಸಿರಿಗೆ ತಿರುಗಿದರೆ ಸಾಕು...ಮನೆ ತಲುಪಿ ಉಸ್ಸಪ್ಪಾ ಎಂದು ಹಾಸಿಗೆಗೆ ಒರಗಿದರೆ ಸಾಕು....ಇಷ್ಟೇ ಸಾಧ್ಯತೆಗಳಿರುವುದು ಬಹುಷಃ ನಗರದ ರಾತ್ರಿಗಳಿಗೆ.<br />******************<br /><br />ಮೌನವಾಗಿರುವ ನಗರ ಯಾರಿಗೂ ಬೇಡ. ಅದಕ್ಕೇ ಮಧ್ಯರಾತ್ರಿ, ತಡರಾತ್ರಿಯವರೆಗೂ ಮೆಸೇಜು ಬಂದು ಬೀಳುತ್ತದೆ ಇನ್ಬಾಕ್ಸಿಗೆ. ಮಾತನಾಡದೇ ಮೌನವಾಗಿರುವಾಗ ದುಡ್ಡು ಹುಟ್ಟಿಸುವುದನ್ನು ಇನ್ನೂ ಅನ್ವೇಶಿಸಿಲ್ಲ ಅಷ್ಟೇ. ಆದ್ದರಿಂದ ನಗರದಲ್ಲಿ ಕೆಲಸ ಸಿಗದವರು, ಕೆಲಸ ಕಳಕೊಂಡವರು ಹೀಗೆ ತಾತ್ಕಾಲಿಕ ನಗರ ತಿರಸ್ಕೃತರು ಮಾತ್ರ ಮೌನಕ್ಕೆ ಒಗ್ಗುವ ಮಂದಿ. ಮೌನದಲ್ಲೇ ಸೋಲನ್ನು <span>ಪರಾಮರ್ಶಿಸುವ</span> </span><span style="font-size:130%;"> ಮಂದಿ....ಒಂದು ವೇಳೆ ಮಧ್ಯರಾತ್ರಿ ಆತ/ ಆಕೆ ಎಚ್ಚರವಿದ್ದಾರೆ ಎಂದಿಟ್ಟುಕೊಳ್ಳಿ. ಒಂದೋ ಆತ ಆಕೆಯೊಂದಿಗೆ ಮಾತನಾಡುತ್ತಿರುತ್ತಾನೆ. ಇಲ್ಲವೇ ಆಕೆ ಆತನೊಂದಿಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರೂ ಮೌನವಾಗಿರುವುದು ಒಬ್ಬರಿಗೊಬ್ಬರು ಕೈಕೊಟ್ಟು ಗುಡ್ಬೈ ಹೇಳಿದಾಗ ಮಾತ್ರ. ಆ ರಾತ್ರಿಗಳಲ್ಲೂ ಚಂದ್ರನಿಗಿಂತ, ಮೌನಕ್ಕಿಂತ ಕಾಫಿ ಡೇಗಳು ಪ್ರತೀ ಭೇಟಿಗಳಲ್ಲಿ ಹುಟ್ಟಿಸಿದ ತೆಳು ಬೆಳಕಿನ ಕುಂಡಗಳು ಹೆಚ್ಚು ಆಪ್ಯಾಯಮಾನವಾಗಿದ್ದು ಕಾಣುತ್ತವೆ ಪರಸ್ಪರರಿಗೆ. ಇದು ನಗರದ ಭಾಷೆ.<br /><br />ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು, ಹಾಸ್ಟೆಲ್ನಲ್ಲಿದ್ದಾಗ ಮಧ್ಯರಾತ್ರಿ ರೂಮು ಬಿಟ್ಟು ನಡೆಯುತ್ತಾ ಹಾಸ್ಟೆಲಿನ ಹಿಂದಿದ್ದ ಬಂಡೆ ಏರಿ ಕುಳಿತದ್ದು ಇವೆಲ್ಲಾ ಸಮಯವಿದ್ದರೆ ಸಂತೋಷವನ್ನಷ್ಟೇ ಕೊಡುತ್ತದೆ ಎನ್ನುವುದು ಗೊತ್ತಾಗಿಬಿಟ್ಟಿದೆ. ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಅಪೇಕ್ಷೆಯೇ ಗೆಲುವಿನ ಮೆಟ್ಟಿಲು ಎನ್ನುತ್ತಾ ಬಡಬಡಿಸುತ್ತಾರೆ ಮ್ಯಾನೇಜ್ಮೆಂಟ್ ಗುರುಗಳು. ಅವರ ಪ್ರಕಾರ ಎಲ್ಲಾ ಕ್ರಿಯೆಗಳಿಗೂ ಒಂದು <span>ನಿರ್ದಿಷ್ಟ</span> </span><span style="font-size:130%;"> ಉತ್ತರವಿರಲೇಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಬೇಕೆಂದೇನೂ ಇಲ್ಲ ಎಂದರೆ ಸಾಕು ಸನಾತನಿಗಳಾಗಿಬಿಡುತ್ತೇವೆ. ಬಳಸಿ ಬಿಸಾಡುವ "ಕಮಾಡಿಟಿ" ನಾವೇ ಆಗಿಬಿಡುತ್ತೇವೆ. ಆದ್ದರಿಂದ ಇಲ್ಲಿ <span>ಮಾರ್ಕೆಟ್</span> </span><span style="font-size:130%;"> ಇಲ್ಲದ ವಸ್ತುಗಳೆಲ್ಲಾ ಉಪಯೋಗಕ್ಕೆ ಬಾರದ ವಸ್ತುಗಳು.<br /><br />ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ಶಬ್ದವೇ ಸದ್ಯಕ್ಕೆ ಕಾಯಕ ವಿರೋಧಿ. ಋಷಿಗಳು ನೂರಾರು ದಿನ ಕುಳಿತು ತಪಸ್ಸು ಮಾಡಿದರು ಎನ್ನುವುದು ನಮಗಿವತ್ತು ಕೇವಲ ಕತೆಯಲ್ಲ....ಅದೊಂದು ಹುಚ್ಚು ಕಲ್ಪನೆಯ ಪರಮಾವಧಿ. ಯಾಕೆಂದರೆ ಮೂರೂವರೆ ನಿಮಿಷದ ಸಿಗ್ನಲ್ಲು ದಾಟಿ ಈಚೆಗೆ ಬರುವಾಗ ಒಂದು ಯುಗವೇ ಕಳೆಯುವಂತಹ ವಾಸ್ತವವಿರುವಾಗ ಹೇಗೆ ನಂಬುವುದು ಹೇಳಿ...ಹೇಳಿ ಕೇಳಿ ನಾವು ವಾಸ್ತವದ ಶಿಶುಗಳು.....ಅದಕ್ಕಿರುವ ಹಲವು ಸಾಧ್ಯತೆಗಳು ಸಹ ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ವಿಚಾರವನ್ನು ಕೆಲಸ ಕದಿಯುವ ಪಟ್ಟಿಗೆ ಸೇರಿಸಿಬಿಟ್ಟಿದೆ. ನಗರದ ಮನೆಗಳಲ್ಲಿದ್ದಾಗ ರಾತ್ರಿ ಹನ್ನೊಂದರ ನಂತರ ಕಪ್ಪು ಆಕಾಶ ನೋಡಲು ಹೊರಕ್ಕಿಣುಕುವ ವಿಚಾರ ಬರುವುದೇ ಕಡಿಮೆ. ಅದರಿಂದೇನು ಉಪಯೋಗ ಮೊದ್ಲು ಹೇಳಿ ಅನ್ನುವುದು ಮೊದಲ ಮತ್ತು ಕೊನೆಯ ಪ್ರಶ್ನೆ. ಕುವೆಂಪು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಕಂಪೌಂಡಿನಲ್ಲಿದ್ದ ಮರದ ಎದುರು <span>ಕುರ್ಚಿ</span> </span><span style="font-size:130%;"> ಹಾಕಿ ಕುಳಿತುಕೊಂಡು ಹಕ್ಕಿಗಳ ಗೂಡನ್ನು ವೀಕ್ಷಿಸುತ್ತಿದ್ದರು ಎನ್ನುವುದು ಕವಿಗಳಿಗೆ ಮಾತ್ರ ಸಾಧ್ಯವಾಗುವ ನಮ್ಮ ಸದ್ಯದ ವಾಸ್ತವ...ತೇಜಸ್ವಿ ಹಕ್ಕಿ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಕಾಯುತ್ತಾ ಕುಳಿತಿರುತ್ತಿದ್ದರು, ಮೀನಿಗೆ ಗಾಳ ಹಾಕುತ್ತಾ ತದೇಕಚಿತ್ತದಿಂದ ಕಾಯುತ್ತಿದ್ದರು ಎನ್ನುವುದು ಮೂಡಿಗೆರೆಯಲ್ಲೋ, ತೀರ್ಥಹಳ್ಳಿಯಲ್ಲೋ, ದಿಡುಪೆಯಲ್ಲೋ ಮಾತ್ರ ಸಾಧ್ಯವಾಗುವ ನಗರದ ವಾಸ್ತವ...ಹೇಗಿದ್ದರೂ ನಮಗಂತೂ ವೀಕೆಂಡಿನ ಒಂದೋ ಎರಡೋ ದಿನಕ್ಕೆ ಆಯಾಸ ಕಳೆಯಲು ನಿದ್ದೆಯಿದೆ, ಉತ್ಸಾಹವಿದ್ದರೆ ವಂಡರ್ ಲಾ, ತಪ್ಪಿದರೆ ಮಲ್ಟಿಪ್ಲೆಕ್ಸಿನಲ್ಲಿ ಸಿನಿಮಾದ ಊಲಾಲಾ...ಇಲ್ಲವೇ ಝಗಮಗಿಸುವ ಮಾಲುಗಳ ಆಫರುಗಳಲ್ಲಿ ಯಾವುದು ಬೆಟರು ಅಂತ ಮಹಡಿ ಮಹಡಿ ಹತ್ತಿ ಜಾಲಾಡುವ ಕ್ರೀಡಾಕೂಟ...!!!<br />******************<br /><br />ಇದೆಲ್ಲವನ್ನೂ ನಿತ್ಯ ನೈಮಿತ್ತಿಕದಂತೆ ಗಮನಿಸುತ್ತಾ ಪ್ರತಿ ಸಂಜೆ ನಿಯಾನು ಬಲ್ಬುಗಳು ಉರಿಯಲು ಶುರುವಾಗುತ್ತವೆ. ಚಂದ್ರನಿದ್ದರೂ ಆ ಕಣ್ಣುಕುಕ್ಕುವ ಬೆಳಕಲ್ಲಿ ಮಬ್ಬು ಮಬ್ಬು. ನಗರದ ಜಗತ್ತಿಗೆ ಚಂದ್ರ ಬಂದರೂ ಹೋದರೂ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಬೆಳಕೂ ಸಹ ಕಂಪ್ಯೂಟರು ಕುಟ್ಟುವಷ್ಟೇ ಯಾಂತ್ರಿಕ, ಸಾರ್ವತ್ರಿಕ.....!!!<br /><br />ಎಲ್ಲರ ಭಾವನಾತ್ಮಕ ನೆಲೆಗಳನ್ನು <span></span>ನಿರ್ಲಿಪ್ತತೆಯ </span><span style="font-size:130%;"><span></span> ಮಗ್ಗುಲಿಗೆ ಹಾಕಿಬಿಡಲು ನಗರದ ಬೆಳಕು ಸಾಕು...ಮೌನವಾಗಿರದ ಪ್ರತಿ ಕ್ಷಣವೂ ಸಾಕು.....ಚಂದ್ರನಿರುವ ನಗರದ ರಾತ್ರಿಯೂ ಸಾಕು.<br /><br />ಅದಕ್ಕೇ ಹೇಳಿದ್ದು-ನಗರದ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ...!!!<br /><br /></span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com11tag:blogger.com,1999:blog-4290647614806416638.post-6964299196525329542010-03-12T08:30:00.002+05:302010-03-12T08:36:47.381+05:30ಸ್ವಗತೋನ್ಮತ್ತ ತಲ್ಲಣಗಳು<span style="font-size:130%;"><span>ಇಲ್ಲಿರುವುದೆಲ್ಲಾ</span> <span>ಬಿಡಿ</span> <span>ಬಿಡಿ</span> <span>ಭಾವನೆಗಳು</span>. <span>ಹತ್ತಾರು</span> <span>ಕ್ಷಣಗಳಲ್ಲಿ</span> <span>ಹೊಳೆದದ್ದು</span>, <span>ಜುಮ್ಮೆನ್ನುವಂತೆ</span> <span>ಮಾಡಿದ್ದು</span>. <span>ಇಲ್ಲಿನ</span> <span>ಪ್ರತೀ</span> <span>ಶಬ್ದ</span>, <span>ಸಾಲು </span><span>ಹಲವಾರು</span> ಅರ್ಥದೊಂದಿಗೆ <span>ಕಾಡಿವೆ</span>. <span>ಬಿಡಿ</span> <span>ಸಾಲುಗಳಲ್ಲಿ</span> <span>ಒಂದಕ್ಕಿಂತ</span> <span>ಹೆಚ್ಚಿನ</span> <span>ಕತೆಗಳಿವೆ</span>. <span>ಹಾಗಂತ</span> <span>ಅನ್ನಿಸಿದೆ</span> <span>ಬರೆದಾದ</span> <span>ಮೇಲೆ</span>. <span>ಹಾಗಲ್ಲ</span> <span>ಅಂತಾನೂ</span> <span>ಅನ್ನಿಸಿದೆ</span>, "<span>ಹಾಗನ್ನಿಸಿದ</span>" <span>ನಂತರದ</span> <span>ಫಳಿಗೆಗೆ</span>. <span>ನಿಮಗೇನು</span> <span>ಅನ್ನಿಸುತ್ತೋ</span>...???<br /><br />-<span>೧</span>-<br /><span>ಹೂ</span><br /><span>ಮುತ್ತಿಟ್ಟರೆ</span><br /><span>ಬಾಡುತ್ತಾಳೆ</span><br /><br /><br />-<span>೨</span>-<br /><span>ನಿನ್ನೆ</span><br /><span>ಕಂಡ</span><br /><span>ಸೂರ್ಯ</span><br /><span>ಇವತ್ತಿಲ್ಲ</span><br /><span>ಹಗಲು</span><br /><br /><br />-<span>೩</span>-<br /><span>ಕುಕ್ಕರಿನ</span><br /><span>ವಿಶಿಲು</span><br /><span>ಜೀವ</span><br /><span>ತೇಗುತ್ತದೆ</span><br /><br /><br />-<span>೪</span>-<br /><span>ಕರಚಿದ</span><br /><span>ಕರಿಬೇವಿನ</span><br /><span>ಎಲೆಗಳಲಿ</span><br /><span>ಒಗ್ಗರಣೆ</span><br /><span>ಹಸಿರು</span><br /><br /><br />-<span>೫</span>-<br /><span>ಅಕ್ಷರ</span><br /><span>ಮೂಡುತ್ತಿದೆ</span><br /><span>ಕಂಪ್ಯೂಟರ್</span><br /><span>ಪರದೆ</span><br /><span>ಇನ್ನೂ</span><br /><span>ಖಾಲಿ</span><br /><br /><br />-<span>೬</span>-<br /><span>ಹಳದಿ</span><br /><span>ರಸೀತಿಯಲಿ</span><br /><span>ಉಳಿದ</span><br /><span>ಲೆಕ್ಕ</span><br /><span>ಅರೆ</span><br /><span>ಚುಕ್ತಾ</span><br /><br /><br />-<span>೭</span>-<br /><span>ಟೆರೇಸಿನಲಿ</span><br /><span>ನಿಂತೆ</span><br /><span>ನಾನು</span><br /><span>ನಗರ</span><br /><span>ಬೆತ್ತಲೆ</span><br /><br /><br />-<span>೮</span>-<br /><span>ನಾನಿದ್ದೇನೆ</span><br /><span>ದೀಪದ</span><br /><span>ಬುಡದಲ್ಲಿ</span><br /><span>ಸತ್ತಿದೆ</span><br /><span>ಹಾತೆ</span></span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com3tag:blogger.com,1999:blog-4290647614806416638.post-78967507172572379862010-02-26T23:31:00.007+05:302010-02-27T09:20:30.926+05:30ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ<span style="font-size:130%;">ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.<br />ಯಾವುದೋ ಮದುವೆ <span>ಸಮಾರಂಭದಲ್ಲಿ</span> ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.<br /><br />ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???<br /><br />ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.<br /><br />ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.<br /><br />ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.<br /><br />ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.<br /><br />ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.<br /><br />ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.<br /><br />ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ <span>ಫಾರ್ಮ್ಯಾಟ್ </span>ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.<br /><br />ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.<br /></span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com16tag:blogger.com,1999:blog-4290647614806416638.post-37577487910106312062010-02-16T01:14:00.009+05:302010-02-16T01:24:25.195+05:30ರಾಧೆಯ ಪ್ರೀತಿಯ ಕೃಷ್ಣನೂ ಜೊತೆಗೊಂದಿಷ್ಟು ಪ್ರಶ್ನೆಗಳೂ...<span style="font-size:130%;">ಕೊಳಲ ತೊರೆದು ಹೋದ-ರಾಧೇ</span><br /><span style="font-size:130%;">ಮುರಳೀಧರ ಗೋಪಾಲಕೃಷ್ಣ</span><br /><span style="font-size:130%;">ಎಲ್ಲಿ ಇದ್ದೆಯೇ</span><br /><span style="font-size:130%;">ಎತ್ತ ಪೋದೆಯೇ</span><br /><span style="font-size:130%;">ಸಮಯದಿ ಕೃಷ್ಣನ ತಡೆಯದೇ ರಾಧೇ</span><br /><br /><span style="font-size:130%;">ಎಂದು ದುಃಖಿಸುತ್ತಾ ನುಡಿಯುತ್ತಾರೆ ಸಖಿಯರು. ಕುಸಿದು ಕುಳಿತುಕೊಳ್ಳುತ್ತಾಳೆ ರಾಧೆ. ಕೃಷ್ಣನ ಈಗಿನ ಸುದೀರ್ಘ ಪಯಣ ತನ್ನನ್ನು ಆತನೊಂದಿಗೆ ಒಂದುಗೂಡಿಸುವುದಿಲ್ಲ ಎನ್ನುವುದು ರಾಧೆಗೆ ಬಹುಷಃ ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಳಲ ತೊರೆದು ಹೋದ ರಾಧಾ ಮಾಧವ ಆಕೆಯಲ್ಲೊಂದು ವಿಷಾದ ವಾಸ್ತವಗಳನ್ನು ಸೃಷ್ಟಿಸುತ್ತಾನೆ. ಕೃಷ್ಣ ಯಾಕೆ ರಾಧೆಯ ಅನುಪಸ್ಥಿತಿಯಲ್ಲಿ ಆಕೆಯನ್ನು ತೊರೆದು, ಆಕೆಗೆ ಯಾವುದೇ ಸೂಚನೆಗಳನ್ನು, ಸಮಾಧಾನಗಳನ್ನು ನೀಡದೇ ಹೊರಟ. ಅಕ್ರೂರ ಬಂದು "ಬನ್ನಿ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವಾ" ಎನ್ನುವಾಗ ರಾಧೆ ಕೃಷ್ಣನ ಎದುರಿದ್ದರೆ ಆತ ಅಕ್ರೂರನ ಆಹ್ವಾನವನ್ನು ತಿರಸ್ಕರಿಸುತ್ತಿದ್ದನೇ? ಪ್ರೀತಿಯ ಎದುರು ಆಹ್ವಾನ ಕರ್ತವ್ಯವಾಗಿ ಬದಲಾಗುವುದು ತಪ್ಪುತ್ತಿತ್ತೇ?<br /><br />ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ರಾಧೆಯ ಉಪಸ್ಥಿತಿ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ. ಮಗುವಿನಂತೆ ನಲಿಯುವುದನ್ನು ಕಲಿಸುತ್ತದೆ. ಸಡಗರ, ಸಂಭ್ರಮದ ವಾಸ್ತವದಲ್ಲಿ ಬದುಕುತ್ತಾ ಇರುವಂತೆ ಮಾಡುತ್ತದೆ.ನಿತ್ಯದಲ್ಲಿ ಆಕೆ ಕಾಣದೇ ಹೋದರೆ ಆತನಿಗೆ ಅದೆಂತಹುದೋ ಚಡಪಡಿಕೆ. ತನ್ನೊಳಗೆ ತುಂಬಿಕೊಂಡ ರಾಧೆಯ ಬಿಂಬ ಸ್ಪಷ್ಟ-ಅಸ್ಪಷ್ಟಗಳ ಅಲುಗಿನ ಮೇಲೆ ತೂಗುತ್ತಿರಬೇಕಾದರೆ ಕೃಷ್ಣನಿಗೆ ರಾಧೆಯನ್ನು ಭೇಟಿಯಾಗಿ ಕಣ್ತುಂಬಿಕೊಳ್ಳಬೇಕು. ಆ ಭೇಟಿಯಲ್ಲೇ ಕಳೆದು ಹೋಗಬೇಕು.<br /><br />ಸಖಿರಿಗೆಲ್ಲ ಕೃಷ್ಣ ದೇವರಾಗಿ ಕಾಣುತ್ತಾನೆ. ಅವನ ದೈವತ್ವ ಕಾಣುತ್ತದೆ. ಆದರೆ ರಾಧೆಗೆ ಆತ ಕೇವಲ ಪ್ರೇಮಿ. ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಗೆಳೆಯ. ಸಾದಾ ಸೀದಾ ನಮ್ಮಂತೆಯೇ ಇರುವ ಮನುಷ್ಯ. ಆದ್ದರಿಂದ ಆಕೆಗೆ ಕೃಷ್ಣನಲ್ಲಿರುವ ದೈವತ್ವ ಮುಖ್ಯವಾಗುವುದಿಲ್ಲ. ಆತ ಮುಖ್ಯವಾಗುತ್ತಾನೆ. ಆತನೊಳಗಿರುವ ಪ್ರೇಮಿ ಮುಖ್ಯವಾಗುತ್ತಾನೆ. ಅದೇ ಕಾರಣಕ್ಕೆ ಆಕೆಗೆ ಆತನ ಪಿಸುದನಿ ರೋಮಾಂಚನವನ್ನುಂಟು ಮಾಡುತ್ತದೆ. ಆತನಿಲ್ಲದೆ ವಾಸ್ತವ ವಿರಹವಾಗುತ್ತದೆ.<br /><br />**************************************<br />ಮಾತೆತ್ತಿದರೆ ರಾಮ ದೈವತ್ವಕ್ಕಿಂತ ಹೆಚ್ಚು ಮಾನವೀಯ ವ್ಯಕ್ತಿತ್ವ ಎನ್ನುತ್ತೇವೆ. ಕೃಷ್ಣನಿಗೆ ಹೆಚ್ಚು ದೈವತ್ವದ ಅಂಶಗಳನ್ನು ಆರೋಪಿಸುತ್ತೇವೆ. ಕಪಟ ನಾಟಕ ಸೂತ್ರಧಾರಿ ಎಂದು ಲೇಬಲ್ ಅಂಟಿಸಿಬಿಡುತ್ತೇವೆ. ರಾಧೆಯ ವಿರಹ ದೊಡ್ಡದು ಎಂದು ಮರುಗುತ್ತೇವೆ, ಕೊಂಡಾಡುತ್ತೇವೆ. ಆದರೆ ರಾಧೆಯನ್ನು ಬಿಟ್ಟು ಮಧುರೆಯ ದಾರಿ ಹಿಡಿದ ಕೃಷ್ಣನ ಒಳಗಿನ ನೋವುಗಳನ್ನು ನಾವೆಂದಾದರೂ ಆಲೋಚಿಸಿದ್ದೇವೆಯೇ? ರಾಧೆಗಾಗಿ ತನ್ನ ಕೊಳಲನ್ನೇನೋ ಬಿಟ್ಟ. ಆತನ ಒಳಗೆ ಹುಟ್ಟಿಕೊಂಡ ರಾಧೆಯ ವಿರಹದ ಕಣ್ಣೀರನ್ನು ಯಾವಾಗ ಒರೆಸಿಕೊಂಡ? ಅದೆಷ್ಟು ನಿಟ್ಟುಸಿರುಗಳಿತ್ತೋ ಎನೋ ಅವನಲ್ಲಿ......ಆ ನೋವುಗಳನ್ನು ಆತ ರಾಮನಂತೆ ಎಲ್ಲೂ ಪ್ರದರ್ಶನಕ್ಕಿಡುವುದಿಲ್ಲ. ಅಥವಾ ಆತನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ನೋವನ್ನು ಏಕಾಂತದ ಹಾಡನ್ನಾಗಿ ಮಾಡಿಕೊಳ್ಳುತ್ತಾನೆ, ತನಗೆ ಮಾತ್ರ ಕೇಳಿಸಿಕೊಳ್ಳುವಂತೆ. ಪಾಂಡವರಿಗೆ ಬೇಕಾದವನಾಗುತ್ತಾ, ದೇವರಾಗುತ್ತಾ, ಕೌರವರಲ್ಲಿ ಅಸಹನೆ, ಭಯ ಎರಡನ್ನೂ ಹುಟ್ಟಿಸುತ್ತಾ ತನ್ನ ಖಾಸಗಿ ಮಾತುಗಳನ್ನು, ಮೌನವನ್ನು ಪ್ರೇಮಿಯಾಗಿ ಆತ ತನ್ನಲ್ಲೇ ಬಚ್ಚಿಡುತ್ತಾನೆ. ಅವನ ಅಕ್ಕ ಪಕ್ಕದಲ್ಲಿರುವ ಬಲರಾಮ, ಪಾಂಡವರು, ಕೌರವರು ಇವರ್ಯಾರಿಗೂ ಅದು ಮುಖ್ಯವಲ್ಲ.....ಕೆಲವೊಂದು ವಿಷಯಗಳು ಜಗತ್ತಿಗೆ ಅಮುಖ್ಯವಾಗುವ ಮೂಲಕವೇ ಏಕಾಂತಕ್ಕೆ ಹತ್ತಿರವಾಗುತ್ತವೆ ಎನ್ನುವುದರಲ್ಲಿ ಕೃಷ್ಣನ ವಿರಹದ ಪ್ರಕ್ರಿಯೆ ಇದೆ.<br /><br />ಕೃಷ್ಣನೀಗ ಹೋಗಲೇಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೊಂದು ವೇದಿಕೆ ಸಿದ್ಧ ಮಾಡಬೇಕಿದೆ. ಆತನಿಗೆ ಗೊತ್ತು. ಕೊಳಲು ಜೊತೆಗಿದ್ದರೆ ನೆನಪುಗಳ ಮೆರವಣಿಗೆ ಒತ್ತರಿಸಿಕೊಂಡು ಬರುತ್ತದೆ. ರಾಧೆಯೊಳಗೆ ಕಳೆದು ಹೋಗುತ್ತೇನೆ. ಅದಕ್ಕೇ ಆತ "ಹೊಳಲಿಗೆ ಕೊಳಲಿದು ತರವಲ್ಲ/ ಮಧುರೆಗೆ ಸವಿ ಸಲ್ಲ" ಎನ್ನುತ್ತಾ ತಾನು ಬಿಸುಟಿದ ವೃಂದಾವನದೊಳಗಿರುವ ಕೊಳಲನ್ನು ದಿಟ್ಟಿಸುತ್ತಾ ದೂರವಾಗುತ್ತಾನೆ."ಪೋಗದಿರಯ್ಯ ಪೋಗದಿರೈ ಮಾರಸುಂದರ/ ಗಿರಿಧರ ನೀ ಪೋಗದಿರಯ್ಯ" ಎನ್ನುವ ಗೋಪಿಕೆಯರ ವಿನಂತಿ, ಬಿನ್ನಹ ಎಲ್ಲವೂ ಅಕ್ರೂರ, ಬಲರಾಮರ ಜೊತೆಗೆ ಹೊರಟವನಿಗೆ ಕೇಳದೇ ಹೋಯಿತೇಕೇ? ಅಥವಾ ಕೇಳಿಯೂ ಕೇಳಿಸದಂತೆ ನಟಿಸಿದನೇ ಆತ. "ಪೋಗದಿರಯ್ಯಾ" ಎನ್ನುವ ಮಾತು ರಾಧೆಯ ಬಾಯಿಂದ ಹೊರಬಂದಿದ್ದರೆ ಕೃಷ್ಣ ಗೋಕುಲದಿಂದ ನಿರ್ಗಮಿಸದೇ ಉಳಿಯುತ್ತಿದ್ದನೇ? ಪಾಂಚಜನ್ಯ ಹಿಡಿಯುವ ಪ್ರಸಂಗ ಬರುತ್ತಿರಲಿಲ್ಲವೇ? ಅರ್ಜುನನಿಗೆ ವಿಶ್ವರೂಪ ದರ್ಶನದ ಅವಕಾಶ, ಮಾರ್ಗದರ್ಶನ ದಕ್ಕದೇ ಹೋಗುತ್ತಿತ್ತೇನೋ.<br /><br />"ಎನ್ನೀ ಕೊಳಲಿದು ಕಾಡಿನ ಬಿದಿರು/ ಈ ಹುಲುಕಡ್ಡಿಗೆ ಎನಿತೋ ಚದುರು!" ಎಂದು ಪ್ರೀತಿಯಿಂದ ಪ್ರತೀ ಬಾರಿ ಕೊಳಲಿನ ಮೈದಡವಿ ಹರ್ಷಗೊಂಡಿದ್ದ ಕೃಷ್ಣನಿಗೇ ಸದ್ಯಕ್ಕೆ ಕೊಳಲು ಬೇಡ. ಕೊಳಲು ಹುಟ್ಟಿಸುವ ನೆನಪುಗಳು ಬೇಡ. ನೆನಪುಗಳ ಮೂಲಕ ತೆರೆದುಕೊಳ್ಳುವ ಬೃಂದಾವನವೂ ಬೇಡ. ಹಾಗಿದ್ದರೆ ಕೃಷ್ಣನಿಗೆ ರಾಧೆಯ ನೆನಪೂ ಬೇಡವಾಯಿತೇ?<br /><br />"ಪೋ ರಾಧೆ ಬೇಗ ಪೋ ರಾಧೆ" ಎಂದು ಸಖಿಯರು ಅವಸರಿಸಿದರೂ ರಾಧೆಗೆ ಬಿಟ್ಟು ಹೋದ ಸಖನ ಬೆನ್ನತ್ತುವುದು ಬೇಕಿಲ್ಲ. ಆತನ ಪಯಣ ನಿಲ್ಲಿಸಿ ಗೋಗರೆದು ಕರೆ ತರಬೇಕೆನ್ನುವ ಬಯಕೆಯಿಲ್ಲ. " ಹಾ ತೊರೆದನೇ-ಕೊಳಲ ತೊರೆದನೇ" ಎನ್ನುವಲ್ಲಿ ಆಕೆಗೆ ಕೃಷ್ಣ ತನ್ನ ಸರ್ವಸ್ವವೇ ಆದ ಕೊಳಲನ್ನೂ, ತನ್ನನ್ನೂ ಬಿಟ್ಟುಹೋದ ದುಃಖವಿದೆ. ಅದರಿಂದ ಹೊರ ಹೊಮ್ಮದ ತನ್ನ-ಆತನ ಪ್ರೇಮದ ಉಸಿರಿನ ವೇದನೆಯ ಆತಂಕ ಅರ್ಥವಾದಂತಿದೆ. ಕೃಷ್ಣನಿಲ್ಲದ ರಾಧೆ ಪೂರ್ಣವಲ್ಲ ಎನ್ನುವ ಸತ್ಯ ಕೃಷ್ಣನಿಗೂ ಗೊತ್ತಿದೆ. ಅದಕ್ಕವನು ಕೊಳಲನ್ನೂ ಬಿಟ್ಟು ನಡೆದಿದ್ದಾನೆ. ಕೊಳಲೇ ಕೃಷ್ಣನಾಗುತ್ತಾ, ಕೃಷ್ಣನ ಜೊತೆ ನಲಿನಲಿದ, ಅಪ್ಪುಗೆಯಲಿ ಪರವಶವಾದ ದಿನಗಳನ್ನು ನೆನಪಿಸುತ್ತಾ ಕೃಷ್ಣನಂತೆಯೇ ರಾಧೆಯ ಬೊಗಸೆ ತುಂಬಿಕೊಳ್ಳುತ್ತದೆ. ರಾಧೆಯನ್ನೂ, ಕೊಳಲನ್ನೂ ಬಿಟ್ಟು ನಡೆದಿರುವುದರಿಂದ ಕೃಷ್ಣನೆಂಬ ನಿಷ್ಕಲ್ಮಶ ಪ್ರೇಮಿಯೂ ಒಂಟಿಯಾಗಿದ್ದಾನೆ. ಅಪೂರ್ಣವಾಗಿಯೇ ಉಳಿದುಕೊಳ್ಳುತ್ತಾನೆ. ಹಾಗೆ ಉಳಿದುಕೊಳ್ಳುವುದರಲ್ಲೇ ಆತನಿಗೆ ಹೆಚ್ಚು ಸುಖವಿದ್ದಂತೆ ತೋರುತ್ತದೆ. ಇಲ್ಲಿ ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ಪ್ರೀತಿ ದೊಡ್ಡದೇ ಅಥವಾ ಕೊಳಲನ್ನು ಬಿಟ್ಟು ಹೋಗುವ ಮೂಲಕ ರಾಧೆಗೆ ಸಮಾಧಾನ ಹೇಳಲು ಹೊರಟ ಕೃಷ್ಣನ ಪ್ರೀತಿಯ ಕಾಳಜಿ ಹೆಚ್ಚೇ?<br /><br />ಆತ ಬಿಟ್ಟು ಹೋದ ಕೊಳಲೊಳಗಿರುವ ಆತನ ಉಸಿರಿನ ಬೆಚ್ಚನೆಯನ್ನು ತುಟಿಯ ಪ್ರಾಣರಸದಿಂದ ಹೀರುತ್ತಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ. ಕೊಳಲ ತೊರೆದು ಹೋದ ಎಂದು ಗೊತ್ತಾದ ಮರುಕ್ಷಣದಲ್ಲೇ ಆಕೆಯಲ್ಲಿ ಉಳಿಯುವುದು ಖಚಿತವಾಗಿ ಎರಡು ಪ್ರಶ್ನೆಗಳು<br /><br />ನೆನೆದನೇ...ಎನ್ನ ನೆನೆದನೇ<br />ಮರಳನೇ....ಇನ್ನು ಮರಳನೇ<br /><br />ಈ ಪ್ರಶ್ನೆಗಳಿಗೆ ಎರಡು ರೀತಿಯ ಉತ್ತರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ...ಅದೆಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರುವುದಕ್ಕೂ ಅವಕಾಶವಿದೆ. ಅದಕ್ಕೇ ಇರಬೇಕು ರಾಧೆಗೆ ಸುದೀರ್ಘ ಮೌನವೂ ಪ್ರೀತಿಯಂತಹ ಸಹಜ ಭಾವ ಎಂದೆನಿಸುತ್ತದೆ.<br /><br />ಯಾಕೆಂದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಅಂತಿಮವಲ್ಲ ಎನ್ನುವುದು ರಾಧೆಗೂ ಗೊತ್ತಿದೆ...!!</span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com5tag:blogger.com,1999:blog-4290647614806416638.post-83201240005951369502010-01-19T15:27:00.004+05:302010-01-19T15:35:50.294+05:30ಕನಸುಗಳಿಗಿದು ಕಾಲವಲ್ಲ<strong><span style="font-size:130%;">ಪದವಿಯ ದ್ವಿತೀಯ ವರ್ಷದಲ್ಲಿದ್ದಾಗ ಬರೆದ ಕವಿತೆಯಿದು.</span><br /><span style="font-size:130%;"></span></strong><br /><span style="font-size:130%;">ಕನಸುಗಳಿಗಿದು</span><br /><span style="font-size:130%;">ಕಾಲವಲ್ಲ</span><br /><span style="font-size:130%;"></span><br /><span style="font-size:130%;">ಕಾಮನಬಿಲ್ಲು ಕ್ಷಿತಿಜದಲಿ</span><br /><span style="font-size:130%;">ಮಿನುಗಿದ್ದು ನೆನಪಿಲ್ಲ</span><br /><span style="font-size:130%;">ರಾತ್ರಿಯ ನಕ್ಷತ್ರಗಳು</span><br /><span style="font-size:130%;">ಸ್ಪಾಟ್ಲೈಟುಗಳಾಗಿ ಬಿಟ್ಟಿವೆ</span><br /><span style="font-size:130%;">ಸೂರ್ಯ ಬಚ್ಚಲು ಕಾಯಿಸುತ್ತಾನೆ </span><br /><span style="font-size:130%;">ಬಿದಿಗೆ ಚಂದ್ರಮನ </span><br /><span style="font-size:130%;">ಬೆಳಕಿನ ಊಟಕ್ಕೆ</span><br /><span style="font-size:130%;">60 ವ್ಯಾಟಿನ ಬಲ್ಬು ಬಿಡುವುದಿಲ್ಲ</span><br /><span style="font-size:130%;">ಬಾಲ್ಕನಿಯ ಮೌನ</span><br /><span style="font-size:130%;">ಟ್ರಾಫಿಕ್ಕು ಸದ್ದಿಗೆ ಸುಸ್ತಾಗಿ ಮಲಗಿದೆ</span><br /><span style="font-size:130%;">ಗೋಡೆಯ ಮೇಲಿನ</span><br /><span style="font-size:130%;">ಪ್ಲಾಸ್ಟಿಕ್ ಹೂವು ಬಾಡುತ್ತದೆ</span><br /><span style="font-size:130%;">ಎನ್ನುವ ಭರವಸೆಯಿಲ್ಲ</span><br /><span style="font-size:130%;">ಕನ್ನಡಿಯ ಮುಖ</span><br /><span style="font-size:130%;">ನಗುವುದನ್ನು ನಾ ನೋಡಿಲ್ಲ</span><br /><span style="font-size:130%;">ಒಂಟಿಯಾಗಿ</span><br /><span style="font-size:130%;">ನಡೆಯಬೇಕು ಅಂತ ಅನಿಸುವುದಿಲ್ಲ</span><br /><span style="font-size:130%;">ಸಿಗರೇಟಿನ ಕಿಡಿ</span><br /><span style="font-size:130%;">ತುಟಿ ಸುಟ್ಟರೂ ಚೀರಬೇಕೆನಿಸುವುದಿಲ್ಲ</span><br /><span style="font-size:130%;">ರಾತ್ರಿ ಕಂಡ ಕನಸು</span><br /><span style="font-size:130%;">ಇವತ್ತು ಬೆಳಿಗ್ಗೆ ನೆನಪಿಗೇ ಬರುವುದಿಲ್ಲ</span><br /><span style="font-size:130%;"></span><br /><span style="font-size:130%;">ಈಗಂತೂ ಖಾತ್ರಿಯಾಗಿದೆ</span><br /><span style="font-size:130%;">ಕನಸುಗಳಿಗಿದು</span><br /><span style="font-size:130%;">ಕಾಲವಲ್ಲ! </span><br /><span style="font-size:130%;"></span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com8tag:blogger.com,1999:blog-4290647614806416638.post-68359084829503234252009-12-07T08:44:00.012+05:302009-12-07T09:14:57.942+05:30ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ - ಚಿಟ್ಟೆಯಂತೆ ಹಾರುತ್ತಿದೆಯಷ್ಟೇ<span style="font-size:130%;">"ಚಿಟ್ಟೆ" ಗ್ರೀಟಿಂಗ್ ಕಾರ್ಡ್ಸ್ ಯಾರಿಗೆ ಗೊತ್ತಿಲ್ಲ ಹೇಳಿ.</span><br /><br /><span style="font-size:130%;">ಹೂ ಭಾಷೆಯ, ಮುದ ನೀಡುವ, ಸೆಳೆಯುವ ಸಾಲುಗಳ ಅಕ್ಷರ ಮಾಲೆ "ಚಿಟ್ಟೆ" ಕನ್ನಡ ಶುಭಾಶಯ ಪತ್ರಗಳು. ಅದಕ್ಕಾಗಿ ನಾನು ಬರೆದ ಪುಟ್ಟ ಬರಹದ ಗುಚ್ಚ, ಆಕರ್ಷಕವಾಗಿ ವಿನ್ಯಾಸಗೊಂಡು ಮಾರುಕಟ್ಟೆಯಲ್ಲಿದೆ. ಆ ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ. ಇದು ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ --ಒಬ್ಬೊಬ್ಬರಿಗೆ ಒಂದೊಂದು ತರಹ..!!! </span><br /><span style="font-size:130%;"><br />ನೀ ಬಿಟ್ಟು ಹೋದ ಆ ರಾತ್ರಿ<br />ಗಿಜಿಗುಡುವ ಫುಟ್ಪಾತು </span><br /><span style="font-size:130%;">ಖಾಲಿ, ಖಾಲಿ<br /><br />ನಡೆದಷ್ಟು ಮುಗಿಯದ </span><br /><span style="font-size:130%;">ನೋವು<br />ಮಂಜು ಮಂಜು ಕಣ್ಣುಗಳು<br /><br />ಭಾವನೆಗಳೆಲ್ಲಾ </span><br /><span style="font-size:130%;">ಮೋಡವಾಗಿತ್ತೇನೋ<br />ಜಡಿ ಮಳೆ<br /><br />ಅದರಲ್ಲಿ ತೋಯ್ದರೂ<br />ನನ್ನೊಳಗಿನ ನಿನ್ನ ಚಿತ್ರ ಒದ್ದೆಯಾಗಲಿಲ್ಲ<br />ಮಾಸಲಿಲ್ಲ<br /><br />ಮರೆಯಲು ಯತ್ನಿಸಿದಷ್ಟು<br />ಕರ್ಪೂರದ ಹಾಗೆ<br />ನನ್ನೊಳಗೆ ಸುಡುತ್ತಿದ್ದೀಯಾ<br /><br />ನನ್ನೊಳಗಿನ ಗುಬ್ಬಚ್ಚಿ ನೋವು<br />ಹಾಗೆಯೇ ಇರಲಿ<br />ಅದನ್ನೂ ಕಿತ್ತುಕೊಳ್ಳಬೇಡ ಪ್ಲೀಸ್<br /><br />ನನಗದು ಬದುಕಲು ಕಲಿಸಿದೆ</span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com5tag:blogger.com,1999:blog-4290647614806416638.post-9054275501791592372009-12-01T17:58:00.007+05:302009-12-01T19:39:41.858+05:30ಬಾಲ್ಕನಿಯಲ್ಲೊಂದು ಶವ (ಪುಟಾಣಿ ಕತೆ-12)<span style="font-size:130%;">ಢಂ.... ಎನ್ನುವ ಶಬ್ದ ನಿಶ್ಯಬ್ದವನ್ನು ಸೀಳಿತು. </span><br /><span style="font-size:130%;">ಹಸಿ ಗೋಡೆ ಕುಸಿದು ಬಿದ್ದಂತೆ ಬಿದ್ದುಕೊಂಡ ಫುಟ್ಪಾತಿನಲ್ಲಿ ನಡೆಯುತ್ತಿದ್ದ ವ್ಯಕ್ತಿ.<br /><br />ಆಗ ಬೆಳಿಗ್ಗೆ 1 ಗಂಟೆ. ಥಟ್ಟನೆ ಎಚ್ಚರವಾಯಿತು ಪ್ರದ್ಯುಮ್ನನಿಗೆ. ಆ ಘಟನೆ ಕನಸೋ, ನನಸೋ ಎಂದು ಅರೆಕ್ಷಣ ಗೊತ್ತಾಗಲಿಲ್ಲ ಆತನಿಗೆ. ಕನಸಿರಬಹುದು ಎನ್ನುವ ಅನುಮಾನ. ಅಲ್ಲ, ಖಂಡಿತಾ ಅದು ವಾಸ್ತವವೇ ಅಂದುಕೊಂಡ. ಸಿರಗೇಟು ಹಚ್ಚಿದ. ಹಿತವಾಯಿತು. ಬಾಲ್ಕನಿಯ ಬಾಗಿಲು ತೆರೆದ. ಆ ಬೆಳಿಗ್ಗೆ 1 ಗಂಟೆ ಏಳೂವರೆ ನಿಮಿಷಕ್ಕೆ ಪ್ರದ್ಯುಮ್ನನ ಅಪಾರ್ಟ್ಮೆಂಟಿನ ಆ ಹದಿಮೂರನೇ ಫ್ಲ್ಯಾಟಿನ ಬಾಗಿಲು ಕಿರ್ರಂತ ತೆರೆದುಕೊಂಡಿತು. ಬಾಲ್ಕನಿಯಲ್ಲಿ ನಿಂತುಕೊಂಡ. ನಿನ್ನೆ ರಾತ್ರಿ ಒಂಭತ್ತು ಗಂಟೆಗೆ ಬಂದ ಮಳೆಗೆ ತುಂಬಿಕೊಂಡ ಕೊಚ್ಚೆ ಕಾಣುತ್ತಿತ್ತು. ಅದರ ಮುಂದೊಂದು ಫುಟ್ಪಾತಿತ್ತು. ಅಲ್ಲೇ ಬಿದ್ದುಕೊಂಡಿತ್ತು ಅನಾಮಿಕ ವ್ಯಕ್ತಿಯ ದೇಹ. ಪ್ರಾಣವಿತ್ತೇನೋ...ಆಗಾಗ ಮಿಸುಕಾಡುತ್ತಿತ್ತು. ತನಗೆ ಕೆಲವಾರು ನಿಮಿಷಗಳ ಹಿಂದೆ ಕೇಳಿದ ಶಬ್ದ ಬಹುಷಃ ಈ ವ್ಯಕ್ತಿಗೆ ತಗುಲಿದ ಗುಂಡೇ ಎನ್ನುವ ಅನುಮಾನಗಳು ಶುರುವಾಯಿತು ಪ್ರದ್ಯುಮ್ನನಿಗೆ. ಇಷ್ಟಕ್ಕೂ ಆತ ಸತ್ತುಬಿದ್ದಿದ್ದನಾ ಅಥವಾ ಕುಡಿದು ಬಿದ್ದಿದ್ದಾನಾ? ಕುಡಿದು ಬಿದ್ದಿದ್ದರೆ ಮಧ್ಯರಾತ್ರಿ ಸುರಿದ ಮಳೆಗೆ ಎಲ್ಲವೂ ಕರಗಿ ಹೋಗಿ ಯಥಾ ಸ್ಥಿತಿಗೆ ಬರುತ್ತಿದ್ದ. ಇದು ಕೊಲೆಯೇ ಸರಿ ಎಂಬ ತೀರ್ಮಾನಕ್ಕೆ ಬಂದ ಆತ.<br /><br />ತಾನು ಕಣ್ಣಾರೆ ಕಂಡ ಮೊದಲ ಸಾವು. ಒಂದರೆಕ್ಷಣ ಭಯವಾಯಿತು. ಮತ್ತೆರಡು ಕ್ಷಣದಲ್ಲಿ ಮೈಯೆಲ್ಲಾ ರೋಮಾಂಚನ. ತದೇಕಚಿತ್ತದಿಂದ ಅಲ್ಲಿ ಬಿದ್ದುಕೊಂಡ ವ್ಯಕ್ತಿಯನ್ನು ಮತ್ತೊಮ್ಮೆ ಗಮನಿಸುತ್ತಿದ್ದ ಪ್ರದ್ಯುಮ್ನನ ತುಟಿ ಸುಡುವಂತಾಯಿತು. ಸಿಗರೇಟು ಅದಾಗಲೇ ಉರಿದು ಹೋಗಿತ್ತು. ಏನ್ಮಾಡೋದೀಗ ಎಂದು ಆಲೋಚಿಸಿದ. ಏನೇನೂ ಹೊಳೆಯಲಿಲ್ಲ ಆತನಿಗೆ. ಎರಡೂವರೆ ದಿನದಿಂದ ಹಗಲೂ ರಾತ್ರಿ ಸೋನಿ ಕಂಪೆನಿಯ ಪ್ರಾಜೆಕ್ಟಿನ ತೊಂದರೆಯಿಂದಾಗಿ ಅದರ ಕ್ಲೈಂಟ್ ಮ್ಯಾಥ್ಯೂ ಜೊತೆ ಈಮೇಲು, ಮೀಟಿಂಗು, ಟೆಲಿ ಕಾನ್ಫರೆನ್ಸುಗಳಲ್ಲಿ ಸುಸ್ತಾಗಿದ್ದರಿಂದ ನಿದ್ದೆ ಎಳೆಯಿತು. ಹೋಗಿ ಬಿದ್ದುಕೊಂಡ ಬೆಡ್ ಮೇಲೆ.<br /><br />ಬೆಳಿಗ್ಗೆ ಎದ್ದಾಗ ಗಂಟೆ ಹನ್ನೆರಡು. ಸ್ನಾನಕ್ಕೆ ಬೈರಾಸು ತೆಗೆದುಕೊಳ್ಳಲು ಬಾಲ್ಕನಿಗೆ ಬಂದಾಗ ಆ ಫುಟ್ಪಾತಿನಲ್ಲಿ ಬೋರಲು ಬಿದ್ದ ವ್ಯಕ್ತಿ ಇರಲಿಲ್ಲ. ಆ ವ್ಯಕ್ತಿ ಬಿದ್ದ ಜಾಗದಲ್ಲಿ ಬಿಳಿ ಬಣ್ಣದ ಚಾಕಿನಿಂದ ಮಾರ್ಕು ಮಾಡಿದ್ದರು. ಅಲ್ಲಿದ್ದ ಚಿತ್ರ ವ್ಯಕ್ತಿಯೊಬ್ಬ ಬೋರಲು ಬಿದ್ದಂತೆ ಕಾಣುತ್ತಿತ್ತು.<br /><br />ಮರುಕ್ಷಣವೇ ಆ ವ್ಯಕ್ತಿಯ ಹೆಣ ಕಣ್ಣ ಮುಂದೆ ನೇತಾಡುತ್ತಿತ್ತು...ಪ್ರದ್ಯುಮ್ನ ಬಾಲ್ಕನಿಯಲ್ಲೇ ಕುಸಿದು ಕುಳಿತ..</span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com5tag:blogger.com,1999:blog-4290647614806416638.post-50848251761695409502009-10-12T23:54:00.005+05:302009-10-13T00:02:32.779+05:30ಸಬ್ಕೋ ಸನ್ಮತಿ ದೇ ಭಗವಾನ್(ಕತೆ)<span style="font-size:130%;"><span style="font-size:100%;"><span style="font-weight: bold;font-size:85%;" >(ಕಳೆದ ಫೆಬ್ರವರಿಯಲ್ಲಿ ಬರೆದ ಕತೆಯಿದು...ಕತೆ ಎನ್ನುವುದಕ್ಕಿಂತ ಇದು ನನ್ನ ಸುತ್ತಲಿನ ಪರಿಸರದ ಸ್ವಗತವೆಂದರೆ ತಪ್ಪಾಗಲಾರದು)</span><br /></span><br /><span style="font-weight: bold; color: rgb(102, 51, 255);font-size:180%;" >"ನಾ</span>ನಿನ್ನು ದೇವರ ಪೂಜೆ ಮಾಡಬಾರದು"- ಹಾಗಂತ ಅಂದುಕೊಂಡರು ಗೋವಿಂದ ಭಟ್ಟರು.<br /><br />ಅವರದ್ದು ಹತ್ತು ಖಂಡಿ ಅಡಿಕೆಯ ಮನೆತನ. ಜೊತೆಗೆ ಪರಂಪರಾಗತವಾಗಿ ಬಂದ ದೇವರಪೂಜೆ. ನಾಗ, ಸಾಲಿಗ್ರಾಮ, ಭೂತ, ಆಶ್ವತ್ಥ ಎಲ್ಲದಕ್ಕೂ ಅವರ ಅಪ್ಪ, ಅಜ್ಜ ಪೂಜೆ ಮಾಡಿಕೊಂಡು ಬಂದಿದ್ದರು. ಪ್ರತಿದಿನ ಒಂದು ಕಾಯಿ ಗಣ ಹೋಮ ನಡೆಯುತ್ತಿತ್ತು. ಚಿಕ್ಕಂದಿನಲ್ಲೇ ಮನೆಗೋಸ್ಕರ ಓದು ಅರ್ಧಕ್ಕೆ ಬಿಟ್ಟ ಗೋವಿಂದ ಭಟ್ಟರಿಗೆ ಆಸ್ತಿ ಜೊತೆ ಬಳುವಳಿಯಾಗಿ ಬಂದಿದ್ದೇ ದೇವರ ಪೂಜೆ.<br /><br />ಅವರಿಗೆ ಹತ್ತು ವರ್ಷವಿದ್ದಾಗಲೇ ಪೂಜೆ ಮಾಡುವ ಕಾರ್ಯಕ್ರಮ ಶುರು ಮಾಡಿದ್ದರು. ಎಡಕೈಯಲ್ಲಿ ಸ್ಟೀಲಿನ ಬಾಲ್ದಿ, ಅದರಲ್ಲಿ ಹಳದಿ, ಬಿಳಿ ಹೂವು. ಬಾಲ್ದಿಯ ಒಂದು ಬದಿಯಲ್ಲಿ ಅರೆದು ತೆಗೆದ ಗಂಧ, ಜೊತೆಗೆ ಅರಶಿನ. ಮತ್ತೊಂದು ಕೈಯಲ್ಲಿ ಅರ್ಧ ಲೋಟೆ ದನದ ಹಾಲು. ಇಷ್ಟನ್ನು ಹಿಡಿದುಕೊಂಡು ಬೆಳಿಗ್ಗೆ ಏಳರ ಹೊತ್ತಿಗೆ ಸಂಧ್ಯಾವಂದನೆ ಮಾಡಿ ಕೆಂಪು ಮಡಿ ಉಟ್ಟುಕೊಂಡು ಹಟ್ಟಿ ದಾಟಿ, ಪಾಪಿನ ಪಾಚಿಯ ಮೇಲೆ ಜಾರದಂತೆ ನಡೆಯುತ್ತಾ, ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಬುಡ ಬಿಡಿಸಿದ ಅಡಿಕೆ ಮರಗಳ ಮಧ್ಯೆ ಬಿಳಿ ಹಾಳೆಗಳಲ್ಲಿ ನಿಂತ ನೀರು, ಬೆಳೆಯುತ್ತಿರುವ ಸೊಳ್ಳೆಗಳನ್ನು ಗಮನಿಸುತ್ತಾ ನಾಗನ ಕಟ್ಟೆ ತಲುಪುವುದೆಂದರೇನೇ ಬಾಲಕ ಗೋವಿಂದ ಭಟ್ಟರಿಗೆ ಅದೆಂತಹುದೋ ಹುರುಪು.<br /><br />ತನ್ನ ಪುಟ್ಟ ಕೈಗಳಿಂದ ನಿನ್ನೆ ತಾನೇ ನಾಗನ ಹೆಡೆಯ ಮೇಲೆ ಅಲಂಕಾರ ಮಾಡಿದ ಹೂವುಗಳನ್ನು ತೆಗೆದು, ಅಲ್ಲೇ ಪಕ್ಕದ ಕೆರೆಯಿಂದ ನೀರು ತಂದು, ಹೆಡೆಗೆ ಅಂಟಿಕೊಂಡಿದ್ದ ನಿನ್ನೆಯ ಗಂಧವನ್ನು ತೊಳೆದು ಹೆಡೆಯ ಮೇಲೆ ಹಾಲು ಹೊಯ್ಯುತ್ತಿದ್ದರು. ಪಕ್ಕನೆ ಅದೇ ಖಾಲಿಯಾದ ಲೋಟೆಯನ್ನು ನಾಗನ ಹೆಡೆಯ ಕೆಳಗೆ ಹಿಡಿದು ಅಭಿಷೇಕವಾದ ಹಾಲನ್ನು ತೀರ್ಥರೂಪದಲ್ಲಿ ಹಿಡಿಯಲು ಹರಸಾಹಸ ಪಡುತ್ತಿದ್ದರು. ನಂತರ ನೀರು ಹಾಕಿ ಹೆಡೆ ಸ್ವಚ್ಛ ಮಾಡಿ, ಅರಶಿನ ಮಿಶ್ರಿತ ಗಂಧವನ್ನು ಹೆಡೆಗೆ ಪೂರ್ತಿ ಹಚ್ಚುತ್ತಿದ್ದರು. ತಲೆಯ ಮೇಲೆ ಹಳದಿ ಶಂಖಪುಷ್ಪ ಇಟ್ಟು, ಬಾಳೆಹಣ್ಣು ನೈವೇದ್ಯ ಮಾಡುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ", "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಎಂಟ್ಹತ್ತು ಸರ್ತಿ ಹೇಳುವಾಗ ಪೂಜೆ ಮುಗಿಯುತ್ತಿತ್ತು. ಅರಶಿನ ಮಿಶ್ರಿತ ನಾಗನನ್ನು ನೋಡಿದಾಗ ಕುಕ್ಕೇ ಸುಬ್ರಹ್ಮಣ್ಯದ ಗರ್ಭಗುಡಿಯಲ್ಲಿ ಕಂಡ ನಾಗ ದೇವರು ನೆನಪಾಗುತ್ತಿದ್ದರು. ತೋಟಕ್ಕೆ ಸಂಜೆ ಕಾಕನ ಜೊತೆ ಹೋಗುವಾಗ ಅಪರೂಪಕ್ಕೊಮ್ಮೆ ನಾಗರಹಾವು ಸರಸರ ಹಾದುಹೋಗುವಾಗ "ನಾಗರಹಾವು" ಎಂದು ಉದ್ಗಾರ ತೆಗೆಯುತ್ತಾ ಮತ್ತೆ ಪಟಕ್ಕನೆ ನಾಲಿಗೆ ಕಚ್ಚಿ " ಒಳ್ಳೇ ಹಾವು" ಎಂದು ಹೇಳುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಬಡಬಡಿಸುತ್ತಿದ್ದರು ಬಾಲಕ ಗೋವಿಂದ ಭಟ್ಟರು.<br /><br />ಎಂಟನೇ ವಯಸ್ಸಿಗೇ ಗೋವಿಂದ ಭಟ್ಟರಿಗೆ ಉಪನಯನ ಮಾಡಿದ್ದರಿಂದ ಇದೆಲ್ಲಾ ಪ್ರಾರಂಭವಾಗಿತ್ತು. ಹತ್ತರಿಂದ ಹದಿನೈದು ವರ್ಷದೊಳಗೆ ಕಾಕನ ಜೊತೆ ಕೂತು ದೇವರ ಪೂಜೆ ಮಾಡಿಕೊಳ್ಳುವುದು ಹೇಗೆ, ನೈವೇದ್ಯಕ್ಕೆ ತುಳಸಿ ಎಷ್ಟು ಹಾಕಬೇಕು, ಎಲ್ಲೆಲ್ಲಿ ಯಾವಾಗ್ಯಾವಾಗ ಆಚಮನ್ಯ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನೆಲ್ಲಾ ಮನದಟ್ಟು ಮಾಡಿಕೊಂಡರು.<br /><br />ಹತ್ತನೇ ಕ್ಲಾಸು ತಲುಪುವ ಹೊತ್ತಿಗೆ ಗಣಹೋಮ ಮಾಡುವ ಉಪದೇಶವೂ ಸಿಕ್ಕಿತು. ಅದೇ ಸಮಯಕ್ಕೆ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಯಾರೂ ದಿಕ್ಕಿಲ್ಲದ್ದರಿಂದ, ಗೋವಿಂದ ಭಟ್ಟರ ಅಮ್ಮನಿಗೂ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದರಿಂದ ತಮ್ಮಂದಿರ, ತಂಗಿಯಂದಿರ ಪ್ರಾಥಮಿಕ ಓದು, ಪ್ರೌಢ ಓದು, ಮದುವೆ, ಹೈಯರ್ ಎಜುಕೇಶನ್ನುಗಳ ಜವಾಬ್ದಾರಿಯೆಲ್ಲ ಗೋವಿಂದ ಭಟ್ಟರ ಹೆಗಲಿಗೇ ಬಿತ್ತು. ಇದೆಲ್ಲದರ ಜೊತೆಗೆ ಪ್ರತಿನಿತ್ಯ ಒಂದೂವರೆ ಗಂಟೆಗಳ ದೇವರ ಪೂಜೆ, ಗಣ ಹೋಮ, ನಾಗನ ಪೂಜೆ, ಶನಿವಾರದ ಅಶ್ವತ್ಥಪೂಜೆ ಚಾಚೂ ತಪ್ಪದೇ ನಡೆಯುತ್ತಿತ್ತು.<br /><br />ತಮ್ಮಂದಿರು ಒಳ್ಳೆಯ ಕೆಲಸ ಹುಡುಕಿಕೊಂಡರು. ತಂಗಿಯಂದಿರಿಗೆ ಮುದ್ದಾದ ಮಕ್ಕಳಾದವು. ಎಲ್ಲರ ಸಂಸಾರ ಸುಖಮಯವಾಗಿದೆ ಎನ್ನುವ ಹೊತ್ತಿಗೆ ಗೋವಿಂದ ಭಟ್ಟರ ಜಗತ್ತಿನೊಳಗೆ ಅಲ್ಲೋಲ ಕಲ್ಲೋಲ ಶುರುವಾಯಿತು.<br /><br />ಈಚೀಚೆಗೆ "ಶುಕ್ಲಾಂಭರದರಂ.... "ಎನ್ನುತ್ತಾ ಶುರು ಮಾಡುತ್ತಿದ್ದ ಶ್ಲೋಕ ಮಧ್ಯದಲ್ಲೆಲ್ಲೋ ತಲುಪುವ ಹೊತ್ತಿಗೆ ಮರೆತು ಹೋಗುತ್ತಿತ್ತು. ಯಾವ ಭಾಗದ ಶ್ಲೋಕವನ್ನು ಮುಂದುವರಿಸಬೇಕೆಂಬ ಗೊಂದಲ ಕಾಡುತ್ತಿತ್ತು. ದಟ್ಟ ಅರಣ್ಯವನ್ನು ಹೊಕ್ಕಿ ಮಧ್ಯೆ ಒಂಟಿಯಾಗಿ ಹೋದ ಅನುಭವವಾಗುತ್ತಿತ್ತು. ಸಾಲಿಗ್ರಾಮಗಳ ನೈಸಾದ ಮೇಲ್ಮೈಯನ್ನು ತೊಳೆದು ಅದಕ್ಕೆ ಹಾಲಿನ ಅಭಿಷೇಕ ಮಾಡಿ ಗಂಧ ಹಚ್ಚಿ ಪೆಟ್ಟಿಗೆಯೊಳಗೆ ಇಡುವಾಗ ರೋಮಾಂಚನವಾಗುತ್ತಿರಲಿಲ್ಲ. ಹಚ್ಚಿ ಬಿಟ್ಟ ಆರತಿಗೂ, ಕರೆಂಟು ಹೋದಾಗ ಹಚ್ಚುವ ಚಿಮಿಣಿ ಎಣ್ಣೆ ದೀಪಕ್ಕೂ ವ್ಯತ್ಯಾಸವೇ ಇಲ್ಲವಲ್ಲ ಅಂತನ್ನಿಸಲು ಶುರುವಾಯಿತು.<br /><br />ತನಗೆ ಕಷ್ಟಗಳು, ಗೊಂದಲಗಳು ಮಾತ್ರ ಜಾಸ್ತಿ ಆದಾಗ ದೇವರ ಮೇಲೆ ಪ್ರೀತಿ ಉಕ್ಕುತ್ತದೆ. ಉಳಿದ ಸಂದರ್ಭಗಳಲ್ಲಿ ದೇವರು, ದೇವರ ಪೂಜೆ ಬಾಲ್ಯದಲ್ಲಿ ಹುಟ್ಟುಹಾಕುತ್ತಿದ್ದ ಮುಗ್ಧ ಪ್ರೀತಿ, ತನ್ಮಯತೆ, ಖುಷಿ ಈಗ ಸಿಗುತ್ತಿಲ್ಲ ಎನಿಸಲು ಶುರುವಾಯಿತು. ತನ್ನ ತಮ್ಮ ರಾಮಚಂದ್ರನ ಮಗ ಅಕ್ಷಯ ಬೆಂಗ್ಳೂರಲ್ಲಿ ಬೆಳಿಗ್ಗೆ ಎದ್ದು ಕಂಪ್ಯೂಟರು ಕುಟ್ಟುತ್ತಾನಲ್ಲ, ಪ್ರತೀ ದಿನವೂ ತನ್ನದೂ ಸಹ ಹಾಗೇ ತಾನೇ ಅಂದುಕೊಂಡರು. ತನ್ನದು ಹಾಗಿರುವ ಬದುಕಲ್ಲ ಎಂದು ಗಟ್ಟಿ ನಿರ್ಧಾರ ಮಾಡಿಕೊಳ್ಳಲು ಅವರಿಗೆ ಯಾವುದೇ ಉತ್ತರಗಳು ಸಿಗಲಿಲ್ಲ.<br /><br />ತಾತ ಮಾಡಿದ್ದಕ್ಕೆ ಅಪ್ಪ ಪೂಜೆ ಮಾಡಿದರು. ಅವರು ಮಾಡಿದರು ಅನ್ನೋ ಕಾರಣಕ್ಕೆ ತಾನೂ ಮಾಡಿದೆ. ಹಾಗಾದರೆ ಯಾರೂ ತಮಗೋಸ್ಕರ ಪೂಜೆ ಮಾಡಲಿಲ್ಲವೇ? ಮಾಡಬೇಕು ಅನಿವಾರ್ಯ ಅನ್ನೋದೇ ಎಲ್ಲರಿಗೂ ಮುಖ್ಯವಾಗಿತ್ತು ಎನ್ನುವ ವಿಷಯಕ್ಕೆ ಅವರಿಗೆ ಸಾವಿರ ಕಾರಣಗಳು ಹೊಳೆದವು.<br /><br />ಪೂಜೆಗೆ ಕುಳಿತಾಗ ದೇವರಂತಹ ದೇವರು ಕಾಣುತ್ತಾನೆಯೇ ಹೊರತು ತನಗೆ ತಾನು ಕಾಣುವುದಿಲ್ಲವಲ್ಲ ಎನ್ನುವ ವಿಷಯ ಅವರನ್ನು ಗಾಢವಾಗಿ ಕಾಡತೊಡಗಿತು.<br /><br />ಮರುದಿನ ಬೆಳಿಗ್ಗೆ ರಾಮಚಂದ್ರರ ಹೆಂಡತಿ ಸುಶೀಲಮ್ಮ ಸ್ನಾನ ಮಾಡಿ ದೇವರ ಕೋಣೆಗೆ ನಮಸ್ಕಾರ ಮಾಡಲು ಹೊರಟಾಗ ಸಾಲಿಗ್ರಾಮಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು, ಸ್ವಾಮಿಗಳು ಕೊಟ್ಟ ಶ್ರೀ ಚಕ್ರ,, ದಾಸವಾಳದ ಹೂವು ಹರಿವಾಣದಿಂದ ಕೆಳಕ್ಕೆ ಬಿದ್ದಿದ್ದವು.<br /><br />ಮಂಟಪದ ಮೇಲೆ ಪದ್ಮಾಸನ ಹಾಕಿ ಗೋವಿಂದ ಭಟ್ಟರು ಕುಳಿತಿದ್ದರು!!!<br /><br /></span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com9tag:blogger.com,1999:blog-4290647614806416638.post-82638510752291235652009-09-30T08:36:00.016+05:302009-10-15T09:05:16.700+05:30ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjPsM8DxBhSlEJZLJuq-4oitd0K7sE6lEylAdFgq3RT5gSCN9ApIBb4R5x1wjWMMMUe_e71HWTiRfQLva1-UXBJQOoFHt_7tl116LP6zIdwwalX0ZDKBvAbkKoojgMyFug8SBcK471NMrQQ/s1600-h/manasare1.jpg"><img style="margin: 0px auto 10px; display: block; text-align: center; cursor: pointer; width: 240px; height: 161px;" src="https://blogger.googleusercontent.com/img/b/R29vZ2xl/AVvXsEjPsM8DxBhSlEJZLJuq-4oitd0K7sE6lEylAdFgq3RT5gSCN9ApIBb4R5x1wjWMMMUe_e71HWTiRfQLva1-UXBJQOoFHt_7tl116LP6zIdwwalX0ZDKBvAbkKoojgMyFug8SBcK471NMrQQ/s400/manasare1.jpg" alt="" id="BLOGGER_PHOTO_ID_5387098741919266258" border="0" /></a><span style="font-size:130%;"><span style="color: rgb(51, 102, 255);font-size:180%;" ><span style="font-weight: bold;">ಹೊ</span></span>ರಗಿರುವ ಜಗತ್ತಿಗಿಂತ ಜೈಲಿನ ಒಳಗಿರುವ ಜಗತ್ತೇ ಉಲ್ಲಾಸದಾಯಕವಾಗಿದೆ ಅಂತನ್ನಿಸುತ್ತದೆ ಆತನಿಗೆ.<br /></span><br /><span style="font-size:130%;">ಸದ್ಯಕ್ಕಿರುವ ಜಗತ್ತಿನ ವೇಗಕ್ಕೆ ತನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ</span><span style="font-size:130%;"> ಎನ್ನುವ ಮನವರಿಕೆಯ ನಡುವೆ ತಾನು ಜೈಲಿನಿಂದ ಹೊರಬಂದು ಕಳೆದುಕೊಂಡಿರುವ ಸ್ವಾತಂತ್ರ್ಯದ ಮನವರಿ</span><span style="font-size:130%;">ಕೆಯಾಗುತ್ತದೆ. ಜೀವಮಾನದ ಬಹುತೇಕ ವರ್ಷಗಳನ್ನು ಜೈಲಿನಲ್ಲಿ ಕಳೆದ ಆ ಸುಕ್ಕು ಮುಖದ ಮುದುಕನಿಗೆ ಹಾಗನ್ನಿಸುವುದರ ಹಿಂದೆ ಬದುಕಿನ ಆಧ್ಯಾತ್ಮವಿದೆ. ತಾನೇ ಕಂಡುಕೊಂಡ ತಾತ್ವಿಕತೆಯಿದೆ. ಜೈಲಿನ ಒಳಗೊಂದು ಆ</span><span style="font-size:130%;">ಪ್ತ ವಾತಾವರಣವನ್ನು ಸೃಷ್ಥಿಸಿಕೊಂಡ ಆತನಿಗೆ ಹೊರಜಗತ್ತು ಉಸಿರು ಕಟ್ಟಿಸುತ್ತದೆ. ಅಸ್ವಸ್ಥನಾಗುವಂತೆ ಮಾಡು</span><span style="font-size:130%;">ತ್ತದೆ.ಅದಕ್ಕೇ ಇರಬೇಕು ಆ ಸುಕ್ಕು ಮುಖದ ಮುಸ್ಸಂಜೆಯ</span><span style="font-size:130%;"> </span><span style="font-size:130%;">ಮುದುಕ, ಹೊರ ಜಗತ್ತಿನಲ್ಲಿ ತಾನು ವಾಸಿಸುವ ಕೋಣೆಯಲ್ಲೇ ನೇಣು ಹಾಕಿಕೊಳ್ಳುತ್ತಾನೆ..</span><br /><span style="font-size:130%;"><br />ಆತನ ಹೆಸರು ಬ್ರೂಕ್.</span><br /><span style="font-size:130%;"><br />ರೆಡ್ಡಿಂಗ್ನದ್ದೂ ಇದೇ ಸ್ಥಿತಿ. ಆತ ಬಿಡುಗಡೆಯಾಗಿ ಜೈಲಿನಿಂದ ಹೊರಕ್ಕೆ ಬಂದಾಗಲೂ ಆತನಿಗೆ ಹೊರಜಗತ್ತಿನಲ್ಲಿ ವಾಸಿಸಲು ಸಿಗುವುದು ಅದೇ ಬ್ರೂಕ್ ವಾಸ</span><span style="font-size:130%;">ಕ್ಕಿದ್ದ ರೂ</span><span style="font-size:130%;">ಮು. ಆತನಿಗೂ ಹೊರಜಗತ್ತಿನ ಸತ್ತುಹೋದ ಸುದೀರ್ಘ ಹಗಲುಗಳು ಅಕ್ಷರಶಃ ನರಳಾಡಿಸುತ್ತವೆ.<br /></span><br /><span style="font-size:130%;">1994ರಲ್ಲಿ ತೆರೆಕಂಡ "ಶ್ವಶಾಂಕ್ ರಿಡಂಪ್ಶನ್" ಸಿನಿಮಾದಲ್ಲಿ ಬರುವ ಅತಿ ಮುಖ್ಯ ಎಳೆಯಿದು.<br /><br />"ಮನಸಾರೆ" ನೋಡಿದಾಗ ಇದೇ ಎಳೆ ಭಿನ್ನ ಹಿನ್ನೆಲೆ ಪರಿಸರದೊಂದಿಗೆ ಶಂಕ್ರ</span><span style="font-size:130%;">ಪ್ಪ, </span><span style="font-size:130%;">ಡಾಲರ್ ಹಾಗೂ ನಾಯಕ ಮನೋಹರನ ಮೂಲಕ ಹೆಣೆದಂತೆ ಕಾಣುತ್ತದೆ. ನೇರಾ ನೇರ ಅದೇ ಸಿನಿಮಾದ ಸನ್ನಿವೇಶಗಳಿಲ್ಲದಿದ್ದರೂ, ಯೋಚನಾ ಲಹರಿ "ಶ್ವಶಾಂಕ್ ರಿಡಂಪ್ಶನ್"ನೊಂದಿಗೆ ತಾಳೆಯಾಗುತ್ತದೆ. ಇಷ್ಟಕ್ಕೂ ಮನಸಾರೆ ಆ ಸಿನಿಮಾದ ರಿಮೇಕೂ ಅಲ್ಲ, ಭಟ್ಟಿ ಇಳಿಸುವಿಕೆಯೂ ಅಲ್ಲ.(ಆಂಟೆನ್ ಚೆಕಾಫ್ ನ ವಾರ್ಡ್ ನಂ.6 ಕತೆ ಮನಸಾರೆಗೆ ಪ್ರೇರಣೆ ಎಂದು ಭಟ್ಟರು ಹಿಂದೆಲ್ಲೋ ಹೇಳಿದ ನೆನಪು.)</span><br /><br /><span style="font-size:130%;">ಯೋಗರಾಜ ಭಟ್ಟರ ಸಿನಿಮಾ ಅಂದರೆ ಸಾಕು ಸದ್ಯಕ್ಕಂತೂ ಎ</span><span style="font-size:130%;">ಲ್ಲರದ್ದೂ ಕಾತರದ ಕಣ್ಣು. ಮನಸಾರೆಯನ್ನು ಮಾಮೂಲಿ ಪ್ರೇಮ ಕತೆಯೇ. ಅದರ ಜೊತೆಗೆ "ಯಾರ ತ</span><span style="font-size:130%;">ಲೆ ರಿ</span><span style="font-size:130%;">ಪೇರಿ ಮಾಡಕ್ಕಗಲ್ವೋ ಅವ್ರು ಹೊರಗಿರ್ತಾರೆ..ರಿಪೇರಿಯಾಗೋ ಮಂದಿ ಈ ಹುಚ್ಚಾಸ್ಪತ್ರೇಲಿ ಇರ್ತಾರೆ" ಎನ್ನುವ ಶಂಕ್ರಪ್ಪನ ಮಾತಿದೆ. ಅದೇ ಸಿನಿಮಾದ ಮೂಲ. ಮುಂಗಾರು ಮಳೆ, ಗಾಳಿಪಟದಂತೆ ಇಲ್ಲೂ ನಾಯಕ ಪಟಪಟ ಮಾತಾಡುತ್ತಾನೆ. ಅವನ ಮಾತಿಗೆ ಮರುಳಾಗುವ ನಾಯಕಿ</span><span style="font-size:130%;"> ಇದ್ದಾಳೆ. ಚೆಂದದ ಸಾಹಿತ್ಯವಿರುವ ಹಾಡುಗಳಿವೆ. ಸ</span><span style="font-size:130%;">ತ್ಯ ಹೆಗಡೆಯ ಕ್ಯಾಮೆರಾ ಕಣ್ಣಿದೆ. ಒಂದು ಯಶಸ್ವಿ ವ್ಯಾಪಾರಿ ಸಿನಿಮಾಕ್ಕೆ ಬೇಕಾದ ಎ</span><span style="font-size:130%;">ಲ್ಲಾ ಅಂಶಗಳು ಇಲ್ಲಿವೆ</span><span style="font-size:130%;">.<br /><br /></span><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEg_cl3Rqp1VyhzkIBeknJw-stffCMe1vtHMAt954y8BAfrH1BTyMsXknaGG95oN7ybz7rpE9I5NyIB-8wB0FyvgP6mvzkgSLDCNja_rhpOvOipPllKqXO_AaIE9SaMBfmIWtIKkP3Cq3sDz/s1600-h/manasaare2.jpg"><img style="margin: 0px auto 10px; display: block; text-align: center; cursor: pointer; width: 252px; height: 400px;" src="https://blogger.googleusercontent.com/img/b/R29vZ2xl/AVvXsEg_cl3Rqp1VyhzkIBeknJw-stffCMe1vtHMAt954y8BAfrH1BTyMsXknaGG95oN7ybz7rpE9I5NyIB-8wB0FyvgP6mvzkgSLDCNja_rhpOvOipPllKqXO_AaIE9SaMBfmIWtIKkP3Cq3sDz/s400/manasaare2.jpg" alt="" id="BLOGGER_PHOTO_ID_5387098533234983698" border="0" /></a><br /><span style="font-size:130%;">ಆದರೂ ಭಟ್ಟರು "ಮನಸಾರೆ"ಯಲ್ಲಿ ಮುಂಗಾರು ಮಳೆ, ಗಾಳಿಪಟದ ಏಕತಾನತೆಯನ್ನು ಮೀರುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೇಮ ಕತೆಯೊಳಗೇ " ಕಿತ್ತೋಗಿರೋ ಹವಾಯಿ ಚಪ್ಪಲಿ ತರಹಾ ಆಗೋಯ್ತು, ಬದುಕು" ಎನ್ನುತ್ತಾ <span style="font-size:85%;"><span style="font-size:130%;">ಅಂತರ್ಮುಖಿ</span></span></span><span style="font-size:130%;">ಯಾಗುತ್ತಾರೆ...ಈ ಅಂತರ್ಮುಖಿ ನಡೆ ಅ</span><span style="font-size:130%;">ವರ ಹಿಂ</span><span style="font-size:130%;">ದಿನ ಸಿನಿಮಾಗಳಲ್ಲಿ ಬದುಕಿನ ಅಸಾಧ್ಯ ಹುಚ್ಚುತನಗಳನ್ನು ತೋರಿಸುವ ಭರದಲ್ಲಿ ಮರೆಯಲ್ಲಿತ್ತು...ಬದುಕಿನ ಸಾಮಾನ್ಯ ಅಂಶಗಳಲ್ಲೂ ಮನೆಮಾಡಿರುವ ತಾತ್ವಿಕತೆ ಬಗ್ಗೆ ಅವರಿಗೆ ಹೆಚ್ಚು ಮೋಹ. ಇದೇ ಮೋಹ ಅವರನ್ನು ಅಂತರ್ಮುಖಿಯಾಗುವಂತೆ ಮಾಡುತ್ತದೆ..<br /></span><br /><span style="font-size:130%;">ಯೋಗರಾಜ್ ಭಟ್ ನಿರ್ದೇಶನದ ಒಳ್ಳೆಯ ಚಿತ್ರ ಯಾವುದು?....ಸದ್ಯಕ್ಕೆ ನನ್ನ ಉತ್ತರ ಒಂದೇ-"ಮಣಿ". ತನ್ನ ಮೊದಲ ಪ್ರಯತ್ನದಲ್ಲಿ ಅವರು ಕತೆಯನ್ನು ನಿಭಾಯಿಸಿದ ರೀತಿ, ಪಾತ್ರಗಳನ್ನು ತೆರೆಯ ಮೇಲೆ ತೋರಿಸಿದ ರೀತಿ ಎಲ್ಲವೂ ಗಮನ ಸೆಳೆದಿದ್ದವು. ಮಣಿಯ ನಾಯಕನಿ</span><span style="font-size:130%;">ಗೆ ನಮ್ಮೊಂದಿಗೆ ಅನೇಕ ಸಾಮ್ಯತೆಗಳಿದ್ದವು. ಮುಂಗಾರು ಮಳೆಯ ಪ್ರೀತುನಂತೆ, ಗಾಳಿಪಟದ ಗಣಿಯಂತೆ, ರಂಗ ಎಸ್ಸೆಸ್ಸೆಲ್ಸಿಯ</span><span style="font-size:130%;"> ರಂಗನಂತೆ ಆತನಿಗೆ ವಿಪರೀತ ಮಾತಿನ ಚಟವಿರಲಿಲ್ಲ. ಸೈಕಲ್ ಜೊತೆಗೆ ನಡೆಯೋದು, ಸಮುದ್ರದ ದಂಡೆಯಲ್ಲಿ ಪರಿತಪಿಸಿದವನಂತೆ ಓಡುವುದರಲ್ಲೇ ಅವನಿಗೆ ಸುಖ. ಪ್ರೀತಿಯ ನಿವೇದನೆ ಆತನಿಗೆ ನಿಜಕ್ಕೂ ಬಿಸಿ ಕೆಂ</span><span style="font-size:130%;">ಡ. ಭಟ್ಟರ ಉಳಿದ ಸಿನಿಮಾಗಳ ನಾಯಕನಂತೆ "ನಿಮ್ಮೇಲೆ ಯದ್ವಾ-ತದ್ವಾ ಲವ್ವಾಗ್ಬಿಟ್ಟಿದೆ" ಅಂತ ಭೇಟಿಯಾದ ಕೆಲವೇ ದಿನಗಳಲ್ಲಿ ಉಸುರುತ್ತಿರಲಿಲ್ಲ ಆತ. ನಾಯಕನ ಮೌನವೇ ಪ್ರೇಕ್ಷಕನನ್ನು ಅಸಾಧ್ಯವಾಗಿ ಕಾಡಿಸುವ ಶಕ್ತಿ ಹೊಂದಿತ್ತು. ಮನೆಮಂದಿ ಕೂತು ನೋಡುವಾಗ</span><span style="font-size:130%;"> ಮುಜುಗರವಾಗುವ ಕೆಲವಾರು ಡೈಲಾ</span><span style="font-size:130%;">ಗ್ಗಳಿವೆ ಅನ್ನುವುದನ್ನು ಬಿಟ್ಟರೆ ಸಿನಿಮಾವೇನೋ ಚೆನ್ನಾಗಿತ್ತು. ಅವತ್ತು "ಮಣಿ" ಯಶಸ್ವಿಯಾಗಿದ್ದರೆ "ಮುಂಗಾರು ಮಳೆ" ಖಂಡಿತಾ ಬರುತ್ತಿರಲಿಲ್ಲ. ಆ ಸಿನಿಮಾ ಗೆದ್ದಿದ್ದರೆ ಭಟ್ಟರು ಯಾವ ರೀತಿಯ ಸಿನಿಮಾ ಮಾಡುತ್ತಿದ್ದರು ಎನ್ನುವ ಕೂತೂಹಲ ನನಗಿವತ್ತಿಗೂ ಇದೆ.<br /></span><br /><span style="font-size:130%;">ನಿರ್ದೇಶನನೊಬ್ಬನ ಸಿನಿಮಾವೊಂದರ ಯಶಸ್ಸು, ಆತನ </span><span style="font-size:130%;">ಮುಂದಿನ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರವನ್ನು ಹುಟ್ಟುಹಾಕುತ್ತದೆ. ಜೊತೆಗೆ ಆತ ಪ್ರತೀ ಚಿತ್ರದಲ್ಲೂ ಬೆಳೆಯುತ್ತಾ ಹೋಗುವ ಪ್ರಕ್ರಿಯೆಯನ್ನು ನಾವು ಕಾಣಬಹುದು. ಅದು ಕತೆ ಹೇಳುವ ಶೈಲಿ ಇರಬಹುದು, ಸನ್ನಿವೇಶಗಳಿಗೆ ಬಳಸುವ ಚಿತ್ರಿಕೆಗಳು, ಅವುಗಳ ವಿನ್ಯಾಸ, ಸನ್ನಿವೇಶವನ್ನು ದೃಶ್ಯವಾಗಿ ಕಟ್ಟುವ ಬಗೆ ಹೀಗೆ ಎಲ್ಲಾ </span><span style="font-size:130%;">ಹಂತದಲ್ಲೂ ಬೆಳವಣಿಗೆಯನ್ನು ಪ್ರೇಕ್ಷಕ </span><span style="font-size:130%;">ಕಂಡುಕೊಳ್ಳುತ್ತಾನೆ...."ಮುಂಗಾರು ಮಳೆ"ಯ ಯಶ</span><span style="font-size:130%;">ಸ್ಸಿನ ನಂತರ "ಗಾಳಿಪಟ" ಬಂದಾಗ ಭಟ್ಟರು ತಮ್ಮದೇ ಫಾರ್ಮುಲಾಗಳನ್ನು ಮೀರಿ ಬೆಳೆಯುತ್ತಿಲ್ಲ ಅಂತ ಅನ್ನಿಸಿದ್ದಂತೂ ನಿಜ. ಅದಾಗಲೇ ಭಟ್ಟರು ಸಿನಿಮಾ ನಿರ್ಮಾಣ ಪ್ರಕ್ರಿಯೆಯಲ್ಲಿ ತಮ್ಮದೇ ಆದ "ಕಂಫರ್ಟ್ ಜೋನ್" ಒಂದನ್ನು ನಿರ್ಮಿಸಿಕೊಂಡಂತಿತ್ತು. ಅದನ್ನು ಮೀರುವ ಹಂತದ ಪ್ರಾ</span><span style="font-size:130%;">ರಂಭವಾಗಿ "ಮನಸಾರೆ" ಕಾಣಿಸುತ್ತದೆ.<br /><br /></span><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiGxE4D3dGD4fnP5hAA3En0gIIuH2zX8QCvxlViKgfh3gefPHGyInNVs3poGjTvR6-rRZjrSp2Df_04KcSkBUR08_PvAiPUbGnXytiIFE5azWD5bkXJvluy1CoYkecUYNCgWg9_y7xh0mQN/s1600-h/yog2.jpg"><img style="margin: 0px auto 10px; display: block; text-align: center; cursor: pointer; width: 264px; height: 350px;" src="https://blogger.googleusercontent.com/img/b/R29vZ2xl/AVvXsEiGxE4D3dGD4fnP5hAA3En0gIIuH2zX8QCvxlViKgfh3gefPHGyInNVs3poGjTvR6-rRZjrSp2Df_04KcSkBUR08_PvAiPUbGnXytiIFE5azWD5bkXJvluy1CoYkecUYNCgWg9_y7xh0mQN/s400/yog2.jpg" alt="" id="BLOGGER_PHOTO_ID_5387096717289366514" border="0" /></a><br /><span style="font-size:130%;">ಅವರ </span><span style="font-size:130%;">ಹಿಂದಿನ</span><span style="font-size:130%;"> ಸಿನಿಮಾಗಳಲ್ಲಿ ನಾಯಕನೊಂದಿಗೆ ಪೈಪೋಟಿಗೆ ಬಿದ್ದು ವಟಗುಟ್ಟುತ್ತಿದ್ದ ನಾಯಕಿ ಇಲ್ಲಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಆಕೆಯ ಪ್ರವೇಶವೇ ಬಹ</span><span style="font-size:130%;">ಳ ತಡವಾಗಿ ಆಗುತ್ತದೆ. ಜೊತೆಗೆ ಆಕೆ ಮಾತನಾಡುವ ಮಾತುಗಳು ಸಹ ಎಣಿಸಬಹುದಷ್ಟಿವೆ. ಶಂಕರಪ್ಪನ ಮೂಲಕ ಧಾರವಾಡ ಕನ್ನಡವನ್ನು ಸತ್ವಪೂರ್ಣವಾಗಿ ಹೇಳಿಸಿದ್ದಾರೆ ಯೋಗರಾಜ್ ಭಟ್. ಬಹುತೇಕ ವ್ಯಾಪಾರಿ ಚಿತ್ರಗಳಲ್ಲಿ</span><span style="font-size:130%;"> ಮಂ</span><span style="font-size:130%;">ಗ್ಳೂರು, ಉತ್ತರ ಕರ್ನಾಟಕದ ಕನ್ನಡ ಗೇಲಿ ಮಾಡಲು ಬಳಕೆಯಾದದ್ದೇ ಹೆಚ್ಚು. "ಎಂಥದು ಮಾರ್ರೆ", "ಲೇ ಮಂಗ್ಯಾ" ಗಿಂತ</span><span style="font-size:130%;"> ಮುಂದೆ ಮುಂದೆ ಹೋದ ಉದಾಹರಣೆ ಇಲ್ಲ.<br /><span style="font-weight: bold;">"ಹಾಳಾಗ್ ಹೋಗು. ನಡುರಾತ್ರೀಲಿ ದೆವ್ ಡ್ಯಾನ್ಸ್ ಮಾಡೂ ವೇಳೆ ಈ ಮಂಗ್ಯಾನಾ ಲವ್ ಸ್ಟೋರಿ ಕೇಳಿ ಬರೂ ಉಚ್ವಿ ಬರ್ಲಂಗದಾತು. ಈ ಕಡೀ ಸಲೀಮ. ಆ ಕಡೀ ಅನಾರ್ಕಲಿ. ಮುಘಲೇ ಆಜಂ ಸೆಕೆಂಡ್ ಶೋ ಇಂಟರ್ವಲ್ ಬಿಟ್ಟಂಗಾತು"</span> ಎಂದು ಶಂಕ್ರಪ್ಪ ಪಾತ್ರಧಾರಿ ರಾಜು ತಾಳಿಕೋಟೆ ಸಂ</span><span style="font-size:130%;">ಭಾಷಣೆ ಹೇಳುವಾಗ ಥಿಯೇಟರ್ ಭರ್ತಿ ಸೀಟಿ. ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ವಿಪರೀತವೆಂಬಷ್ಟು ಒಂದೇ ಶೇಡ್ ಇರುವ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರತಿಭಾವಂತ ಪೋಷಕ ನಟ ರಂಗಾಯಣ ರಘು ಅವರನ್ನು ನೋಡಿ ಸುಸ್ತಾಗಿರುವವರಿಗೆ ರಾಜು ತಾಳಿಕೋಟೆ ಧಾರವಾಡ ಪೇ</span><span style="font-size:130%;">ಡಾದಷ್ಟೇ ಸಿಹಿ. ಸಂಭಾಷಣೆಯಲ್ಲಿ ಭಟ್ಟರಿ</span><span style="font-size:130%;">ಗೆ ಫುಲ್ ಮಾರ್ಕ್ಸ್. ಅದೇ ಕಾಲೆಳೆತ, ಚ್ಯಾಷ್ಟಿ ಎಲ್ಲವೂ ಇದೆ.<br /><br /></span><span style="font-size:130%;">ಬಟ್ಟೆ ಕಂಡ್ರೆ ಮಾರುದೂರ ಓಡುವ ಪಾತ್ರವೊಂದಿದೆ. ಅವನ ಒದ್ದಾಟ, ಗುದ್ದಾಟನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು.. ಆತ "ಬಟ್ಟೆ ಬೇಡ" ಎನ್ನುತ್ತಾ ಓಡಾಡುತ್ತಿದ್ದರೆ</span><span style="font-size:130%;"> ನಗು ನಡೆಯುವುದಿಲ್ಲ. ನಾಯಕನ ಚಿರವಿರಹಿ ಗೆಳೆಯನ ಪಾತ್ರಕ್ಕೆ "ಅಯ್ಯೋ...ಅಯ್ಯೋ" ಎನ್ನುವ ಕೋರಸ್ ಕೊಡುತ್ತಾ ಭರಪೂರ್ತಿ ನಗಿಸುತ್ತಾರೆ ಭಟ್ಟರು.<br /></span><br /><span style="font-size:130%;">ಸತ್ಯ ಹೆಗಡೆಯ ಕ್ಯಾಮರಾ ಕಣ್ಣಿಗೊಂದು ನಮಸ್ಕಾರ ಹೇಳಲೇಬೇಕು. "ದುನಿಯಾ", "ಇಂತಿ ನಿನ್ನ ಪ್ರೀತಿಯ.." ಸಿನಿಮಾದ ಚಿತ್ರಿಕೆಗಳಲ್ಲಿ ಬೆಳಕಿನ ಬಳಕೆಯ ಪ್ರಮಾಣ, ಅದನ್ನು ಕಾರ್ಯಗತಗೊಳಿಸುವಲ್ಲಿ ಅವರ ಚಾಕಚಕ್ಯತೆ ಎದ್ದುಕಾಣುತ್ತಿತ್ತು. "ಮನಸಾರೆ"ಯಲ್ಲೂ ಕೆಲವೊಂದು ಕಡೆ, ವಿಶೇಷವಾಗಿ ಹಾಡುಗಳಲ್ಲಿ ಸತ್ಯ ಹೆಗಡೆಯ ಕ್ರಿಯಾಶೀಲ ಮನಸ್ಸು ಹೆಚ್ಚಿದೆ. ಪವನ್ ಕುಮಾರ್ ಬರೆದ ಚಿತ್ರಕತೆ ದ್ವಿತೀಯಾರ್ಧದಲ್ಲಿ ಮತ್ತಷ್ಟು ಬಿಗಿಯಾಗಬೇಕಿತ್ತು.<br /><br /></span><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgJJkdteVQNRDfx37SaC1234J76oYQuYSFBuXU1jyAkzcuS9H7kyj-oiPvYpCDkq0hGO7qyBW81gR3281O4lpbGK5qw0a0PlE56Fc0Ldmyb9cT3RiQSQZFzo2amRWG5072SKAfGKx9DBP4g/s1600-h/manasare+imp.jpg"><img style="margin: 0px auto 10px; display: block; text-align: center; cursor: pointer; width: 306px; height: 400px;" src="https://blogger.googleusercontent.com/img/b/R29vZ2xl/AVvXsEgJJkdteVQNRDfx37SaC1234J76oYQuYSFBuXU1jyAkzcuS9H7kyj-oiPvYpCDkq0hGO7qyBW81gR3281O4lpbGK5qw0a0PlE56Fc0Ldmyb9cT3RiQSQZFzo2amRWG5072SKAfGKx9DBP4g/s400/manasare+imp.jpg" alt="" id="BLOGGER_PHOTO_ID_5387096270457224370" border="0" /></a><br /><span style="font-size:130%;">ದಿಗಂತ್ ಅಭಿನಯ ಸುಮಾರು. ಮೊದಲ ಬಾರಿಗೆ ಸೋಲೋ ಹೀರೋ ಆಗುತ್ತಿರುವ ಆತಂಕ ಅವರ ಮುಖದಲ್ಲಿ ಕಾಣುತ್ತದೆ!!! ದ್ವಿತೀಯಾರ್ಧದಲ್ಲಿ ತನ್ನ ಅಭಿನಯದ ಮೂಲಕ ಇಡೀ ಕಥೆಯ ಗಂಭೀರತೆಯನ್ನು ಮುಟ್ಟಿಸುವ ಜವಾಬ್ದಾರಿಯನ್ನು ಆತ ಸರಿಯಾಗಿ ನಿರ್ವಹಿಸುವುದಿಲ್ಲ. ಕತ್ರಿನಾ ಕೈಫ್ ಅಭಿನಯಿಸಬೇಕು ಎಂದು ಹೇಳುವುದು ಹಳಸಲು ಸ್ಟೇಟ್ಮೆಂಟು. ಐಂದ್ರಿತಾ ರೇಗೂ ಇದು ಅನ್ವಯವಾಗುತ್ತದೆ..ತೆರೆ ಮೇಲಿರುವ ಮುದ್ದಾದ ದಸರಾ ಗೊಂಬೆಗಳವು...ನೋಡೋದಕ್ಕಷ್ಟೇ ಚೆಂದ!<br /><br />ಜಯಂತ್ ಕಾಯ್ಕಿಣಿ ಪ್ರೇಮ ನಿವೇದನೆಗಳನ್ನೇ ಬರೆದು ಬರೆದು ಬರಿದಾಗುತ್ತಿರುವುದಕ್ಕೆ ಸ್ಷಷ್ಟ ಸೂಚನೆ ಸೋನು ನಿಗಂ ಹಾಡಿರುವ ಆಲ್ಬಂ "ನೀನೇ ನೀನೇ". ಅದರ ಮುಂದುವರಿದ ಭಾಗ "ಮನಸಾರೆ. ಅದೇ ಮಳೆ, ಅದೇ ಮೌನ, ಅದೇ ಮಾತು, ಅದೇ ಒಲವು......"ಮುಂಗಾರು ಮಳೆ" ಸಮಯದಲ್ಲಿ ಜನಸಾಮಾನ್ಯನಿಗೆ ರೋಮಾಂಚನ ಹುಟ್ಟಿಸಿದ್ದ ಶಬ್ದಗಳೆಲ್ಲ ಇವತ್ತು ಹಳೆ ಪಾತ್ರೆ, ಹಳೆ ಕಬ್ಬಿಣದಂತಾಗಿವೆ. ಸದ್ಯಕ್ಕೆ ಕಾಯ್ಕಿಣಿಗೊಂದು ಬ್ರೇಕ್ ಬೇಕಾಗಿದೆ. ಯೋಗರಾಜ್ ಭಟ್ ಬರೆದಿರುವ " ನಾ ನಗುವ ಮೊದಲೇನೇ", "ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ" ಕಿವಿಗಿಂಪು, ಸಾಹಿತ್ಯದ ಕಂಪು. ತಮ್ಮದೇ ಹಳೆಯ ಹಾಡುಗಳನ್ನು ಮತ್ತೆ ಬಳಸಿಕೊಂಡಂತೆ ಅನಿಸುತ್ತದೆ ಎನ್ನುವುದು ಮನೋಮೂರ್ತಿ ಮೇಲಿರುವ ಹಳೆಯ ಆರೋಪ. ಮೆಲೋಡಿಯ ಏಕತಾನತೆಯನ್ನು ಅವರಿಲ್ಲಿ ಯಶಸ್ವಿಯಾಗಿ ಮುಂದುವರಿಸುತ್ತಾರೆ .<br /><br />ಮಳೆಯ ಸುದ್ದಿಗೆ ಹೋಗದೆ ಉತ್ತರ ಕರ್ನಾಟಕದ ಬಿಸಿಲನ್ನು ತಬ್ಬಿಕೊಂಡಿದ್ದಾರೆ ಭಟ್ಟರು...<br />ಅದಕ್ಕೇ ಇರಬೇಕು ಕಾಯ್ಕಿಣಿ ಬರೆದದ್ದು- "ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ"...<br /><br />ಪ್ರೀತಿಯೆಂಬ ಕೆನೆ, ಹುಚ್ಚುನತವೆಂಬ ಕಾಫಿ ಕುಡಿಯಬೇಕಿದ್ದರೆ "ಮನಸಾರೆ" ನೋಡಬೇಕಿರುವುದು ಸದ್ಯಕ್ಕಿರುವ ಅಗತ್ಯ...!!!!</span>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com13tag:blogger.com,1999:blog-4290647614806416638.post-47482923193166568992009-09-10T20:37:00.018+05:302009-09-10T21:54:20.977+05:30ದ.ರಾ. ಬೇಂದ್ರೆ ಕವನ ವಾಚಿಸುತ್ತಾರೆ ಕೇಳಿ<span style="color: rgb(102, 51, 255); font-weight: bold;font-size:180%;" >ದ</span><span style="font-size:130%;">.<span>ರಾ</span>.<span>ಬೇಂದ್ರೆ</span> <span>ಕುರಿತು</span> <span>ಗಿರೀಶ್</span> <span>ಕಾರ್ನಾಡ್</span> <span>ನಿರ್ಮಿಸಿದ</span> </span><span style="font-size:130%;">ಸಾಕ್ಷ್ಯಚಿತ್ರ</span><span style="font-size:130%;"> <span>ಇವತ್ತಿಗೂ</span> <span>ನೆನಪಾದಾಗ</span> <span>ಪುಳಕವಾಗುತ್ತದೆ</span>..<br /><br /><span>ಸಾಕ್ಷ್ಯಚಿತ್ರವೊಂದನ್ನು</span> <span>ಅದೆಷ್ಟು</span> <span>ಆತ್ಮೀಯವಾಗಿ</span> <span>ತೆರೆಯ</span> <span>ಮೇಲೆ</span> <span>ತೆರೆದಿಡಬಹುದು</span> <span>ಎನ್ನುವುದನ್ನು</span> <span>ತೋರಿಸಿಕೊಡುತ್ತದೆ</span> <span>ಅವರ</span></span> <span style="font-size:130%;"><span>ಪ್ರಯತ್ನ</span>. <span>ಕಪ್ಪು</span>-<span>ಬಿಳುಪಿನ</span> </span><span style="font-size:130%;"><span><span>ಬಣ್ಣಗಳಲ್ಲಿ</span></span> <span>ಕವಿಯ</span> <span>ಅತೀ</span> <span>ಚಿಕ್ಕ</span> <span>ವಿವರವನ್ನೂ</span> <span>ಕೂಡಾ</span> <span>ಅವರು</span> <span>ದಾಖಲಿಸುತ್ತಾರೆ</span> (<span>ಉದಾ</span>:<span> ದ</span>.<span>ರಾ</span>. <span>ಬೇಂದ್ರೆ</span></span> <span style="font-size:130%;"><span>ಯಾವಾಗಲೂ</span> <span>ತಮ್ಮ</span> <span>ಕೋಣೆಯಲ್ಲಿ</span> <span>ಪುಸ್ತಕಗಳನ್ನು</span> <span>ಹರಡಿಕೊಂಡಿರುತ್ತಿದ್ದದ್ದು</span>). <span><br /><br />ಧಾರವಾಡದ</span> <span>ಹಾದಿಗಳಲ್ಲಿ</span> <span>ಬೇಂದ್ರೆ</span> <span>ಸಾಗುತ್ತಿದ್ದರೆ</span></span> <span style="font-size:130%;"><span>ನೋಡುಗನಿಗೆ</span> <span>ರೋಮಾಂಚನ</span>. <span>ಅ</span></span><span style="font-size:130%;"><span><span>ವರ</span></span> <span>ನಡಿಗೆ</span>, <span>ಕೊಡೆ</span>, <span>ಮಳೆ</span>, <span>ಹಣ್ಣು</span> <span>ಮಾರುವವರ</span> <span>ಜೊತೆ</span> <span>ಒಡನಾಡುವ</span> <span>ರೀತಿ</span> <span>ಎಲ್ಲವನ್ನು</span> <span>ಯಾವುದೇ</span></span> <span style="font-size:130%;"><span>ಕ್ರತ್ರಿಮತೆ</span> <span>ಇಲ್ಲದೆ</span> <span>ಗಿರೀಶ್</span> <span>ಕಾರ್ನಾಡ್</span> <span>ದ್ರಶ್ಯದಲ್ಲಿ</span> <span>ದಾಖಲು</span> <span>ಮಾಡು</span></span><span style="font-size:130%;"><span><span>ತ್ತಾರೆ</span></span>.<span> ಈ</span> <span>ಸಾಕ್ಶ್ಯಚಿತ್ರದಲ್ಲಿರುವ</span> <span>ಕೆಲವೊಂದು</span> <span>ಶಾಟ್</span> <span>ಗಳು</span> <span>ವಾರೆ</span></span><span style="font-size:130%;"><span><span>ವ್ವಾ</span></span> <span>ಎನ್ನುವಂತಿವೆ</span>.<span> ಸಾಕ್ಶ್ಯಚಿತ್ರಗಳ</span> <span>ನಿರ್ಮಾಣದ</span> <span>ಬಗ್ಗೆ</span> <span>ಆಸಕ್ತಿ</span></span> <span style="font-size:130%;"><span>ಇರುವವರು</span> <span>ಇದನ್ನು</span> <span>ತಪ್ಪದೇ</span> <span>ನೋಡಬೇಕು</span>..<br /><br /></span><span style="font-size:130%;"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgNM13_yc_40S5ekuWcnomTAEyMgD-9lyU1D6JoVZpCFPE1CFnd_y8wrZSQTT4gmjMXxBkNiGTZL81HUSnWrqH19qwgWO91wcTQHizzdmmghalCf1FeL8HVneQQRZbWoVOXShEoBiCvK3oy/s1600-h/bendre.JPG"><img style="margin: 0px auto 10px; display: block; text-align: center; cursor: pointer; width: 400px; height: 312px;" src="https://blogger.googleusercontent.com/img/b/R29vZ2xl/AVvXsEgNM13_yc_40S5ekuWcnomTAEyMgD-9lyU1D6JoVZpCFPE1CFnd_y8wrZSQTT4gmjMXxBkNiGTZL81HUSnWrqH19qwgWO91wcTQHizzdmmghalCf1FeL8HVneQQRZbWoVOXShEoBiCvK3oy/s400/bendre.JPG" alt="" id="BLOGGER_PHOTO_ID_5379867693665955538" border="0" /></a><br /><br /></span><span style="font-size:130%;"><span>ಇದೆಲ್ಲಕ್ಕಿಂತ</span> <span>ಹೆಚ್ಚಾಗಿ</span> <span>ಈ</span> <span>ಸಾಕ್ಷ್ಯಚಿತ್ರದಲ್ಲಿ</span> <span>ನಮ್ಮೆಲ್ಲರನ್ನು</span> <span>ಪುಳಕಿತರನ್ನಾಗಿ</span> <span>ಮಾಡುವ</span> <span>ಅಂಶವೊಂದಿದೆ</span>. <span>ಸ್ವತಃ</span> <span>ದ</span>.<span>ರಾ</span>. <span>ಬೇಂದ್ರೆ</span> <span>ಇಲ್ಲಿ</span></span> <span style="font-size:130%;"><span>ತಮ್ಮ</span> " <span>ವಿಶ್ವಮಾತೆಯ</span> <span>ಗರ್ಭ</span> <span>ಕಮಲಜಾತ</span>..."</span><span style="font-size:130%;"><span> ಕವನ</span></span><span style="font-size:130%;"><span><span>ವನ್ನು</span></span> <span>ವಾಚನ</span> <span>ಮಾಡಿದ್ದಾರೆ</span>.<br /><br /><span>ಈಗಂತೂ</span> <span>ಕವನ</span> <span>ವಾಚನವೇ</span> <span>ಅಪರೂಪ</span>. <span>ಇಂತಹ</span> <span>ಸಂದರ್ಭದಲ್ಲಿ</span> <span>ಬೇಂದ್ರೆಯಂತಹ</span> <span>ಕವಿಯ</span> <span>ಸಾಲುಗಳನ್ನು</span> <span>ಅವರ</span> <span>ಬಾಯಲ್ಲಿ</span> <span>ಕೇಳಿ</span></span> <span style="font-size:130%;"><span>ಪಡೆದುಕೊಳ್ಳುವ</span> <span>ಸುಖಕ್ಕೆ</span> <span>ಸಾಟಿ</span> <span>ಯಾವುದಿದೆ</span> <span>ನೀವೇ</span> <span>ಹೇಳಿ</span>.<br /><br /><span style="color: rgb(102, 51, 255);">ಆ</span><span style="color: rgb(102, 51, 255);"> </span><span style="color: rgb(102, 51, 255);">ಕವನ</span><span style="color: rgb(102, 51, 255);"> </span><span style="color: rgb(102, 51, 255);">ವಾಚನದ</span><span style="color: rgb(102, 51, 255);"> </span><span style="color: rgb(102, 51, 255);">ದ್ರಶ್ಯ</span><span style="color: rgb(102, 51, 255);"> </span><span style="color: rgb(102, 51, 255);">ತುಣುಕು</span><span style="color: rgb(102, 51, 255);"> </span><span style="color: rgb(102, 51, 255);">ನಿಮಗಾಗಿ</span><span style="color: rgb(102, 51, 255);">....(</span><span style="color: rgb(102, 51, 255);">ಕೆಳಗಿನ</span><span style="color: rgb(102, 51, 255);"> </span><span style="color: rgb(102, 51, 255);">ಕೊಂಡಿ</span><span style="color: rgb(102, 51, 255);"> </span><span style="color: rgb(102, 51, 255);">ಕ್ಲಿಕ್</span><span style="color: rgb(102, 51, 255);"> </span><span style="color: rgb(102, 51, 255);">ಮಾಡಿ</span><span style="color: rgb(102, 51, 255);">)</span><br /><br /><a href="http://www.darabendre.org/movie.swf.html"><span style="font-weight: bold;"><span style="color: rgb(204, 102, 0);">// </span>ವಿಶ್ವಮಾತೆಯ</span></a></span><a href="http://www.darabendre.org/movie.swf.html"><span style="font-weight: bold;"> </span><span style="font-weight: bold;font-size:130%;" > <span>ಗರ್ಭ</span> <span>ಕಮಲಜಾತ</span> <span>ಪರಾಗ</span> <span>ಪರಮಾಣು</span> <span>ಕೀರ್ತಿ</span> <span>ನಾನು</span></span></a> <span style="color: rgb(204, 102, 0);">//</span><br /><br /><span style="font-size:100%;"><br /><span style="font-size:130%;"><br /></span></span><div style="text-align: center;"><span style="font-size:130%;"><span style="font-weight: bold;" class="style35"><strong>ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-</strong></span><br /></span><span style="font-size:130%;"><span style="font-weight: bold;" class="style35"> <strong>ಪರಮಾಣು ಕೀರ್ತಿ ನಾನು |</strong></span><br /></span><span style="font-size:130%;"><span style="font-weight: bold;" class="style35"> <strong>ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ</strong> </span><br /></span><span style="font-size:130%;"><span style="font-weight: bold;" class="style35"> <strong>ನಿಂತಂಥ ಮೂರ್ತಿ ನಾನು !</strong></span><br /><br /></span> <span style="font-weight: bold;font-size:130%;" class="style37" >೧</span><span style="font-size:130%;"><br /></span><span style="font-weight: bold;font-size:130%;" class="style37" > ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ</span><span style="font-size:130%;"><br /></span><span style="font-weight: bold;font-size:130%;" class="style37" > ಮಿನುಗುತಿಹ ಜ್ಯೋತಿ ನಾನು !</span><span style="font-size:130%;"><br /></span><span style="font-weight: bold;font-size:130%;" class="style37" > ಕನ್ನಡದ ತಾಯಿ ತಾವರೆಯ ಪರಿಮಳವುಂಡು</span><span style="font-size:130%;"><br /></span><span style="font-weight: bold;font-size:130%;" class="style37" > ಬೀರುತಿಹ ಗಾಳಿ ನಾನು !</span><span style="font-size:130%;"><br /></span><span style="font-weight: bold;font-size:130%;" class="style37" > ೨</span><span style="font-size:130%;"><br /></span><span style="font-weight: bold;font-size:130%;" class="style37" > ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ</span><span style="font-size:130%;"><br /></span><span style="font-weight: bold;font-size:130%;" class="style37" > ಜೀವಂತ ಮಮತೆ ನಾನು !</span><span style="font-size:130%;"><br /></span><span style="font-weight: bold;font-size:130%;" class="style37" > ಈ ಐದು ಐದೆಯರೆ ಪಂಚಪ್ರಾಣಗಳಾಗಿ</span><span style="font-size:130%;"><br /></span><span style="font-weight: bold;font-size:130%;" class="style37" > ಈ ಜೀವ ದೇಹನಿಹನು !</span><span style="font-size:130%;"><br /></span><span style="font-weight: bold;font-size:130%;" class="style37" > ೩</span><span style="font-size:130%;"><br /></span><span style="font-weight: bold;font-size:130%;" class="style37" > ಹೃದಯಾರವಿಂದದಲ್ಲಿರುವ ನಾರಾಯಣನೆ</span><span style="font-size:130%;"><br /></span><span style="font-weight: bold;font-size:130%;" class="style37" > ತಾನಾಗಿ ದತ್ತ ನರನು !</span><span style="font-size:130%;"><br /></span><span style="font-weight: bold;font-size:130%;" class="style37" > ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ</span><span style="font-size:130%;"><br /></span><span style="font-weight: bold;font-size:130%;" class="style37" > ಅಂಬಿಕಾತನಯನಿವನು !<br /><br /><span style="color: rgb(204, 102, 0);"><a href="http://www.darabendre.org/">http://www.darabendre.org/</a> ನಲ್ಲಿ ಸಿಕ್ಕ ದ್ರಶ್ಯ ತುಣುಕಿದು.</span><br /><br /></span></div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com5tag:blogger.com,1999:blog-4290647614806416638.post-40265948564150492832009-09-08T07:04:00.026+05:302009-09-08T07:57:34.749+05:30ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ<span style="color: rgb(102, 51, 255);font-size:130%;" ><span><span> || <span><span style="font-size:180%;"><span style="font-weight: bold;">ನಿ</span></span>ನ್ನೆಯಷ್ಟೇ</span></span></span></span><span style="font-size:130%;"><span style="color: rgb(102, 51, 255);"> 2007</span><span style="color: rgb(102, 51, 255);">ನೇ </span><span style="color: rgb(102, 51, 255);">ಸಾಲಿನ </span><span style="color: rgb(102, 51, 255);">ರಾಷ್ಟ್ರಪ್ರಶಸ್ತಿ </span><span style="color: rgb(102, 51, 255);"> </span><span style="color: rgb(102, 51, 255);">ಪ್ರಕಟವಾಗಿದೆ. </span><span style="color: rgb(102, 51, 255);">ಉಮಾಶ್ರೀ </span><span style="color: rgb(102, 51, 255);">ಅಭಿನಯಕ್ಕೆ </span><span style="color: rgb(102, 51, 255);">ರಾಷ್ಟ್ರಪ್ರಶಸ್ತಿ </span><span style="color: rgb(102, 51, 255);">ಬಂದಿದೆ. </span><span style="color: rgb(102, 51, 255);">ಕಾಸರವಳ್ಳಿಯವರ</span><span style="color: rgb(102, 51, 255);"> "ಗುಲಾಬಿ </span><span style="color: rgb(102, 51, 255);">ಟಾಕೀಸು" </span><span style="color: rgb(102, 51, 255);">ಅತ್ಯುತ್ತಮ </span><span style="color: rgb(102, 51, 255);">ಕನ್ನಡ </span><span style="color: rgb(102, 51, 255);">ಚಿತ್ರವೆಂದು </span><span style="color: rgb(102, 51, 255);">ಆಯ್ಕೆಯಾಗಿದೆ. </span><span style="color: rgb(102, 51, 255);">ಕಾಂಚೀವರಂನಲ್ಲಿನ</span><span style="color: rgb(102, 51, 255);"> </span><span style="color: rgb(102, 51, 255);">ಅಭಿನಯಕ್ಕೆ </span><span style="color: rgb(102, 51, 255);">ಪ್ರಕಾಶ್ </span><span style="color: rgb(102, 51, 255);">ರೈ </span><span style="color: rgb(102, 51, 255);">ಅತ್ಯುತ್ತಮ</span><span style="color: rgb(102, 51, 255);"> ನಟ </span><span style="color: rgb(102, 51, 255);">ಎಂದು </span><span style="color: rgb(102, 51, 255);">ಪುರಸ್ಕ್ರತರಾಗಿದ್ದಾರೆ. </span><span style="color: rgb(102, 51, 255);">ಮೂವರಿಗೂ </span><span style="color: rgb(102, 51, 255);">ಅಭಿನಂದನೆಗಳು</span><span style="color: rgb(102, 51, 255);">. ||</span><br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjvTJVi8IkaHAnB_ilq3xFIdUqXtAep5RJNYfX2LDC27_7StvdaeCYAUGtCTiKJU-37TdJLkB2GnKmH9fmignTFr5iLQbqls7SaIATiU9mIb5Ee7S6RbdhM2qdpwKm4NLG3oPSfWbD2GF4P/s1600-h/gubabi_major.jpg"><img style="margin: 0px auto 10px; display: block; text-align: center; cursor: pointer; width: 400px; height: 400px;" src="https://blogger.googleusercontent.com/img/b/R29vZ2xl/AVvXsEjvTJVi8IkaHAnB_ilq3xFIdUqXtAep5RJNYfX2LDC27_7StvdaeCYAUGtCTiKJU-37TdJLkB2GnKmH9fmignTFr5iLQbqls7SaIATiU9mIb5Ee7S6RbdhM2qdpwKm4NLG3oPSfWbD2GF4P/s400/gubabi_major.jpg" alt="" id="BLOGGER_PHOTO_ID_5378909665788775250" border="0" /></a></span><span style="font-size:130%;"><br /><span><span><span style="color: rgb(51, 102, 255); font-weight: bold;font-size:180%;" >ಅ</span>ವಳು</span></span> <span>ಕನಸಿನ</span> <span>ಗುಲಾಬಿ</span>. <span>ಪ್ರತೀ</span> <span>ದಿನ</span> <span>ಸಾಯಂಕಾಲ</span> <span>ಸಿನಿಮಾ</span> <span>ನೋಡುವ</span> <span>ಹುಚ್ಚು</span>. <span>ಆ</span> <span>ಮೂಲಕ</span> <span>ಹೊಸ</span> <span>ಕನಸುಗಳನ್ನು</span> <span>ಕಾಣುವ</span> </span><span style="font-size:130%;"><span>ಬಯಕೆ</span> <span>ಆಕೆಗೆ</span>. <span>ಆ</span> <span>ಕನಸುಗಳ</span> <span>ಮೂಲಕ</span> <span>ತನ್ನ</span> <span>ಸೀಮಿತ</span> <span>ಪರಿಧಿಯನ್ನು</span> <span>ಮೀರಿ</span> <span>ಮುನ್ನಡೆಯುವ</span> <span>ಆಸೆ</span>. <span>ಬಹುಷಃ</span> <span>ಈ</span> <span>ಅಂಶವೇ</span> <span>ಆಕೆಯನ್ನು</span> </span><span style="font-size:130%;"><span>ಪ್ರಫುಲ್ಲವಾಗಿಡುವುದು</span>.<br /><br /><span>ಆಕೆ</span> <span>ನೋಡುವ</span> <span>ಸಿನಿಮಾದ</span> <span>ಬಿಡಿಬಿಡಿ</span> <span>ಚಿತ್ರಗಳಂತೆ</span> <span>ಬದುಕೂ</span> <span>ಹರಿದು</span> <span>ಹಂಚಿಹೋಗಿದೆ</span>, <span>ಹೋಗುತ್ತಿದೆ</span>. <span>ಹೆರಿಗೆ</span> <span>ಮಾಡಿಸಿದ</span> <span>ಸಲುವಾಗಿ</span> </span><span style="font-size:130%;"><span>ಬರುವ</span> <span>ಟಿವಿ</span> <span>ಪ್ರಾರಂಭದಲ್ಲಿ</span> <span>ಅವಳಲ್ಲೊಂದು</span> <span>ಅಪೂರ್ವ</span> <span>ಘಳಿಗೆಗಳನ್ನು</span> <span>ಸೃಷ್ಠಿಸುತ್ತಾ</span> <span>ಹೋಗುತ್ತದೆ</span>. <span>ನಂತರದ</span> <span>ದಿನಗಳಲ್ಲಿ</span> <span>ಪಲ್ಲಟಗಳ</span> </span><span style="font-size:130%;"><span>ನಡುವೆ</span> <span>ಪಟಪಟಿಸುತ್ತದೆ</span>. <span>ಇದು</span> <span>ಗುಲಾಬಿ</span> <span>ಎಂಬ</span> <span>ಸೂಲಗಿತ್ತಿಯ</span> "<span>ಗುಲಾಬಿ</span> <span>ಟಾಕೀಸು</span>"....<br /><br /><span>ಕನ್ನಡ</span> <span>ಸಿನಿಮಾದ</span> <span>ಗುಲಾಬಿ</span> <span>ಉಮಾಶ್ರೀಗೆ</span> <span>ರಾಷ್ಟ್ರಪ್ರಶಸ್ತಿ</span> <span>ಬಂದಿದೆ</span>. <span>ಗಿರೀಶ್</span> <span>ಕಾಸರವಳ್ಳಿ</span> <span>ನಿರ್ದೇಶನದ</span> "<span>ಗುಲಾಬಿ</span> <span>ಟಾಕೀಸು</span>" <span>ವೈದೇಹಿ</span> <span>ಅವರ</span> <span>ಕಥೆ</span> <span>ಆಧಾರಿತ</span> <span>ಸಿನಿಮಾ</span>(<span>ಸಿನಿಮಾ</span> <span>ಮಾಧ್ಯಮಕ್ಕೆ</span> <span>ಅನುಗುಣವಾಗಿ</span> <span>ಇಲ್ಲಿ</span> <span>ಕತೆ</span> <span>ಮಾರ್ಪಾಡಾಗಿದೆ</span>). <span>ಅದರಲ್ಲಿನ</span> </span><span style="font-size:130%;"><span>ಮುಖ್ಯಪಾತ್ರವೇ</span> <span>ಗುಲಾಬಿಯದ್ದು</span>.<br /><span>ಉಮಾಶ್ರೀಯ</span> <span>ವೃತ್ತಿ</span> <span>ಜೀವನದ</span> <span>ಮೈಲಿಗಲ್ಲು</span> <span>ಗುಲಾಬಿ</span> <span>ಪಾತ್ರ</span>. <span>ಆ</span> <span>ಪಾತ್ರದ</span> <span>ಆಳ</span>-<span>ಅಗಲಗಳನ್ನು</span> <span>ತನ್ನ</span> <span>ಅಭಿನಯದಿಂದಲೇ</span> <span>ಹಿಗ್ಗಿಸಿದ್ದಾರೆ</span> </span><span style="font-size:130%;"><span>ಆಕೆ</span>. <span>ಉಮಾಶ್ರೀಯದ್ದು</span> <span>ರಂಗಭೂಮಿಯ</span> <span>ಹಿನ್ನೆಲೆ</span>. <span>ಸಿನಿಮಾ</span> <span>ರಂಗಭೂಮಿ</span> <span>ಎರಡೂ</span> <span>ಭಿನ್ನ</span> <span>ಗುಣಗಳನ್ನು</span> <span>ಹೊಂದಿರುವ</span> <span>ಮಾಧ್ಯಮಗಳು</span>.<br /><br /><span>ಬಹುಷಃ</span> <span>ರಂಗಭೂಮಿ</span> <span>ಉಮಾಶ್ರೀಯನ್ನು</span> <span>ಬಳಸಿಕೊಂಡಷ್ಟು</span> <span>ಸಶಕ್ತವಾಗಿ</span> <span>ಕನ್ನಡ</span> <span>ಸಿನಿಮಾ</span> <span>ತನ್ನ</span> <span>ಮಾಧ್ಯಮದಲ್ಲಿ</span> <span>ಬಳಸಿಕೊಂಡಿರಲಿಲ್ಲ</span>. <span>ಒಡಲಾಳ</span>, <span>ಹರಕೆಯ</span> <span>ಕುರಿ</span> <span>ನಾಟಕಗಳು</span> <span>ಆಕೆಯ</span> <span>ರಂಗಭೂಮಿಯ</span> <span>ಸಶಕ್ತ</span> <span>ಅಭಿವ್ಯಕ್ತಿಗಳು</span>. <span>ಕನ್ನಡ</span> <span>ಸಿನಿಮಾದಲ್ಲಿ</span> <span>ಉಮಾಶ್ರೀ</span> <span>ಅಂದರೆ</span> </span><span style="font-size:130%;"><span>ಸಾಕು</span> <span>ಎನ್ನೆಸ್</span> <span>ರಾವ್</span> <span>ಕಾಂಬಿನೇಶನ್ನಿನ</span> <span>ಕಿಲಕಿಲದಂತಹ</span> <span>ಪಾತ್ರದ</span> <span>ಜೊತೆಗೆ</span> <span>ಜೋತು</span> <span>ಬೀಳುವ</span> <span>ಪಾತ್ರಗಳಂತಹವೇ</span> <span>ಹೆಚ್ಚು</span> </span><span style="font-size:130%;"><span>ಕಾಣುವುದು</span>. <span>ಇದೇ</span> <span>ಅತಿರೇಕದ</span> <span>ನಟನೆಗೆ</span> <span>ಉಮಾಶ್ರೀ</span> <span>ಮುಂದಿನ</span> <span>ದಿನಗಳಲ್ಲಿ</span> <span>ಬ್ರ್ಯಾಂಡ್</span> <span>ಆಗಿದ್ದೂ</span> <span>ಉಂಟು</span>. <span>ಸಂಗ್ಯಾಬಾಳ್ಯ</span>, <span>ಮಣಿ</span> </span><span style="font-size:130%;"><span>ಸಿನಿಮಾಗಳಂತಹ</span> <span>ಬೆರಳೆಣಿಕೆಯ</span> <span>ಸಿನಿಮಾಗಳಷ್ಟೇ</span> <span>ಆಕೆಗೆ</span> <span>ವೈವಿಧ್ಯಮಯವಾದ</span> <span>ಪಾತ್ರಗಳನ್ನು</span> <span>ನೀಡಿದ್ದು</span>. <span>ಉಮಾಶ್ರೀಯ</span> <span>ಒಳಗಿದ್ದ</span> </span><span style="font-size:130%;"><span>ನಟಿ</span> <span>ಸಿನಿಮಾದಲ್ಲಿ</span> <span>ಪ್ರಖರವಾಗಿ</span> <span>ಕಾಣಿಸಿಕೊಂಡದ್ದು</span>- <span>ಕಾಸರವಳ್ಳಿಯವರ</span> <span>ಗುಲಾಬಿ</span> <span>ಟಾಕೀಸಿನಲ್ಲಿಯೇ</span>.<br /><br /><span>ಗುಲಾಬಿಯ</span> <span>ಪಾತ್ರ</span> <span>ಸಿನಿಮಾದ</span> <span>ವಿವಿಧ</span> <span>ಹಂತಗಳಲ್ಲಿ</span> <span>ಸಂಕೀರ್ಣವಾಗುತ್ತಾ</span> <span>ಹೋಗುವ</span> <span>ಪರಿ</span> <span>ಪ್ರೇಕ್ಷಕನಿಗೆ</span> <span>ದಕ್ಕುವುದಕ್ಕೆ</span> </span><span style="font-size:130%;"><span>ಸಾಧ್ಯವಾಗುವುದು</span> <span>ಉಮಾಶ್ರೀಯ</span> <span>ಅಭಿನಯದಲ್ಲಿ</span>. <span>ಅವಳಲ್ಲಿರುವ</span> <span>ಸ್ವಗತಗಳು</span>, <span>ಗಂಡನ</span> <span>ಎರಡನೇ</span> <span>ಹೆಂಡತಿಯ</span> <span>ಮಗ</span> </span><span style="font-size:130%;"><span>ಅದ್ದುವಿನೆಡೆಗಿರುವ</span> <span>ಪ್ರೀತಿ</span>, <span>ನೇತ್ರುವಿನ</span> <span>ಜೊತೆಗಿನ</span> <span>ಗೆಳೆತನ</span>, <span>ಟಿವಿ</span> <span>ಬಂದ</span> <span>ನಂತರ</span> <span>ಬದಲಾಗುವ</span> <span>ಸಂಬಂಧಗಳ</span> <span>ವ್ಯಾಪ್ತಿಯನ್ನು</span> <span>ಆಕೆ</span> </span><span style="font-size:130%;"><span>ಅರ್ಥೈಸಿಕೊಳ್ಳುವಲ್ಲಿ</span> <span>ಆಕೆ</span> <span>ಪಡುವ</span> <span>ಪಾಡನ್ನು</span>, <span>ಗುಲಾಬಿಯ</span> <span>ಸಂದಿಗ್ಧವನ್ನು</span> <span>ಉಮಾಶ್ರೀ</span> <span>ತೆರೆಮೇಲೆ</span> <span>ಬಿಚ್ಚಿಡುತ್ತಾರೆ</span>. "<span>ಮೊದಲಾದರೆ</span> </span><span style="font-size:130%;"><span>ವಾರಗಟ್ಟಲೆ</span> <span>ಸಿನಿಮಾ</span> <span>ನೋಡುತ್ತಿದ್ದೆ</span>. <span>ಬೇರೆ</span> <span>ಬೇರೆ</span> <span>ಕನಸುಗಳು</span> <span>ಬೀಳುತ್ತಿದ್ದವು</span>. <span>ಮನೆಯಲ್ಲೀಗ</span> <span>ಟಿವಿಯಿದೆ</span>. <span>ದಿನವೂ</span> <span>ಬೇರೆ</span> <span>ಬೇರೆ</span> </span><span style="font-size:130%;"><span>ಸಿನಿಮಾ</span> <span>ನೋಡುತ್ತೇನೆ</span>. <span>ಆದರೆ</span> <span>ಬೀಳುತ್ತಿರುವುದು</span> <span>ಒಂದೇ</span> <span>ಕನಸು</span>" <span>ಎನ್ನುವಾಗ</span> <span>ಉಮಾಶ್ರೀಯ</span> <span>ಮುಖದಲ್ಲಿನ</span> <span>ಒತ್ತಡ</span>, <span>ಕಣ್ಣಲ್ಲಿ</span> </span><span style="font-size:130%;"><span>ಕರಗುತ್ತಿರುವ</span> <span>ನೋವು</span> <span>ಪ್ರೇಕ್ಷಕನಿಗೆ</span> <span>ದಾಟುತ್ತದೆ</span>.<br /><br /><span>ಉಮಾಶ್ರೀಯ</span> <span>ನಟನೆಯ</span> <span>ತೀವ್ರತೆಯ</span> <span>ಸನ್ನಿವೇಶಗಳು</span> "<span>ಗುಲಾಬಿ</span> <span>ಟಾಕೀಸು</span>" <span>ಸಿನಿಮಾದ</span> <span>ಹಲವೆಡೆ</span> <span>ಕಾಣುತ್ತದೆ</span>. <span>ಉಮಾಶ್ರೀಯ</span> </span><span style="font-size:130%;"><span>ಅಭಿನಯಕ್ಕೊಂದು</span> <span>ಸಲಾಮು</span> <span>ಹೇಳಲು</span> <span>ಗುಲಾಬಿಯನ್ನು</span> <span>ಮನೆಯಿಂದ</span> <span>ಹೊರಕ್ಕೆ</span> <span>ಹಾಕುವ</span> <span>ಸನ್ನಿವೇಶವೊಂದೇ</span> <span>ಸಾಕು</span>. <span>ಆ</span> </span><span style="font-size:130%;"><span>ಸನ್ನಿವೇಶದಲ್ಲಿ</span> <span>ಗುಲಾಬಿಯ</span> <span>ಪ್ರತಿಭಟನೆಯ</span> <span>ಪರಿಯನ್ನೊಮ್ಮೆ</span> <span>ನೀವು</span> <span>ನೋಡಬೇಕು</span>. <span>ಪಾತ್ರೆಗಳನ್ನು</span> <span>ಮನೆಯಿಂದ</span> </span><span style="font-size:130%;"><span>ಹೊರಹಾಕುತ್ತಿರುವಾಗ</span> <span>ಅದನ್ನೆಲ್ಲಾ</span> <span>ಹೆಕ್ಕಿ</span> <span>ಮತ್ತೆ</span> <span>ಒಳಗಿಡಲು</span> <span>ಪ್ರಯತ್ನಿಸುವುದು</span>, <span>ಕಬ್ಬಿಣದ</span> <span>ಪೆಟ್ಟಿಗೆಯ</span> <span>ಮೇಲೆ</span> <span>ಜಗ್ಗದಂತೆ</span> <span>ಕೂರುವ</span> </span><span style="font-size:130%;"><span>ಪರಿಯನ್ನು</span> <span>ನೋಡಿದಾಗ</span> <span>ಉಮಾಶ್ರಿಯೊಳಗಿರುವ</span> <span>ಗುಲಾಬಿ</span> <span>ಅರ್ಥವಾಗುತ್ತಾ</span> <span>ಹೋಗುತ್ತಾಳೆ</span>.<br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhnrqZwC4KnFOe1e31jM3NopCUZTdMqpxm1afsna0f7DoNX3HypZmqOM6c5pboEUpaAyyM8CAtaecdwR15Bs017SmfY_naptFUIXDrbImSJ71ShbZ48riPCIlINtn3VcHA5oFJ65zimRKOz/s1600-h/girish+kasaravalli.jpg"><img style="margin: 0px auto 10px; display: block; text-align: center; cursor: pointer; width: 293px; height: 300px;" src="https://blogger.googleusercontent.com/img/b/R29vZ2xl/AVvXsEhnrqZwC4KnFOe1e31jM3NopCUZTdMqpxm1afsna0f7DoNX3HypZmqOM6c5pboEUpaAyyM8CAtaecdwR15Bs017SmfY_naptFUIXDrbImSJ71ShbZ48riPCIlINtn3VcHA5oFJ65zimRKOz/s400/girish+kasaravalli.jpg" alt="" id="BLOGGER_PHOTO_ID_5378909445950699442" border="0" /></a><br /><span>ಗುಲಾಬಿಯಂತಹ</span> <span>ಪಾತ್ರವನ್ನು</span> <span>ಉಮಾಶ್ರೀಯ</span> <span>ಮೂಲಕ</span> <span>ತೆರೆಗೆ</span> <span>ತಂದ</span> <span>ಗಿರೀಶ್</span> <span>ಕಾಸರವಳ್ಳಿಯವರಿಗೆ</span> <span>ಅಭಿನಂದನೆಗಳು</span> </span><span style="font-size:130%;"><span>ಸಲ್ಲಲೇಬೇಕು</span>.....<br /><br /><span>ಮತ್ತಷ್ಟು</span> <span>ಒಳ್ಳೆಯ</span> <span>ಗುಲಾಬಿಗಳನ್ನು</span> <span>ಉಮಾಶ್ರೀ</span> <span>ಮುಂದೆಯೂ</span> <span>ಕಟ್ಟಿಕೊಡಲಿ</span>.<br /><br /></span><div style="text-align: center;"><span style="font-weight: bold; color: rgb(102, 51, 255);font-size:130%;" ><span style="color: rgb(51, 102, 255);"> ||</span><span style="color: rgb(51, 102, 255);">ಕಾಂಚೀವರಂ</span><span style="color: rgb(51, 102, 255);"> </span><span style="color: rgb(51, 102, 255);">ಸಿನಿಮಾ</span><span style="color: rgb(51, 102, 255);"> </span><span style="color: rgb(51, 102, 255);">ಬಗ್ಗೆ</span><span style="color: rgb(51, 102, 255);"> </span><span style="color: rgb(51, 102, 255);">ಇದೇ</span><span style="color: rgb(51, 102, 255);"> </span><span style="color: rgb(51, 102, 255);">ಬ್ಲಾಗಿನಲ್ಲಿ</span><span style="color: rgb(51, 102, 255);"> </span><span style="color: rgb(51, 102, 255);">ಹಿಂದೊಮ್ಮೆ</span><span style="color: rgb(51, 102, 255);"> </span><span style="color: rgb(51, 102, 255);">ಬರೆದಿದ್ದೆ</span><span style="color: rgb(51, 102, 255);">. </span><span style="color: rgb(51, 102, 255);"><br />ಓದಿಲ್ಲವಾದಲ್ಲಿ</span><span style="color: rgb(51, 102, 255);"> </span><span style="color: rgb(51, 102, 255);">ಕೆಳಗಿನ</span><span style="color: rgb(51, 102, 255);"> </span><span style="color: rgb(51, 102, 255);">ಕೊಂಡಿ</span> <span style="color: rgb(51, 102, 255);">ಕ್ಲಿಕ್</span><span style="color: rgb(51, 102, 255);"> </span><span style="color: rgb(51, 102, 255);">ಮಾಡಿ</span><span style="color: rgb(51, 102, 255);">.</span> <span style="color: rgb(51, 102, 255);">||</span></span><br /></div><div style="text-align: center; color: rgb(153, 102, 51); font-weight: bold;"><span style="font-size:130%;"><a href="http://hejje.blogspot.com/2009/03/blog-post_15.html"> </a><br /><a href="http://hejje.blogspot.com/2009/03/blog-post_15.html">ಪ್ರೀತಿಯ ರೇಷ್ಮೆ ನೇಯುವವನ ಕಥೆ...</a></span></div>ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.com5